ಮೊಸರಿಗೆ ಸಕ್ಕರೆ ಹಾಕಿ ಕೊಡುವುದರ ಹಿಂದಿನ ಸೀಕ್ರೆಟ್ ಏನು ಗೊತ್ತಾ ಇದು ಎಲ್ಲರ ಮನೆಯಲ್ಲಿ ಇರುವಂತಹ ಒಂದು ಸಂಪ್ರದಾಯವಾಗಿದೆ ಯಾಕೆ ಏನು ಅನ್ನೋದು ಇಲ್ಲಿದೆ ನೋಡಿ.

ಮಕ್ಕಳು ಪರೀಕ್ಷೆ ಬರೆಯಲು ಅಥವಾ ಮನೆಯವರು ಯಾವುದಾದರೂ ಒಳ್ಳೆ ಕಾರ್ಯಕ್ಕೆ ಹೋಗುವಾಗ ಸ್ವಲ್ಪ ಸಿಹಿ ಬಾಯಿಗೆ ಹಾಕಿ ಕಳುಹಿಸುತ್ತಾರೆ. ಬಾಯಿಗೆ ಸಿಹಿ ಹಾಕಿದರೆ ಹೋಗುವ ಕಾರ್ಯ ಶುಭವಾಗುವುದು ಎಂಬ ನಂಬಿಕೆ ನಮ್ಮಲ್ಲಿದೆ.

ಮೊಸರಿಗೆ ಸಕ್ಕರೆ ಹಾಕಿ ಮಕ್ಕಳಿಗೆ ಕೊಟ್ಟರೆ ಅವರಿಗೆ ಪರೀಕ್ಷೆ ಸುಲಭವಾಗಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ ಈ ನಂಬಿಕೆ ಎಷ್ಟು ನಿಜ ಎನ್ನುವುದಕ್ಕಿಂತ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದೆ ಎನ್ನುವುದು ಗೊತ್ತೇ?

ಆಯುರ್ವೇದದಲ್ಲಿ ಮೊಸರು ಮತ್ತು ಸಕ್ಕರೆ ತಿನ್ನುವುದರ ಹಿಂದೆ ಒಂದು ಲಾಜಿಕ್‌ ಇದೆ. ಸಕ್ಕರೆ ಮತ್ತು ಮೊಸರು ಮಿಕ್ಸ್‌ ಮಾಡಿ ತಿನ್ನುವುದರಿಂದ ಬೇಗನೆ ಹಸಿವು ಆಗುವುದಿಲ್ಲ, ಆದ್ದರಿಂದ ಮಾಡುವ ಕೆಲಸದತ್ತ ಗಮನ ಹರಿಸಬಹುದು, ಬೇಗನೆ ಬಳಲಿಕೆ ಉಂಟಾಗುವುದಿಲ್ಲ. ಇದರಿಂದ ಮಕ್ಕಳು ಪರೀಕ್ಷೆ ಬರೆಯುವಾಗ ಯಾವುದೇ ದೈಹಿಕ ಬಳಲಿಕೆ ಉಂಟಾಗುವುದಿಲ್ಲ. ಆದ್ದರಿಂದಲೇ ಪರೀಕ್ಷೆಗೆ ಹೋಗುವ ಮುನ್ನ ಮೊಸರಿನಲ್ಲಿ ಸಕ್ಕರೆ ಹಾಕಿ ನೀಡಲಾಗುವುದು.

ರಾತ್ರಿ ಜೀರ್ಣಕ್ರೀಯೆ ಉತ್ತಮವಾಗಬೇಕಾದರೆ ಮಜ್ಜಿಗೆ ಅಥವಾ ಪುದೀನಾ ಮತ್ತು ಜೀರಿಗೆ ಸೇರಿಸಿದ ಮೊಸರು ಸೇವಿಸಬಹುದು. ಮಂತ್ಯೆ ಕಾಳುಗಳನ್ನು ಸೇರಿಸಿದರೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಯಾವುದೇ ಕಫ ಸಮಸ್ಯೆ ಇಲ್ಲದವರು ರಾತ್ರಿ ಹೊತ್ತು ಕೂಡ ಮೊಸರು ಸೇವಿಸಬಹುದು. ಇಲ್ಲವಾದರೆ ಮೊಸರಿನ ಬದಲು ಮಜ್ಜಿಗೆ ಬಳಸುವುದರಿಂದ ಜೀರ್ಣಕ್ರಿಯೆಯೂ ಉತ್ತಮವಾಗುತ್ತದೆ ಮತ್ತು ಕಫ ಸಮಸ್ಯೆಯೂ ನಿವಾರಣೆಯಾಗುತ್ತದೆ. ಧೂಳಿನ ಅಲರ್ಜಿ ಇರುವವರು ರಾತ್ರಿ ಹೊತ್ತು ಮೊಸರು ನೇರವಾಗಿ ಅಥವಾ ಬೇರೆ ಯಾವುದೇ ಖಾದ್ಯದ ರೂಪದಲ್ಲಿ ಸೇವಿಸಲೇಬಾರದು.

Leave a Reply

Your email address will not be published. Required fields are marked *