ನಮಸ್ಕಾರ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮನೆ ಮನೆಗೂ ಹೋಗಿ ಕುಕ್ಕರ ಹಂಚುವ ಕೆಲಸ ಮಾಡಿದ್ದರು ಅದೇ ರೀತಿಯಾಗಿ ಈ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ನ ಈಗಿನ ಶಾಸಕರಾಗಿರುವ ಆಗಿನ ಅಭ್ಯರ್ಥಿಗಳಾಗಿರುವ ಬಾಲಕೃಷ್ಣ ಕೂಡ ಮನೆಮನೆಗೆ ಕುಕ್ಕರ್ ಹಚ್ಚುವ ಕೆಲಸ ಮಾಡಿದ್ದರು ಇದೀಗ ಅದೇ ಕುಕ್ಕರ್ ಸ್ಪೋಟಗೊಂಡು ಯುವತಿ ಒಬ್ಬರಿಗೆ ಗಾಯವಾಗಿದೆ ಅದು ಸಾಧಾರಣವಾದ ಗಾಯ ಅಲ್ಲ ಮುಖ ಎಲ್ಲವೂ ಅರ್ಧಕ್ಕೆ ಅರ್ಧ ಸುಟ್ಟು ಹೋಗುವ ಸ್ಥಿತಿಯಾಗಿದೆ.

ಒಂದು ರೀತಿಯಲ್ಲಿ ಗಂಭೀರ ಗಾಯ ಅಂದರೂ ಕೂಡಾ ತಪ್ಪಾಗುವುದಿಲ್ಲ ಅದು ನಡೆದಿದ್ದು ರಾಮನಗರ ತಾಲೂಕಿನ ಹಳ್ಳಿಯಲ್ಲಿ ಈ ಭಾಗದಲ್ಲಿ 22 ವರ್ಷದ ಮಹಾಲಕ್ಷ್ಮಿ ಅವರಿಗೆ ಗಂಭೀರ ಗಾಯವಾಗಿದೆ ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವುದಕ್ಕೆ ಅಂತ ಎಲ್ಲವನ್ನು ಸ್ಟೋವ್ ಮೇಲೆ ಇಟ್ಟು ಹೋಗಿದ್ದರೂ ಇದ್ದಕ್ಕಿದ್ದ ಹಾಗೆ ಆ ಕುಕ್ಕರ್ ಸ್ಪೋಟ ಗೊಳ್ಳುತ್ತದೆ ಅದರ ಪಕ್ಕದಲ್ಲಿದ್ದ ಮಹಾಲಕ್ಷ್ಮಿ ಅವರ ಮುಖಕ್ಕೆ ಎರಚುತ್ತದೆ ಗಂಭೀರವಾದ ಗಾಯವಾಗುತ್ತದೆ ಎಲ್ಲವೂ ಬಹಳ ಚೆನ್ನಾಗಿದೆ ಅಂತ ಮನೆಗೆ ಹಂಚಿಹೋದರೆ ಈ ರೀತಿಯಾಗಿ ಪ್ರಾಣವನ್ನು ಕಳೆದುಕೊಳ್ಳುವುದಕ್ಕೆ ನಾವು ಹೋಗುತ್ತಿದ್ದೇವೆ.

ನಿಮ್ಮ ಹೆಂಡತಿ ಮಕ್ಕಳಿಗೆ ತೆಗೆದು ಕೊಂಡು ಹೋಗಿ ಕೊಡಿ ಇದರಲ್ಲಿ ಅಡುಗೆ ಮಾಡಿಸಿ ಅಂತ ಮಾತನ್ನು ಹೇಳುತ್ತಾ ಇದ್ದಾರೆ. ಇದೇ ಕೆಲಸ ಚುನಾವಣೆಗೂ ಮುಂಚೆ ಮಾಡಿದ್ದಾರೆ ಒಂದಷ್ಟು ಜನರಿಗೆ ಪಾಠ ಕಲಿಸಬಹುದಿತ್ತು ಅಂತ ಅನಿಸುತ್ತದೆ ಈಗ ಒಂದು ರೀತಿಯಲ್ಲಿ ಕಾಲ ಮಿಂಚಿ ಹೋಯ್ತು ಅಥವಾ ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವ ಪರಿಸ್ಥಿತಿ ಅಂತ ,ಗೆದ್ದು ಆಗಿದೆ ಅದೃಷ್ಟ ಇದ್ದರೆ ಮಿನಿಸ್ಟರ್ ಆಗಬಹುದು ಇನ್ನು ಐದು ವರ್ಷದವರೆಗೆ ನೀವು ಯಾವ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ ಇದಾಗಲೇ ಹಲವು ಜನರು ಜನರಿಗೆ ಚುನಾವಣೆ ಸಂದರ್ಭದಲ್ಲಿ ಹಂಚುವ ಯಾವುದೇ ರೀತಿಯಾದಂತಹ ವಸ್ತುಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳಲಾಗಿತ್ತು.

ಅವರು ಕೊಡುವ ಟಿವಿ ಕುಕ್ಕರ್ ಇಂತಹ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಅವರು ನಿಮ್ಮ ಮೇಲೆ ಕಾಳಜಿಯಿಂದ ಅಥವಾ ನಿಮಗೆ ಒಳಿತು ಆಗಲಿ ನೀವು ಉದ್ಧಾರವಾಗಲಿ ಎನ್ನುವ ಕಾರಣಕ್ಕಾಗಿ ಕುಕ್ಕರ್ ಆಗಲಿ ಯಾವುದು ಕೊಟ್ಟಿಲ್ಲ ಈ ಪ್ರೆಶರ್ ಕುಕ್ಕರ್ ಅಂದರೆ ಕಡಿಮೆ ಅಂದರೆ ಕೂಡ ಒಂದು ಸಾವಿರ ಮೇಲಿರುತ್ತದೆ ಒಂದು ಸಾವಿರ ಒಂದು ಸಾವಿರದ ಇನ್ನೂರು ಒಂದು ಸಾವಿರ 300 ಇರುತ್ತದೆ ಆದರೆ. ಆದರೆ ಇವರು ಹೇಗೆ ತರಿಸುತ್ತಾರೆ ಗೊತ್ತಾ ಅಸಲು ವಿಚಾರ ಹೇಳುತ್ತೇನೆ ಕೇಳಿ 150 ರೂಪಾಯಿಗೆ ಹೋಲ್ ಸೇಲ್ ಆಗಿ ಕುಕ್ಕರ್ ತರಿಸುತ್ತಾರೆ.

ಇವರು ಒಂದು ಸಾವಿರದ ಇನ್ನೂರು ಕುಕ್ಕರ್ ಗೆ 150 ರೂಪಾಯಿ ಕೊಟ್ಟು ತರಿಸುತ್ತಾರೆ ಎಂದರೆ ಅವರಿಗೆ ಯೋಚನೆ ಮಾಡಿ ಎಂತಹ ಕುಕ್ಕರ್ ಗಳಿಗೂ ಇರಬಹುದು ಅಂತ ಹೇಳಿ ನಿಮ್ಮ ಬಗ್ಗೆ ಕಾಳಜಿದಿದ್ದರೆ ಅವರು ಇತರ ಕೆಲಸ ಮಾಡುವುದಿಲ್ಲ ಯಾಕೆಂದರೆ ನಿಮಗೆ ಮತ ಹಾಕುವ ರೀತಿಯಲ್ಲಿ ಮಾಡಬೇಕು ಕಾಳಜಿ ಇದ್ದಿದ್ದರೆ ಕನಿಷ್ಠ ಒಳ್ಳೆ ಕುಕ್ಕರ್ ಕೊಡುವ ಕೆಲಸವನ್ನು ಮಾಡುತ್ತಿದ್ದರು ಈ ಕುಕ್ಕರ್ ವಿಚಾರದಲ್ಲಿ ಯಾರು ಆಟ ಆಡುವುದಕ್ಕೆ ಹೋಗಬಾರದು.

Leave a Reply

Your email address will not be published. Required fields are marked *