ನಮಸ್ತೆ ಪ್ರಿಯ ಓದುಗರೇ, ಪ್ರೀತಿ ಪ್ರೇಮ ಪಯಣ ಅನ್ನುವುದು ಭಾವನೆಗಳ ಸಮ್ಮಿಲನ. ಅಸಂಖ್ಯಾತ ಭಾವನೆಗಳನ್ನು ಒಳಗೊಂಡಿರುವ ಎರಡು ಹೃದಯಗಳು. ಮತ್ತು ಬಾಂಧವ್ಯಕ್ಕೆ ಅದು ಸಂಭದವನ್ನು ಕಲ್ಪಿಸಿ ಕೊಡುವ ಒಂದು ನಿಷ್ಕಲ್ಮಶ ಸಂಭಂದದ ಬೆಸುಗೆ. ಈ ಪ್ರೀತಿ ಎಂಬ ಸಮುದ್ರದಲ್ಲಿ ಪ್ರೀತಿಯನ್ನು ಸುಖವಾಗಿ ಅನುಭವಿಸಿದವರಿಗಿಂತ ಮುಳುಗಿ ಸತ್ತವರೇ ಹೆಚ್ಚು ಸ್ನೇಹಿತರೇ. ಪ್ರೀತಿ ಮಾಡುವವರಲ್ಲಿ ಸುಖ ದುಃಖ ಸಂತೋಷ ನೋವು ನಲಿವು ಎಲ್ಲವನ್ನು ಒಳಗೊಂಡಿರುತ್ತದೆ. ಇನ್ನೂ ಸಾಮಾನ್ಯವಾಗಿ ಪ್ರೀತಿ ಮಾಡುವವರು ತಾವು ಪ್ರೀತಿಸಿದವರು ಸದಾ ಕಾಲ ನಮ್ಮ ಜೊತೆಗೆ ಖುಷಿಯಾಗಿ ಸಂತೋಷವಾಗಿ ಇರಬೇಕು ಅಂತ ತುಂಬಾನೇ ಆಸೆಯನ್ನು ಪಡುತ್ತಾರೆ. ಎಷ್ಟೇ ಕಷ್ಟಗಳು ಬಂದರು ಕೂಡ, ಜಗಳವಾದರು ಕೂಡ, ಕೋಪ ಮಾಡಿಕೊಂಡರು ಕೂಡ ಅವರ ಜೊತೆಗೆ ಸಮಯವನ್ನು ಕಳೆಯಲು ತುಂಬಾನೇ ಇಷ್ಟ ಪಡುತ್ತಾರೆ. ಅಂಥಹ ಸಮಯದಲ್ಲಿ ಪ್ರೇಮಿಗಳ ನಡುವೆ ಜಗಳಗಳು, ಮನಸ್ತಾಪ ಬಂದು ಅವರು ನಿಮ್ಮ ಜೊತೆಗೆ ಕೋಪವನ್ನು ಮಾಡಿಕೊಂಡು ದೂರ ಆಗುತ್ತಾರೆ ಅಂದರೆ ಆ ನೋವನ್ನು ಸಹಿಸಲಾರಲು ಆಗುವುದಿಲ್ಲ ತುಂಬಾನೇ ವೇದನೆ ಆಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಒಂದು ವಿಶೇಷವಾದ ಅದ್ಭುತವಾದ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ.

ನೀವು ಯಾರಾದರೂ ಜೊತೆಗೆ ಜಗಳವನ್ನು ಮಾಡಿಕೊಂಡು ದೂರವಾಗುತ್ತೀದ್ದರೆ, ನಿಮ್ಮನ್ನು ಪ್ರೀತಿ ಮಾಡಿದವರು ದೂರವಾಗುತ್ತಿದ್ದರೆ ನಿಮ್ಮ ಅಕ್ಕ ತಂಗಿ ಪ್ರೀತಿ ತಂದೆ ತಾಯಿ ಪ್ರೀತಿಯು ನಿಮಗೆ ಸಿಗುತ್ತಿಲ್ಲವೇ ಹಾಗಾದರೆ ನಾವು ತಿಳಿಸುವ ಈ ಉಪಾಯವನ್ನು ಮಾಡಿ. ಕಳೆದುಕೊಂಡು ಪ್ರೀತಿ ನಿಮ್ಮ ಹತ್ತಿರ ಖಂಡಿತವಾಗಿ ಮರಳಿ ಬರುತ್ತದೆ. ಹಾಗಾದರೆ ಆ ಉಪಾಯವೂ ಯಾವುದು ಅದನ್ನು ನಾವು ಯಾವ ರೀತಿಯಲ್ಲಿ ಮಾಡಿದರೆ ನಾವು ಇಷ್ಟ ಪಟ್ಟವರು ನಮ್ಮನ್ನು ತೊರೆದು ಹೋಗುವುದಿಲ್ಲ ಅಂತ ತಿಳಿಯೋಣ. ಈ ಉಪಾಯವು ತುಂಬಾನೇ ಸರಳವಾದ ಉಪಾಯವಾಗಿದೆ. ಇದನ್ನು ನೀವು ಯಾವ ಸಮಯದಲ್ಲಾದರೂ ಮಾಡಬಹುದು ಯಾವ ಸ್ಥಳದಲ್ಲಿ ಬೇಕಾದರೂ ಮಾಡಬಹುದು.

ಮೊದಲಿಗೆ ತುಳಸಿ ಎಲೆ ಬೇಕಾಗುತ್ತದೆ ಮತ್ತು ಒಂದು ಬಣ್ಣದ ಪೆನ್ಸಿಲ್ ಅಂದರೆ ಸ್ಕೆಚ್ ಪೆನ್ ತೆಗೆದುಕೊಳ್ಳಿ. ಸಾಮಾನ್ಯವಾಗಿ ನಿತ್ಯವೂ ಏಳುವ ಹಾಗೆ ಎದ್ದು ಸ್ನಾನಾದಿಗಳನ್ನು ಮಾಡಿ ಸ್ವಚ್ಛವಾದ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಈ ಉಪಾಯವನ್ನು ಮಾಡಬೇಕಾದರೆ ಮನಸ್ಸಿನಲ್ಲಿ ಯಾವುದೇ ಕೆಟ್ಟ ಭಾವನೆಗಳು, ಕಪಟಗಳು, ಇನ್ನೊಬ್ಬರಿಗೆ ಕೆಟ್ಟದ್ದು ಆಗಬೇಕು ಅನ್ನುವ ಮನೋಭಾವನೆಯನ್ನು ಇಟ್ಟುಕೊಂಡಿರಬಾರದು. ಏಕೆಂದರೆ ಪ್ರೀತಿಯನ್ನೂ ಪಡೆಯುವುದು ಒಂದು ಆಸೆ ಆಗಿರಬೇಕು ಹೊರತು ಹಠ ಆಗಿರಬಾರದು. ಹಠದಿಂದ ನಾವು ಯಾವುದನ್ನು ಕೂಡ ಗೆಲ್ಲಲು ಆಗುವುದಿಲ್ಲ ಮಿತ್ರರೇ. ನಂತರ ನೀವು ಈ ತುಳಸಿ ಗಿಡದ ಸುತ್ತಲೂ ಮೂರು ಪ್ರದಕ್ಷಿಣೆಯನ್ನು ಹಾಕಬೇಕು. ನಂತರ ಒಂದು ಎಲೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಹೆಸರು ಮತ್ತು ವಯಸ್ಸು ಬರೆಯಬೇಕು ಇನ್ನೊಂದರಲ್ಲಿ ನೀವು ಪ್ರೀತಿ ಮಾಡುವ ವ್ಯಕ್ತಿಯ ಹೆಸರು ಮತ್ತು ವಯಸ್ಸು ಬರೆದು ಅದನ್ನು ಕಿತ್ತು ತಂದು ನೀವು ಇಬ್ಬರು ಸ್ಥಳದಲ್ಲಿ ಇಡಬೇಕು. ಅವರ ಹೆಸರು ಬರೆಯುವಾಗ ದೇವರ ಹತ್ತಿರ ತುಂಬಾನೇ ಸಂಕಲ್ಪ ಮಾಡಿಕೊಂಡು ನಿಷ್ಕಲ್ಮಶ ಭಾವನೆಯಿಂದ ದೇವರಿಗೆ ಪರಿಕಲ್ಪನೆ ಮಾಡಬೇಕು. ಜೊತೆಗೆ ಈ ಮಂತ್ರವನ್ನು ಕೂಡ ಜಪಿಸಬೇಕು. ಅದುವೇ ಓಂ ಶ್ರೀ ಶ್ರಿಯೇ ನಮಃ. ಓಂ ಶ್ರೀ ತುಳಸಿ ದೇವಿಯೇ ನಮಃ ಅಂತ ಏಳು ಬಾರಿ ಹೇಳಬೇಕು ನಂತರ ಅದನ್ನು ಇಬ್ಬರು ಸೇರಿ ನೀರು ಹರಿಯುವ ಜಾಗದಲ್ಲಿ ಬಿಡಬೇಕು. ಹೀಗೆ ಮಾಡುವುದರಿಂದ ನೀವು ಪ್ರೀತಿ ಮಾಡುವ ವ್ಯಕ್ತಿಯ ಕೋಪ ಎಲ್ಲವೂ ಕಡಿಮೆ ಆಗಿ ಅವರು ನಿಮ್ಮ ಬಳಿ ಮತ್ತೆ ಮರಳಿ ಬರುತ್ತಾರೆ. ನೋಡಿದ್ರಲಾ ಸ್ನೇಹಿತರೇ, ಹಾಗಾದರೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *