ಸಾಕಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತೆ. ಕೆಲವೊಮ್ಮೆ ಕಾರಣ ತಿಳಿದು ಬರಲ್ಲ ಘಟನೆಗಳನ್ನು ಒಪ್ಪಿಕೊಳ್ಳ ಬೇಕು ಅಷ್ಟೇ. ಭೂಮಿ ಮೇಲೆ ಹೀಗೂ ಆಗುತ್ತದೆ ಎಂದು ಯೋಚನೆ ಮಾಡುವ ವಿಚಾರಗಳು ಪ್ರತಿದಿನ ಓದುತ್ತ ಲೇ ಇರುತ್ತೇವೆ. ವಿಡಿಯೋದಲ್ಲಿ ತೋರಿಸುತ್ತಿರುವ ಈ ಒಂದು ಅದ್ಭುತ ಸಂಗತಿ ಬಗ್ಗೆ ನೀವು ಏನಾದರು ತಿಳಿದರೆ ಒಂದು ಸಲ ಈ ಸೀರೆ ಅಂಗಡಿಗೆ ಭೇಟಿ ಕೊಡಬೇಕು ಎಂಬ ಬಯಕೆ ಹುಟ್ಟುತ್ತೇ. ಹೌದು. ಸ್ನೇಹಿತರ ಪ್ರಾಣಿಗಳು ದೇವರು ಅಂತ ಯಾಕೆ ಹೇಳುತ್ತೇವೆ ಎಂದು ಗೊತ್ತಾಗುತ್ತೆ. ಅದರಲ್ಲೂ ಹಸುವನ್ನು ನಮ್ಮ ಭಾರತ ದೇಶದಲ್ಲಿ ಪೂಜೆ ಮಾಡೋದು ಹಸು ದೇವರಿಗೆ ಸಮಾನ ಅಂತ ಆದ ಕಾರಣ ಹಸುವನ್ನು ಗೋಮಾತೆ ಎಂದು ಕರೆಯುತ್ತೇವೆ. ಭಾರತ ದೇಶದ ಛತ್ತೀಸ್ಗಡ ರಾಜ್ಯದ ರಾಯ್ ಪುರ್ ನಗರದಲ್ಲಿರುವ ಮಹಾಲಕ್ಷ್ಮಿ ಸೀರೆ ಅಂಗಡಿ ಈಗ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಅದು ಹೇಗೆ ವಿಶ್ವ ಪ್ರಸಿದ್ಧ ಆಯ್ತು ಎಂದು ಯೋಚನೆ ಮಾಡುತ್ತಿದ್ದೀರಾ? ವ್ಯಾಪಾರ ಇಲ್ಲ, ಸೀರೆ, ಅಂಗಡಿ ಮುಚ್ಚ ಬೇಕು, ಬೇರೆ ಕೆಲಸ ಮಾಡಬೇಕು, ನನ್ನ ಜೀವನ ಹಾಳಾಗಿ ಹೋಯ್ತು ಎಂದು ಅಂದುಕೊಂಡಿದ್ದ ಅಂಗಡಿಯ ಮಾಲಿಕ ಪದ್ಮ ವ್ಯಾಪಾರ ಇಲ್ಲ, ಅಂಗಡಿ ಮುಚ್ಚ ಬೇಕು ಎಂದುಕೊಂಡಿದ್ದ ಈತ ಕೇವಲ 7 ವರ್ಷ ದಲ್ಲಿ 15 ಸೀರೆ ಅಂಗಡಿಓಪನ್ ಮಾಡುತ್ತಾನೆ.
ರಾಯ್ ಪುರ್ ನಗರದಲ್ಲಿ ಯಾವುದೇ ಶುಭ ಸಮಾರಂಭ ಇದ್ದ ರು. ಇವರ ಅಂಗಡಿ ಯಿಂದಲೇ ಸೀರೆ ಖರೀದಿ ಆಗುತ್ತೆ. ಇದಕ್ಕೆಲ್ಲ ಕಾರಣ ಚಂದ್ರ ಮಣಿ ಎಂಬ ಹಸುವಿನಿಂದ .ಚಂದ್ರ ಮಣಿ ಹಸು 2016 ರಲ್ಲಿ ಈ ಸೀರೆ ಅಂಗಡಿಯ ಮಾಲಿಕ ಪದ್ಮ ಅವರ ತಾಯಿ ನಿಧನರಾಗುತ್ತಾರೆ. ಪದ್ಮ ಅವರ ತಾಯಿ ಸೀರೆ ಅಂಗಡಿಯ ನೋಡಿಕೊಳ್ಳುತ್ತಿದ್ದರು. ಪದ್ಮ ಅವರ ತಾಯಿ ನಿಧನರಾದ ಮೇಲೆ ವ್ಯಾಪಾರ ಕುಸಿತ ಕಾಣುತ್ತ ಮನೆ, ಆಸ್ತಿ ಎಲ್ಲವೂ ಮಾರುವ ಸ್ಥಿತಿ ದಿನದಲ್ಲಿ ಒಂದು ಸೀರೆ ಕೂಡ ಮಾರಾಟ ಆಗೋದಿಲ್ಲ. ಮಹಾಲಕ್ಷ್ಮಿ ಸೀರೆ ಅಂಗಡಿಯ ಸಾಕಷ್ಟು ಜಾಹಿರಾತು ಕೊಟ್ಟ ರೂ ಪ್ರಯೋಜನವಾಗಿಲ್ಲ, ಬ್ಯಾಂಕ್ ಸಾಲ ತೀರಿಸಲಾಗದೆ ಸ್ವಂತ ಮನೆ ಜಪ್ತಿ ಆಗುತ್ತೆ ಅಷ್ಟೇ ಅಲ್ಲದೆ ಅಲ್ಪ ಸ್ವಲ್ಪ ಇದ್ದ ಆಸ್ತಿ ಕೂಡ ಕೈ ತಪ್ಪುತ್ತೆ.
ಇನ್ನೇನು ಅಂಗಡಿ ಮಾರಾಟ ಆಗೋದಕ್ಕೆ 10 ದಿನ ಇದೆ ಅನ್ನುವಷ್ಟರಲ್ಲಿ ಒಂದು ಘಟನೆ ನಡೆಯುತ್ತೆ. ಬೆಳಗ್ಗೆ ಅಂಗಡಿ ತೆರೆದ 5 ನಿಮಿಷದಲ್ಲಿ ಒಂದು ಹಸು ನೇರವಾಗಿ ಅಂಗಡಿ ಒಳಗೆ ನುಗ್ಗುತ್ತೆ. ಮೊದಮೊದಲು ಹಸುವನ್ನು ಓಡಿಸುತ್ತಾರೆ. ಎಷ್ಟು ಓಡಿಸಿದರು ಹಸು ಮತ್ತೆ ಆರಂಭ ಮಾಡುತ್ತೆ. ಸ್ನೇಹಿತರೆ ಈ ವಿಚಾರವನ್ನು ಸೂಕ್ಷ್ಮ ವಾಗಿ ಗಮನಿಸುತ್ತಾರೆ. ಯಾವಾಗ ಹಸು ಒಳಗೆ ಬರಲು ಶುರು ಮಾಡು ಅಂದಿನಿಂದ ಮತ್ತೆ ವ್ಯಾಪಾರ ಆರಂಭವಾಗಿರುತ್ತೆ. ಕೇವಲ 10 ದಿನ ದಲ್ಲಿ ಪದ್ಮ ಅವರಿಗೆ ಗೊತ್ತಿಲ್ಲದ ಹಾಗೆ ಅಂಗಡಿಯ 30% ಸ್ಟಾಕ್ ಖಾಲಿಯಾಗಿರುತ್ತೆ. ಹಸು ಬಂದಾಗಿನಿಂದ ಒಳ್ಳೆಯದಾಗುತ್ತಿದೆ ಎಂದು ಯೋಚನೆ ಮಾಡಿ ಹಸುವ ನ್ನು ಒಳಗೆ ಬಿಟ್ಟು ಕೊಳ್ಳುತ್ತಾರೆ. ಅದೇ ರೀತಿಯಿಂದ ಇವರು ಹೆಚ್ಚು ಸೀರೆ ಅಂಗಡಿಯನ್ನು ತೆರೆದಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದು ಹೇಳಿ