ನಿಮಗೆ ಮದುವೆ ಬೇಗನೆ ಆಗಬೇಕೇ ಮತ್ತು ನಿಮಗೆ ಉದ್ಯೋಗ ಹರಿಸಿ ಬರಬೇಕೇ ಅದಕ್ಕಾಗಿ ಇಲ್ಲಿದೆ ಸುಲಭವಾದ ಮಾರ್ಗ. ತಿಳಿಯಲು ಓದಿ. ನಮಸ್ತೆ ಗೆಳೆಯರೇ ಯಾರಾದರೂ ಸರಿಯೇ ನಮಗೆ ವಿವಾಹ ಬೇಗನೆ ಆಗಬೇಕು ಅನ್ನುವವರು ಮತ್ತು ಉದ್ಯೋಗ ಶೀಘ್ರವಾಗಿ ಹರಸಿ ಬರಬೇಕೆನ್ನುವವ್ರು ಹಾಗೂ ಮಾನಸಿಕ ಪ್ರಶಾಂತತೆ ಇಲ್ಲದೆ ಇರುವವರು ಈ ಅಪ್ರಶಾಂತತೆ ಹೋಗಿ ಬೇಗನೆ ಮದುವೆಆಗಬೇಕೆ ನ್ನುವವರು ಈ ಶ್ರಾವಣ ಮಾಸದಲ್ಲಿ ಪ್ರತ್ಯೇಕವಾದ ದೀಪ ಆರಾಧನೆ ಮಾಡುವುದರಿಂದ ನಿಮ್ಮ ಕೋರಿಕೆಗಳು ನೆರವೇರುತ್ತದೆ. ಈ ಶ್ರಾವಣ ಮಾಸ ಎಂದರೆ ವೆಂಕಟೇಶ್ವರನಿಗೆ ಬಹಳ ಪ್ರಿಯವಾದ ಮಾಸ. ಈ ಮಾಸದಂದು ವೆಂಕಟೇಶ್ವರ ಸ್ವಾಮಿಗೆ ಪ್ರತ್ಯೇಕ ದೀಪ ಆರಾಧನೆ ಮಾಡುವುದರಿಂದ ನಿಮ್ಗೆ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ದೊರೆಯುತ್ತದೆ.

ಈ ಶ್ರಾವಣ ಮಾಸದಲ್ಲಿ ಈ ಶನಿವಾರ ದಿನದಂದು ನೀವು ಹೆಚ್ಚಿನ ಮಟ್ಟದಲ್ಲಿ ಪೂಜೆ ಪುರಸ್ಕಾರಗಳನ್ನೂ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಈ ಶ್ರಾವಣ ಮಾಸದ ಶನಿವಾರ ದಿನದಂದು ಪ್ರತ್ಯೇಕವಾಗಿ ದೀಪ ಆರಾಧನೆ ಮಾಡಿಕೊಳ್ಳಿ. ಈ ವೆಂಕಟೇಶ್ವರ ಸ್ವಾಮಿ ದೀಪ ಆರಾಧನೆ ಹೇಗೆ ಮಾಡಿಕೊಳ್ಳಬೇಕು ಮತ್ತು ಯಾವ ರೀತಿಯಲ್ಲಿ ಮಾಡಬೇಕೆಂದು ಎಂದರೆ ನಿಮ್ಮ ಮನೆಯಲ್ಲಿ ಶ್ರಾವಣ ಮಾಸದಲ್ಲಿ ಶನಿವಾರ ದಿನದಂದು ನಿಮ್ಮ ಮನೆಯ ಗೋಡೆಯ ಮೇಲೆ ಅರಿಶಿಣವನ್ನು ವೃತ್ತಾದಾಕಾರ ದಲ್ಲಿ ದೊಡ್ಡದಾಗಿ ಹಚ್ಚಬೇಕು. ನಂತರ ಕುಂಕುಮವನ್ನು ತೆಗೆದುಕೊಂಡು ತಿರುನಾಮವನ್ನು ಬರೆದುಕೊಳ್ಳಬೇಕು. ತಿರುನಾಮ ಎಂದರೆ ಮೂರು ನಾಮಗಳು. ವೆಂಕಟೇಶ್ವರ ಸ್ವಾಮಿಗೆ ಇಟ್ಟಿರುವ ಪ್ರಿಯವಾದ ಹೆಸರುಗಳು. ಈ ಹೆಸರುಗಳನ್ನು ನೀವು ಅರಿಶಿಣ ಮೇಲೆ ತಿದ್ದಿಕೊಳ್ಳಬೇಕು. ಈ ರೀತಿ ಮಾಡಿದ ನಂತರ ಭೂಮಿಯ ಮೇಲೆ ಅಥವಾ ನೆಲದ ಮೇಲೆ ಪೀಠವನ್ನು ಮಾಡಿಕೊಳ್ಳಬೇಕು.

ನಂತರ ಅದರ ಮೇಲೆ ಹಿತ್ತಾಳೆ ಪಾತ್ರೆಯನ್ನು ಇಟ್ಟುಕೊಳ್ಳಬೇಕು. ಈ ದೀಪ ಆರಾಧನೆ ಮಾಡಿಕೊಳ್ಳಲು ಅಕ್ಕಿ ಹಿಟ್ಟು ಮತ್ತೆ ಬೆಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕಲಿಸಿ ಅದನ್ನು ಉಂಡೆಯಾಗಿ ಮಾಡಿ ಕೊಂಡು ನಂತರ ಅದರಿಂದ ಎರಡು ದೀಪಗಳನ್ನು ಮಾಡಿಕೊಳ್ಳಬೇಕು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಟ್ಟಿನ ದೀಪವನ್ನು ಮಾಡಿಕೊಳ್ಳುತ್ತೇವೆ ಅಲ್ಲವೇ. ಹಾಗೆಯೇ ಇದನ್ನು ಕೂಡ ಉಂಡೇಯಾಗಿ ದೀಪವನ್ನೂ ಹಚ್ಚಬೇಕು. ಈ ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ಮಾಡಿದ ದೀಪವನ್ನು ಈ ತಟ್ಟೆಯ ಮೇಲೆ ಇಟ್ಟು ಅದಕ್ಕೆ ತುಪ್ಪವನ್ನು ಹಾಕಿ ದೀಪ ಆರಾಧನೆಯನ್ನು ಮಾಡಬೇಕು. ದೀಪಾರಾಧನೆ ಮಾಡುತ್ತಾ ಆ ದೀಪವನ್ನು ವೆಂಕಟೇಶ್ವರ ಸ್ವಾಮಿ ಎಂದು ಭಾವಿಸಿಕೊಂಡು ಆ ದೀಪಕ್ಕೆ ನೀವು ಅಕ್ಷತೆಗಳಿಂದ ಪೂಜೆಯನ್ನು ಮಾಡುತ್ತಾ ಹೂವುಗಳನ್ನು ಸಮರ್ಪಿಸಿ ವೆಂಕಟೇಶ್ವರ ಸ್ವಾಮಿ ಸ್ತ್ರೋಸ್ತ್ರವನ್ನು ಹೇಳುತ್ತಾ ಅಗರ ಬತ್ತಿಯಿಂದ ಪೂಜೆಯನ್ನು ಸಲ್ಲಿಬೇಕು. ನಂತರ ಬೆಲ್ಲವನ್ನು ದೇವರಿಗೆ ನೈವೇದ್ಯವಾಗಿ ಇಡಬೇಕು.

ಈ ರೀತಿ ಬೆಲ್ಲದ ನೈವೆದ್ಯವನ್ನೂ ಮಾಡಿದ ನಂತರ ಆ ಜ್ಯೋತಿ ಉರಿದು ಹೋಗುವವರೆಗೂ ಅಥವಾ ಮುಂಚೆಯೇ ನೀವು ಆಹಾರವನ್ನು ಸೇವಿಸಬಾರದು. ನೀವು ದಿನವಿಡೀ ಉಪವಾಸ ಮಾಡುವುದಲ್ಲದೆ ಕನಿಷ್ಟ ದೀಪ ಆರಿ ಹೋಗುವವರೆಗೂ ನೀವು ಏನನ್ನು ಸೇವನೆ ಮಾಡಬಾರದು. ದೀಪ ಬತ್ತಿ ಹೋದ ನಂತ್ರ ನೀವು ಆಹಾರವನ್ನು ಸೇವಿಸಬೇಕು. ಈ ವೆಂಕಟೇಶ್ವರ ಸ್ವಾಮಿ ದೀಪಾರಾಧನೆ ಮಾಡಿದ ನಂತರ ಸಂಜೆ ವೇಳೆಗೆ ನೀವು ಮುತ್ತೈದೆಯರನ್ನು ಕರೆದು ತಾಂಬೂಲವನ್ನು ನೀಡಬೇಕು. ಇದನ್ನೇ ವೆಂಕಟೇಶ್ವರ ಸ್ವಾಮಿ ದೀಪಾರಾಧನೆ ಎಂದು ಕರೆಯುತ್ತಾರೆ. ಹೀಗೆ ಈ ಶ್ರಾವಣ ಮಾಸದಲ್ಲಿ ಈ ಪ್ರತ್ಯೇಕ ದೀಪ ಆರಾಧನೆಯನ್ನು ಶ್ರೀ ವೆಂಕರಮಣಸ್ವಾಮಿಗೆ ತುಪ್ಪದಿಂದ ಹಚ್ಚಿ ಆರಾಧಿಸಿದರೆ ಮದುವೆ ಬೇಗನೆ ಆಗುವುದಲ್ಲದೆ ನಿಮಗೆ ಉದ್ಯೋಗ ಹರಿಸಿ ಬರುತ್ತದೆ.

Leave a Reply

Your email address will not be published. Required fields are marked *