ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪುರುಷರು ಯಾವುದಾದರೂ ದುಶ್ಚಟಗಳಿಗೆ ಒಳಗಾದರೆ ಅದನ್ನು ಬಿಡುವುದು ಬಹಳ ಕಷ್ಟಕರ, ಧೂಮಪಾನ ಮದ್ಯಪಾನ ಜೂಜು ಗಾಂಜಾ ಸೇವನೆ ರೀತಿಯ ದುಶ್ಚಟಗಳಿಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟಕರ, ಈ ರೀತಿಯಾಗಿ ಪುರುಷರು ದುಶ್ಚಟಗಳಿಗೆ ಒಳಗಾಗಿ ಅದರಿಂದ ಹೊರಬರಲು ಸಾಧ್ಯವಾಗದೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ, ಇದರಿಂದ ಸಾಂಸಾರಿಕ ಜೀವನ ಹೆಂಡತಿ ಮಕ್ಕಳು ತಂದೆ ತಾಯಿ ಇವರು ಸಂಕಷ್ಟಕ್ಕೆ ಒಳಗಾಗುತ್ತಾರೆ, ಮಕ್ಕಳ ಭವಿಷ್ಯ ಹದಗೆಡುತ್ತದೆ, ಇದರಿಂದ ದುಶ್ಚಟಗಳಿಗೆ ಒಳಗಾದ ಪುರುಷನ ಹೆಂಡತಿ ತಂದೆ ತಾಯಿಗಳು ಬಹಳ ನೋವನ್ನು ಅನುಭವಿಸುತ್ತಿರುತ್ತಾರೆ. ಇನ್ನು ಹೆಂಡತಿ ತನ್ನ ಗಂಡ ಎಷ್ಟೇ ದುಶ್ಚಟಗಳಿಗೆ ಒಳಗಾದರೂ ಎಷ್ಟೇ ಕಷ್ಟ ಕೊಟ್ಟರು ತನ್ನ ಗಂಡ ಎಂದು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ, ಅವನು ಆರೋಗ್ಯವಾಗಿ ದೀರ್ಘಾಯುಷ್ಯ ವಾಗಿರಲಿ ಎಂದು ಹಲವಾರು ಪೂಜೆಗಳನ್ನು ಮಾಡುತ್ತಾರೆ.

ಎಷ್ಟೇ ಹೇಳಿದರು ಎಷ್ಟೇ ಪ್ರಯತ್ನಪಟ್ಟರೂ ದುಶ್ಚಟಗಳನ್ನು ಬಿಡಿಸಲು ಸಾಧ್ಯವಾಗುವುದಿಲ್ಲ, ಈ ರೀತಿಯಾಗಿ ದುಶ್ಚಟಗಳಿಗೆ ಒಳಗಾದವರಿಗೆ ಅವರದು ಸ್ಥಿತಿಗಳಿಂದ ಹೊರಬರಲು ಸಾಧ್ಯವಾಗದೆ ಇದ್ದಾಗ ಎಷ್ಟೋ ಜನರು ದೇವರ ಮೊರೆಯನ್ನು ಹೋಗುತ್ತಾರೆ, ಇನ್ನು ದೇವರ ಮೇಲೆ ನಂಬಿಕೆ ಇರುವವರು ದೈವಿಕ ಮಾರ್ಗದಲ್ಲಿ ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ದೇವರ ಅನುಗ್ರಹದಿಂದ ಅವರು ದುಶ್ಚಟಗಳಿಂದ ಹೊರಗೆ ಬರುತ್ತಾರೆ. ಹಾಗಾದರೆ ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದೆಂದು ನೋಡುವುದಾದರೆ ಮೊದಲಿಗೆ ಗಂಡ ಅತಿಹೆಚ್ಚಾಗಿ ಮಧ್ಯಪಾನ ಧೂಮಪಾನ ಮಾಡಿಕೊಂಡು ಮನೆಗೆ ಬಂದಾಗ ಸಾಮಾನ್ಯವಾಗಿ ಹೊರಗಡೆ ಚಪ್ಪಲಿಯನ್ನು ಸರಿಯಾಗಿ ಬಿಡುವುದಿಲ್ಲ ಉಲ್ಟಾ ಬಿಡುತ್ತಾರೆ, ಆದಿನ ನೀವು ಗಮನದಲ್ಲಿಟ್ಟುಕೊಂಡು ಆ ದಿನ ಚಪ್ಪಲಿಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಅದು ಎಷ್ಟು ಭಾರ ಇದೆಯಾ ಎಂದು ಅಂದಾಜಿಸಿ ಅಷ್ಟೇ

ಬಾರದ ಗೋದಿಹಿಟ್ಟನ್ನು ತೆಗೆದುಕೊಳ್ಳಬೇಕು, ಗೋಧಿ ಹಿಟ್ಟಿನಿಂದ ತಕ್ಷಣವೇ ಚಪಾತಿಯನ್ನು ತಯಾರಿಸಬೇಕು, ತಯಾರಿಸಿದಂತಹ ಅಷ್ಟು ಚಪಾತಿಗಳನ್ನು ನಿಮ್ಮ ಮನೆಯ ಹತ್ತಿರ ಇರುವಂತಹ ನಾಯಿಗಳಿಗೆ ಶ್ವಾನಗಳಿಗೆ ಆಹಾರವಾಗಿ ತಿನ್ನಿಸಬೇಕು, ಶ್ವಾನಗಳಿಗೆ ಆಹಾರವನ್ನು ಹಾಕುವುದಕ್ಕಿಂತ ಮುಂಚೆ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ನನ್ನ ಗಂಡ ಈ ರೀತಿಯಾಗಿ ದುಶ್ಚಟಗಳಿಗೆ ಒಳಗಾಗಿದ್ದಾನೆ ಅವನು ಅದರಿಂದ ಹೊರಗೆ ಬರಬೇಕು ಒಳ್ಳೆಯ ಬುದ್ಧಿ ಅವರಿಗೆ ಬರಬೇಕು ನಮ್ಮ ಸಾಂಸಾರಿಕ ಜೀವನ ಚೆನ್ನಾಗಿ ಇರಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು, ನಂತರ ಚಪಾತಿಯನ್ನು ನಾಯಿಗಳಿಗೆ ಆಹಾರವಾಗಿ ನೀಡಬೇಕು. ಈ ರೀತಿಯಾಗಿ ಪ್ರತಿದಿನ ಮಾಡಬೇಕು ಅಂದರೆ ಮೊದಲನೆಯ ದಿನ ಚಪ್ಪಲಿ ಯಾವ ತೂಕದಲ್ಲಿ ಇದೆಯೋ ಅಷ್ಟೇ ಪ್ರಮಾಣದಲ್ಲಿ ಗೋಧಿ ಹಿಟ್ಟಿನ ಚಪಾತಿಯನ್ನು ಮಾಡಬೇಕು, ನಂತರದ ದಿನಗಳಲ್ಲಿ ಸ್ವಲ್ಪ ಗೋಧಿ ಹಿಟ್ಟಿನಿಂದ ಚಪಾತಿಯನ್ನು ಮಾಡಿದರು ಆಗುತ್ತದೆ.

Leave a Reply

Your email address will not be published. Required fields are marked *