ಹೆಲೋ ನಮ್ಮ ಪ್ರೀತಿಯ ಓದುಗರೇ, ಕೆಲವು ವಿಷಯಗಳು ಯಾವ ರೀತಿ ಇರುತ್ತವೆ ಎಂದರೆ , ಎಲ್ಲರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು ಆಗಿರುತ್ತವೆ. ಅವುಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿಯೋಣ. ಇವುಗಳನ್ನು ನೀವು ಎಲ್ಲಾದರೂ ಮುಖ್ಯ ಕೆಲಸಕ್ಕೆ ತುಂಬಾನೇ ಮಹತ್ವ ಇರುವ ಕೆಲಸಕ್ಕೆ ಹೊರಗೆ ಹೋಗುವ ಪರಿಸ್ಥಿತಿ ಬರುತ್ತದೆ, ಆಗ ಹೋಗುವಾಗ ಬಳಸಬೇಕು ಅಷ್ಟೇ. ಆದರೆ ನೀವು ಕೆಲವೊಮ್ಮೆ ಗಮನಿಸಿರಬಹುದು ನೀವು ಹೊರಗೆ ಯಾವುದಾದರೂ ಪ್ರಮುಖ ಕೆಲ್ಸಕ್ಕೆ ಹೊರಗೆ ಹೋದಾಗ ಕೆಲವು ಕೆಟ್ಟ ಶಕ್ತಿಗಳು ನಿಮ್ಮನ್ನು ಕಾಡಲು ಶುರು ಮಾಡುತ್ತವೆ, ಹಾಗೆ ಆದಾಗ ಕೆಲವೊಂದು ಚಿಕ್ಕ ಪುಟ್ಟ ವಸ್ತುಗಳ ಬಳಕೆ ಇಂದ ಆ ಎಲ್ಲಾ ನಕಾರಾತ್ಮಕ ಅಂಶಗಳನ್ನು ದೂರದಲ್ಲಿ ಇಡಬಹುದು. ಅವೇನು ಎಂದು ನೋಡೋಣ ಬನ್ನಿ. ಹೀಗೆ ಒಂದು ಮಾತಿದೆ ಯಾವ ವ್ಯಕ್ತಿಯ ಮೇಲೆ ಭಗವಂತ ಆ ಶಿವನ ಆಶೀರ್ವಾದ ಇರುತ್ತದೆಯೋ ಆ ವ್ಯಕ್ತಿ ಜೀವನದಲ್ಲಿ ಯಾವಾಗಲೂ ಸಂತೋಷವಾಗಿ ಇರ್ತಾರೆ. ಜೊತೆಗೆ ಇವರ ಎಲ್ಲಾ ಮನಸಿಚ್ಚೆಗಳು ಇಡೇರುತ್ತ ಹೋಗುತ್ತವೆ. ಈ ಬ್ರಹ್ಮಾಂಡದ ಗುರು ಶ್ರೀ ಶಿವನೇ ಆಗಿದ್ದಾನೆ ಹಾಗಾಗಿ ಇಲ್ಲಿ ಯಾರು ಶಿವ ಭಕ್ತರು ಇರುತ್ತಾರೋ ಅವರಲ್ಲಿ ಈ ವಿಶೇಷವಾದ ವಿಷಯವು ನೋಡಲು ಸಿಗುತ್ತದೆ. ಇವರು ಯಾವುದೇ ಕಾರಣಕ್ಕೂ ತಮ್ಮ ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಭಯ ಪಟ್ಟು ಹಿಂದಕ್ಕೆ ಸರಿಯುವುದಿಲ್ಲ. ನಾನು ಇದನ್ನು ಮಾಡಬಲ್ಲೆ ಎನ್ನುವ ಸಾಹಸ ಅವರಲ್ಲಿರುತ್ತದೆ. ಸಾಮಾನ್ಯವಾಗಿ ಕೆಲವು ಜನರು ಕೆಲವು ವಿಷಯಗಳಿಗೆ ಹೆದರಿಕೊಂಡು ಸುಮ್ಮನೆ ಕುಳಿತುಕೊಳ್ಳುತ್ತಾರೆ. ನಂತರ ಇವರಿಂದ ಜೀವನದಲ್ಲಿ ಏನೋ ಮಾಡಲು ಸಾಧ್ಯ ಆಗುವುದಿಲ್ಲ. ಹಾಗಾಗಿ ಜೀವನದಲ್ಲಿ ಬರುವ ಕಷ್ಟ ತೊಂದರೆಗಳಿಗೆ ನಾವು ಎಂದಿಗೂ ಹೆದರಬಾರದು. ಯಾಕಂದ್ರೆ ಎಲ್ಲರ ಜೀವನದಲ್ಲಿ ತೊಂದರೆಗಳು ಬಂದೇ ಬರುತ್ತದೆ, ಇವುಗಳನ್ನು ನೀವು ಸುಲಭವಾಗಿ ದೂರ ಮಾಡಬಹುದು.

ಸ್ನೇಹಿತರೆ ಮನೆ ಇಂದ ನೀವು ಆಚೆ ಹೋಗುವ ಮುನ್ನ ಈ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಒಂದುವೇಳೆ ಹಣಕ್ಕೆ ಸಂಬಂಧಿಸಿದ ಕೆಲ್ಸಕ್ಕೆ ನೀವು ಆಚೆ ಹೋಗುತ್ತಿದ್ದರೆ, ಅದು ನಿಮ್ಮ ಅದೃಷ್ಟಕ್ಕೆ ಸಂಬಂಧ ಪಟ್ಟಿದ್ದರೆ ಅಂದರೆ, ಉದಾಹರಣೆಗೆ ಒಳ್ಳೆಯ ನೌಕರಿ ಈ ತರಹದ ಅದೃಷ್ಟಕ್ಕೆ ಸಂಬಂಧ ಇದ್ದರೆ ನೀವು ಹಳದಿ ಬಣ್ಣದ ವಸ್ತುವನ್ನು ತಪ್ಪದೇ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಹೋಗಿ, ಇದು ಗುರುಗ್ರಹದ ಕಾರಕ ವಸ್ತುವೂ ಆಗಿದೆ, ಜೊತೆಗೆ ಭಗವಂತನಾದ ವಿಷ್ಣುವಿನ ಕಾರಕ ವಸ್ತುವೂ ಆಗಿದೆ, ಈ ವಸ್ತು ನಿಮ್ಮ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ ಆಗ ನಿಮ್ಮ ಅದೃಷ್ಟ ಶಕ್ತಿಶಾಲಿ ಆಗುತ್ತದೆ. ಇಲ್ಲಿ ಪ್ರಮುಖವಾಗಿ ಹಳದಿ ದಾರದ ಗಂಟನ್ನು ನೀವು ಪ್ರತಿ ಬಾರಿ ಸ್ಪರ್ಶ ಮಾಡುತ್ತಿದ್ದರೆ ನಿಮ್ಮ ಅದೃಷ್ಟ ಚಕ್ರವು ಸರಿ ಹೋಗುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ. ನಂತರ ನಿಮ್ಮ ಜೀವನದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.

ಇನ್ನೂ ಎರಡನೆಯ ಸಂಗತಿ ಎಂದರೆ ನೀವು ಹೋದ ಸ್ಥಾನಗಳಲ್ಲಿ ನಿಮ್ಮ ಶತ್ರುಗಳು ಇದ್ದಾರೆ ಎಂದು ನಿಮಗೆ ಅನ್ನಿಸುತ್ತಿದ್ದರೆ ಪ್ರತಿದಿನ ಕೆಲಸಕ್ಕೆ ಅಂದರೆ ಹೊರಗೆ ಹೊರಡುವಾಗ ಕೇಸರಿ ಬಣ್ಣದ ತಿಲಕವನ್ನು ನಿಮ್ಮ ಹಣೆಗೆ ಹೆಚ್ಚಿಕೊಳ್ಳಿ, ಇದರಿಂದ ನೀವು ಎಲ್ಲಿಯೇ ಹೋಗಿ ಯಾವುದೇ ಕೆಲಸ ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವ, ಉತ್ತಮ ಸ್ಥಾನಮಾನ ಸಿಗುತ್ತದೆ ಜೊತೆಗೆ ಯಾವ ಶತ್ರುಗಳೂ ನಿಮ್ಮನ್ನು ಕಾಡುವುದಿಲ್ಲ, ಒಂದುವೇಳೆ ಶತ್ರುಗಳು ಇದ್ದರೂ ನಿಮ್ಮ ಜೊತೆ ಇವರು ಸ್ನೇಹ ಬೆಳೆಸಲು ಶುರು ಮಾಡ್ತಾರೆ. ಮೇಲೆ ಹೇಳಿದ ಹಾಗೆ ಕೇಸರಿ ತಿಲಕವನ್ನು ನಿಮ್ಮ ಎರೆಡು ಹುಬ್ಬುಗಳ ನಡುವೆ ಅಂದರೆ ಶಿವನ ಮೂರನೇ ಕಣ್ಣು ಇರುವ ಜಾಗದಲ್ಲಿ ಹೆಬ್ಬೆಳಿನಿಂದ ಹಚ್ಚಿಕೊಳ್ಳಬೇಕು. ಯಾಕಂದ್ರೆ ಹೆಬ್ಬೆರಳಲ್ಲಿ ಅಗ್ನಿ ತತ್ವವು ಇರುತ್ತದೆ. ಇಲ್ಲಿ ಮಾಡುವ ಇನ್ನೊಂದು ತಪ್ಪು ಎಂದರೆ , ಹಲವಾರು ಜನರು ಹಣೆಗೆ ಏನಾದರೂ ಹಚ್ಚುವಾಗ ಉಂಗುರ ಬೆರಳು ಬಳಸುತ್ತಾರೆ,ಆದರೆ ಪ್ರತಿ ಬೇರೆಳಲ್ಲಿ ಅದಕ್ಕೆ ಆದ ಮಾನ್ಯತೆ ಪ್ರಾಮುಖ್ಯತೆ ಇದೆ. ಒಂದುವೇಳೆ ನೀವು ನಿಮ್ಮ ಬಲ, ಶಕ್ತಿ ಹೆಚ್ಚಿಸಲು ತಿಲಕ ಹಚ್ಚುವು ದಾದರೆ ಹೆಬ್ಬೆರಳನ್ನು ಬಳಸಬೇಕು. ಮೂರನೆಯ ಸಂಗತಿ ಎಂದರೆ ಒಂದುವೇಳೆ ನೀವು ಹೊರಗೆ ಹೋದಾಗ ನಿಮಗೆ ಅಲ್ಲಿ ಭಯ, ಚಿಂತೆ ಕಾಡ್ತಾ ಇದ್ರೆ, ನಿಮ್ಮ ಬಳಿ ಕೇವಲ 8 ಕರಿಮೆಣಸಿನ ಕಾಳನ್ನು ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ಆಗ ಯಾವ ಶತ್ರುಗಳೂ, ನಕಾರಾತ್ಮಕ ಶಕ್ತಿಗಳು ನಿಮಗೆ ತಿಂದರೆ ಉಂಟು ಮಾಡುವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *