ಸುಮಾರು ರೈತರು ತಮ್ಮ ಮಕ್ಕಳು ತಮ್ಮಂತೆ ರೈತರು ಆಗಲಿ ಎಂದು ಬಯಸುವುದಿಲ್ಲ. ಅದಕ್ಕೆ ಕಾರಣ ವ್ಯವಸಾಯ ಅಂದ್ರೆ ನಷ್ಟ. ಹಗಲಿರುಳು ಕಷ್ಟಪಟ್ಟರು ಕೈಗೆ ಬಿಡಿಕಾಸು ಬರಲ್ಲ. ಜೀವನ ಉತ್ತಮವಾಗಿಲ್ಲ ಅನ್ನೋದು. ನಮ್ಮ ಮಕ್ಕಳು ಜೀವನದಲ್ಲಿ ಮುಂದೆ ಬಂದು ಇಂಜಿನಿಯರ್ ಡಾಕ್ಟರ್ ಅಥವಾ ಯಾವುದೋ ಒಂದು ದೊಡ್ಡ ಉನ್ನತ ಹುದ್ದೆಗೆ ಸೇರಬೇಕು ಎಂಬ ಆಸೆ ಅವರದಾಗಿರುತ್ತದೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಅದೇ ರೀತಿಯಾಗಿ ಯೋಚನೆ ಮಾಡುತ್ತಾರೆ ಆದರೆ ಸ್ವಲ್ಪ ವಿಭಿನ್ನ ಸಂದರ್ಭದಲ್ಲಿ ಇದು ನಡೆಯುವುದಿಲ್ಲ ಬಹಳಷ್ಟು ಜನ ತಮ್ಮ ಐಟಿ ಅಥವಾ ಇಂಜಿನಿಯರಿಂಗ್ ಕೆಲಸ ಬಿಟ್ಟು ಮತ್ತೆ ಕೃಷಿ ಹುದ್ದೆಗೆ ಮರಳಿದ್ದಾರೆ.

ಪಂಜಾಬ್ ಹಾಗೂ ಹರ್ಯಾಣ ರೈತರು ವ್ಯವಸಾಯ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಹೇಗೆ? ಇದರಲ್ಲಿ ಅಮೆರಿಕ, ನ್ಯೂಯಾರ್ಕ್, ತೈಲ ರೈತರು ಕೋಟಿ ಕೋಟಿ ಗಳಿಸಿ ದೊಡ್ಡ ಬಿಸ್ನೆಸ್‌ಮೆನ್ ಹಾಗೆ ಬದುಕುತ್ತಿದ್ದಾರೆ 70 ವರ್ಷದ ಹಿಂದೆ ಮಾಡುತ್ತಿದ್ದ ಪದ್ಧತಿಯನ್ನೇ ಮಾಡುತ್ತ ಅದೇ ವಿಧಾನ ಬಳಸುತ್ತ ಅಲ್ಲೇ ಉಳಿದುಕೊಂಡು ಬಿಟ್ಟಿದ್ದೇವೆ. ಹಿಂದಿನ ಕಾಲದಲ್ಲಿ ಕುದುರೆ ಎತ್ತಿನ ಗಾಡಿಯಲ್ಲಿ ಪ್ರಯಾಣ ಮಾಡ್ತಿದ್ವಿ. ಈಗ ಬಸ್ಸು, ಕಾರು ವಿಮಾನದಲ್ಲಿ. ಹಾಗಾಗಿ ಹೊಸ ಪದ್ಧತಿಗೆ ಹೊಂದಿಕೊಳ್ಳಬೇಕು.ಅಲ್ಲವೆ? ಲಕ್ಷಲಕ್ಷ ಬರುತ್ತಿದ್ದ ಕೆಲಸ ಬಿಟ್ಟು ಈ ಹುಡುಗಿ ವ್ಯವಸಾಯ ಮಾಡುತ್ತ ಹೇಗೆ ಯಶಸ್ಸು ಕಂಡಿದ್ದಾರೆ ಗೊತ್ತ? ಇವರ ಹೆಸರು ವಲ್ಲಾರಿ ಚಂದ್ರಕರ್ ಛತ್ತೀಸ್ ಗಡ ರಾಜ್ಯದವರು.

ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ ಟೆಕ್ ಮಾಡಿದವರಿಗೆ ಲಕ್ಷ ಲಕ್ಷ ಸಂಬಳ ಕೊಡುವ ಕೆಲಸ ಸಿಕ್ಕಿತು. ಆದರೆ ಅದು ಇಷ್ಟ ಇಲ್ಲದೆ ಒಂದಷ್ಟು ತಿಂಗಳು ಕಾಲೇಜ್ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದರು. ರಾಯ್ ಪುರ್ ನಿಂದ ಆಗಾಗ ತಮ್ಮಲ್ಲಿಗೆ ಬರುತ್ತಿದ್ದ ವಲ್ಲಾರಿ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಆಗ ತಂದೆಯ ಬಳಿ ನನಗೆ ಒಂದಷ್ಟು ಜಮೀನು ಖರೀದಿ ಮಾಡಿ ಕೊಡಿ. ನಾನು ವ್ಯವಸಾಯ ಮಾಡುತ್ತೇನೆ ಎಂದು ಹೇಳಿದರು. ವಲ್ಲಾರಿ ಆಗ ಅಲ್ಲಿನ ಜನ ಈ ಹುಡುಗಿ ಓದಿರುವ ಅನಕ್ಷರಸ್ತ ಎಂದು ಗೇಲಿ ಮಾಡಿದರು. ಆದರೆ ಮಗಳ ಆಸೆಯಂತೆ 15 ಎಕರೆ ಜಮೀನನ್ನು ಖರೀದಿ ಮಾಡಿ ಕೊಟ್ಟರು.

ವಲ್ಲಾರಿ ತಂದೆ ಆಗ ಒಂದಷ್ಟು ವ್ಯವಸ್ಥಿತ ಸ್ಕೆಚ್ ಹಾಕಿದ್ದ ಈ ಹುಡುಗಿ ರೈತರು ನಷ್ಟ ಅನುಭವಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಯಿಂದ ಆಚೆ ಬಂದು ಹೊಸ ಪದ್ಧತಿಯಲ್ಲಿ ವ್ಯವಸಾಯ ಮಾಡಬೇಕು ಎಂದು ನಿರ್ಧರಿಸಿದರು ಆಗ ಆಧುನಿಕ ವ್ಯವಸಾಯ ಪದ್ಧತಿಯ ಬಗ್ಗೆ ಒಂದಷ್ಟು ರಿಸರ್ಚ್ ಮಾಡಿದ್ದ ವಲ್ಲಾರಿ ಮಾಡುತ್ತಿದ್ದ ಅಡ್ವಾನ್ಸ್ ಕೃಷಿ ಪದ್ಧತಿಯ ಬಗ್ಗೆ ಇಂಟರ್‌ನೆಟ್‌ನಲ್ಲಿ ನೋಡಿ ಅದೇ ಪದ್ಧತಿಯಲ್ಲಿ ವ್ಯವಸಾಯ ಮಾಡಲು ಪ್ರಾರಂಭ ಮಾಡಿದರು. ಎಲ್ಲಿ ಪ್ರಯತ್ನ ಇರುತ್ತದೋ ಅಲ್ಲಿ ಫಲ ಇದ್ದೇ ಇರುತ್ತದೆ ಅಲ್ಲವೇ? ಮೊದಲು ಒಂದೆರಡು ತಿಂಗಳು ವಲ್ಲಾರಿಗೆ ಕಷ್ಟ ಆಯಿತು ನಂತರ ಲಯ ಕಂಡುಕೊಂಡರು. ನಂತರ ಅಡ್ವಾನ್ಸ್ ಪದ್ಧತಿಯಲ್ಲಿ ಬೀನ್ಸ್, ಟೊಮೆಟೋ, ಹಾಗಲಕಾಯಿ, ಕ್ಯಾಪ್ಸಿಕಂ, ಮೆಣಸಿನಕಾಯಿ ಬೆಳೆಯಲು ಮುಂದಾಗಿದಲ್ಲಿ ಸಕತ್ ಸಕ್ಸಸ್ ಕಂಡರು ಈಗ ಬಂಪರ್ ಇಳುವರಿ ತೆಗೆಯುತ್ತಿರುವ ವಲ್ಲಾರಿ, ಅವುಗಳನ್ನು ಡೆಲ್ಲಿ ಬೆಂಗಳೂರು, ನಾಗ್ಪುರ, ಭೂಪಾಲ್ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *