ನಮಸ್ತೆ ಪ್ರಿಯ ಓದುಗರೇ, ನೀವು ನಾವು ಸಾಮಾನ್ಯವಾಗಿ ಮನಸಿನಲ್ಲಿ ನಾವು ಅಂದುಕೊಳ್ಳುವುದು ನಡೆಯಲಿ ಅಂತ ಸಹಜವಾಗಿ ಬಯಸ್ತಾ ಇರ್ತೀವಿ. ಅಂದರೆ ಹಿಂದೆ ಯಾವ ರೀತಿ ಭಗವಂತ ನೀಡಿದ ವರ ನಿಜ ಆಗುತ್ತಿತ್ತು, ಅದೇ ರೀತಿ ತಮ್ಮ ಮಾತು ತಾವು ಬಯಸಿದ್ದು ನಿಜ ಆಗಲಿ ಸತ್ಯ ಆಗಲಿ ಅಂತ ಇಷ್ಟ ಪಡ್ತಾ ಇರ್ತೀವಿ. ಹಾಗಾಗಿ ಇಂದಿನ ಈ ಲೇಖನದಲ್ಲಿ ಯಾವ ಒಂದು ರೀತಿಯ ಗಿಡಮೂಲಿಕೆಗಳು ಕೆಲವು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಅಥವ ನಿಮ್ಮ ದೇಹಕ್ಕೆ ತಾಕುವ ಹಾಗೆ ಕಟ್ಟಿಕೊಳ್ಳುವುದರಿಂದ, ಧರಿಸಿಕೊಳ್ಳುವುದರಿಂದ ನಿಮ್ಮ ಎಲ್ಲಾ ಮಾತುಗಳು ನಡೆಯಲು ಶುರು ಆಗುತ್ತಾ ಹೋಗುತ್ತವೆ. ಹಾಗಾಗಿ ಇದರ ಬಳಕೆಯ ವಿಧಿ ಮತ್ತು ವಿಧಾನವನ್ನು ವಿಸ್ತಾರವಾಗಿ ಇಂದಿನ ಲೇಖನದಲ್ಲಿ ನೋಡೋಣ ಸ್ನೇಹಿತರೆ. ಯಾರ ಮೇಲೆ ಭಗವಂತ ಶಿವನ ಆಶೀರ್ವಾದ ಇರುತ್ತದೋ ಅಂತಹ ವ್ಯಕ್ತಿಗಳು ಯಾವತ್ತೂ ತಮ್ಮ ಜೀವನದಲ್ಲಿ ಯಶಸ್ವಿಯಾಗಿ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಶಾಸ್ತ್ರವು ಅಳಿವಿನ ಅಂಚಿನಲ್ಲಿದೆ. ಹಾಗಾಗಿ ಪ್ರಾಚೀನ ಕಾಲದ ವಿಶಿಷ್ಟವಾದ ಆಚರಣೆ ಹಾಗೂ ವಿಷಯಗಳನ್ನು ತಿಳಿಸುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇವೆ.

ಈಗಿನ ದಿನಗಳಲ್ಲಿ ಸುಮಾರು ಜನರು ಧನ ಸಂಪತ್ತಿನ ಸಮಸ್ಯೆಯನ್ನು ಅನುಭವಿಸುತ್ತಾ ಇರುತ್ತಾರೆ, ಶಾರೀರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಈ ತರಹದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾದರೆ ಈ ವಿಶಿಷ್ಟ ಪ್ರಯತ್ನದ ವಿಧಾನ ನೋಡೋಣ. ನೀವು ಎಲೆ ಕಳ್ಳಿ ಎಂಬ ಸಸ್ಯವನ್ನು ಕೇಳಿಯೂ ನೋಡಿಯೂ ಇರ್ತೀರ. ಈ ಸಸ್ಯವನ್ನು ವಾಕ್ ಸಿದ್ಧಿಗಾಗಿ ಬಳಸುತ್ತಾರೆ. ಹಾಗಾಗಿ ನಿಮ್ಮ ಮಾತುಗಳು ಅಂದುಕೊಂಡ ರೀತಿ ನಡೆಯಲು ಸಾಧ್ಯ ಆಗುತ್ತದೆ. ಈ ಎಲೆ ಕಳ್ಳಿಯನ್ನು ಕೃತಿಕಾ ನಕ್ಷತ್ರದಲ್ಲಿ ತೆಗೆದುಕೊಂಡು ಬರಬೇಕು ನಂತರ ಇದನ್ನು ನೀವು ನಿಮ್ಮ ಎಡ ಕೈಯಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಇದರ ಬಳಕೆಯ ಬಗ್ಗೆ ಒಂದು ಹಿಂದಿ ಗ್ರಂಥದಲ್ಲಿ ಹೇಳಲಾಗಿದೆ. ಇದನ್ನು ವಾಕ್ ಸಿದ್ಧಿಗಾಗಿ ಬಳಸುವುದರಿಂದ ನಿಮ್ಮ ಮನಸಿನ ವಾಂಚೆಗಳು ಅಥವಾ ನಿಮ್ಮ ಮಾತುಗಳು ಸತ್ಯ ಆಗುತ್ತಾ ಹೋಗುವ ಸುಂದರ ಅದ್ಭುತ ಅನುಭವ ಆಗುವುದು ಖಂಡಿತ. ಇಂದಿನ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *