ಈರುಳ್ಳಿಯ ಪ್ರಬಲ ರಾಸಾಯನಿಕವು ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ, ಸಣ್ಣ ಈರುಳ್ಳಿಯಲ್ಲಿ ಪೋಷಕಾಂಶ ಅಧಿಕ ಆದರೆ ನಾರಿನಾಂಶ ಕಡಿಮೆ ಇರುತ್ತದೆ.
ಇನ್ನು ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ನಿಮ್ಮ ಅಡುಗೆಯಲ್ಲಿ ತಪ್ಪದೆ ದಪ್ಪ ಈರುಳ್ಳಿಯನ್ನು ಬಳಸಬೇಕು ಅಥವಾ ಆಹಾರ ಸೇವನೆ ಮಾಡುವಾಗ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಬೇಕು.
ಕೆಂಪಾಗಿರುವ ದಪ್ಪ ಈರುಳ್ಳಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ, ಹಾಗಂತ ಸ್ಪ್ರಿಂಗ್ ಆನಿಯನ್ ಸೇವಿಸಿ ಪ್ರಯೋಜನವಿಲ್ಲ, ಯಾಕೆಂದರೆ ಇದರಲ್ಲಿ ನಾರಿನಂಶ ಕಡಿಮೆ.
ಈರುಳ್ಳಿಯಲ್ಲಿರುವ ಗ್ಲೈಕೆಮಿಕ್ ಅಂಶ ಸಕ್ಕರೆ ಕಾಯಿಲೆ ಇದ್ದವರಿಗೆ ಅಗತ್ಯವಾದಷ್ಟೇ ಇದೆ, ಈ ಅಂಶ ಆಹಾರದಲ್ಲಿರುವ ಗ್ಲುಕೋಸ್ ಅಂಶ ರಕ್ತಕ್ಕೆ ಸೇರ್ಪಡೆಯಾಗುವುದನ್ನು ನಿಧಾನಗೊಳಿಸುತ್ತದೆ, ಆದ್ದರಿಂದ ಸಕ್ಕರೆ ಕಾಯಿಲೆ ಇದ್ದವರಿಗೆ ಸಲಾಡ್ ರೂಪದಲ್ಲಿಯೋ ಹಾಗು ಹಲವು ಚಾಟ್ಸ್ ಗಳಲ್ಲಿ ಬೆರಸಿಕೊಂಡು ಸೇವಿಸುವುದು ತುಂಬ ಒಳ್ಳೇದು.