ನಮಗೆ ಗೊತ್ತಿರುವ ಹಾಗೆ ನಮ್ಮ ರಾಜ್ಯದಲ್ಲಿ ಕೋಡಿಮಡ ಶ್ರೀಗಳು ಬಹಳಷ್ಟು ಭವಿಷ್ಯ ಹೇಳುವುದರಲ್ಲಿ ಹೆಸರುವಾಸಿಯಾಗಿದ್ದಾರೆ ಅವರು ಹೇಳುವ ಪ್ರತಿಯೊಂದು ವಿಷಯಗಳು ಸ್ವಲ್ಪ ಮಟ್ಟಿಗೆ ಸತ್ಯವಾಗಿವೆ ಇದೇ ರೀತಿ ಅವರು ಹೇಳುತ್ತಾ ಬರುತ್ತಿರುತ್ತಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಕಾಲಿಕ ಮಳೆ. ಬಾಂಬ್ ಸಿಡಿಯುವ ಸಂಭವ. ಯುದ್ಧ ಭೀತಿ. ಜನರು ತಲ್ಲಣವಾಗುತ್ತಾರೆ. ಭೂಕಂಪನ. ಜಲ ಕಂಟಕ ಎದುರಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ರಾಜ್ಯದ ಬಗ್ಗೆ, ದೇಶದ ಬಗ್ಗೆ ಹೀಗೆ ಹಿಂದೆ ಅನೇಕ ರೀತಿಯ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದಾರೆ. ಸದ್ಯ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ಸ್ವಾಮೀಜಿ ನುಡಿದಿದ್ದಾರೆ. ಹೌದು, ಇದೇ ಯುಗಾದಿ ನಂತರ ಒಳ್ಳೆಯ ಮಳೆಯಾಗಿ ಬೆಳೆ ಆಗುತ್ತದೆ.ಕೆಟ್ಟವರ ಅಂದ್ರೆ ಒಬ್ಬ ದೊಡ್ಡ ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ. ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ. ಹೀಗೆ ವಿವಿಧ ವಿಷಯಗಳ ಕುರಿತು ಆಗುಹೋಗುಗಳ ಬಗ್ಗೆ ಭವಿಷ್ಯ ಸ್ವಾಮೀಜಿ ನುಡಿದಿದ್ದು ತಮ್ಮ ಭವಿಷ್ಯದಲ್ಲಿ ಸ್ವಾಮೀಜಿಯವರು ಮುಂದೆ ಏನೆಲ್ಲ ಗಂಡಾಂತರ ಕಾದಿದೆ.

ಎಂಬುದು ಎಲ್ಲವನ್ನು ವಿಸ್ತಾರವಾಗಿ ಹೇಳಿದ್ದಾರೆ ಅದರ ಕೋರಿತಾಗಿಯೇ ಇವತ್ತಿನ ಮಾಹಿತಿ ಆಗಿದೆ .ಭವಿಷ್ಯದ ಕುರಿತು ಕೋಲಾರದ ಮಾಲೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ದಂತ ಕೋಡಿಮಠದ ಡಾ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ರಾಜ್ಯದಲ್ಲಿ ಯುಗಾದಿ ಕಳೆದ ನಂತರ ಒಳ್ಳೆ ಬೆಲೆ ಮಳೆಯಾಗುವ ಲಕ್ಷಣಗಳಿವೆ ಎಂದಿದ್ದಾರೆ. ಬೆಂಕಿ ಹಾವಳಿ ನೀರಿನ ಹಾವಳಿ ಹೆಚ್ಚಾಗುತ್ತದೆ.ಯುದ್ಧ ಆಗುತ್ತೆ. ಅನೇಕ ಸಾವು ನೋವುಗಳಾಗುತ್ತಿವೆ ಎಂದರು. ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗುತ್ತದೆ.

ಕೆಲವೊಂದು ಕಡೆ ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದರು. ಇದೇ ವೇಳೆಯಲ್ಲಿ ಗ್ಯಾರಂಟಿಗಳಿಂದ ಸರ್ಕಾರ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ನನಗೆ ಇದರ ಬಗ್ಗೆ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ ಮುಂಬರುವ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಅವರು ಹೇಳಿದರು ಅದೇ ರೀತಿ ನಾವು ಮುಂದಿನ ಬರುವಂತಹ ಚುನಾವಣೆಯಲ್ಲಿ ಜನರ ಮನಸ್ಸು ಯಾರ ಪಕ್ಷಕ್ಕೆ ಒಲಿಯುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ.

ಈಗಾಗಲೇ ಹಿಂದಿನ ದಿನಗಳಲ್ಲಿ ಕೋಡಿಮಠ ಶ್ರೀಗಳು ಕೆಲವೊಂದು ಭವಿಷ್ಯಗಳನ್ನು ನೋಡಿದಿದ್ದರುಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಇದರಲ್ಲಿ ನಿಮ್ಮ ಅನಿಸಿಕೆ ಪ್ರಕಾರ ಯಾವುದು ಸತ್ಯವಾಗಿದೆ ಹಾಗೂ ಮುಂಬರುವ ಭವಿಷ್ಯ ಎಷ್ಟರ ಮಟ್ಟಕ್ಕೆ ಸತ್ಯವಾಗಲಿದೆ ಎಂಬುದನ್ನು ನೀವು ನಮಗೆ ಕಾಮೆಂಟ್ ಮೂಲಕ ತಪ್ಪದೇ ತಿಳಿಸಿ

Leave a Reply

Your email address will not be published. Required fields are marked *