ಕರೋನಾ ಕಾರಣದಿಂದ ಇಡೀ ಜಗತ್ತೆ ತತ್ತರಿಸಿ ಹೋಗಿದೆ. ಅದರಲ್ಲೂ ಭಾರತದಲ್ಲಿ ಕರೋನ ತನ್ನ ಕರಾಳ ಪ್ರಭಾವವನ್ನ ಬೀರಿದೆ. ಇದರಿಂದ ದೇಶವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕರೋನಾ ಕಾರಣದಿಂದ ಲಾಕ್ ಡೌನ್ ಮಾಡಲಾಗಿದ್ದು,ಎಲ್ಲಾ ಕ್ಷೇತ್ರಗಳು ನೆಲಕಚ್ಚಿವೆ. ಅದರಲ್ಲು ಸಿನೆಮಾ ರಂಗಕ್ಕೆ ತುಂಬಲಾಎಅದ ನಷ್ಟ ಎದುರಾಗಿದೆ. ಕನ್ನಡ ಚಿತ್ರರಂಗವು ಇದಕ್ಕೇನು ಹೊರೆತಾಗಿಲ್ಲ.

ಕನ್ನಡದ ಅನೇಕ ಚಿತ್ರಗಳು ಚಿತ್ರಮಂದಿರಕ್ಕೆ ಬರುವುದಕ್ಕೆ ಸಿದ್ದವಾಗಿದ್ದವು. ಕನ್ನಡದ ದಿಗ್ಗಜರ ಸಿನೆಮಾಗಳು ಬಿಡುಗಡೆಗೆ ಸಿದ್ದವಾಗಿ,ಕರೋನಾ ಕಾರಣದಿಂದ ಸ್ಥಗಿತಗೊಂಡಿವೆ.ಸುದೀಪ್ ಅವರ ಕೊಟಿಗೊಬ್ಬ೩,ವಿಕ್ರಾಂತ್ ರೋಣ,ದುನಿಯಾ ವಿಜಯ್ ಅವರ ಸಲಗ,ಅನೇಕ ಸಿನಿಮಾಗಳು ಇದರಲ್ಲಿ ಸೇರಿವೆ. ಇನ್ಟ್ರೆಸ್ಟಿಂಗ್ ವಿಷಯವೇನೆಂದರೆ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ3 ಚಿತ್ರದಲ್ಲಿ,ಸುದೀಪ್ ಅವರ ತಾಯಿ ಪಾತ್ರದಲ್ಲಿ ದರ್ಶನ್ ಗೆ ಹೀರೋಯಿನ್ ಆಗಿದ್ದ ನಟಿ ಕಾಣಿಸಿಕೊಂಡಿದ್ದಾರೆ.

ಹೌದು ಈ ಸುದ್ದಿಯನ್ನ ಚಿತ್ರತಂಡ ಹಂಚಿಕೊಂಡಿದೆ. ದರ್ಶನ್ ಅವರ ಹಿಟ್ ಚಿತ್ರಗಳಲ್ಲಿ ಒಂದಾದ,ಲಾಲಿ ಹಾಡು ಚಿತ್ರದ ನಾಯಕ ನಟಿ ಅಭಿರಾಮಿ ಕೋಟಿಗೊಬ್ಬನಿಗೆ ತಾಯಿಯಾಗಿದ್ದಾರೆ‌. ಮಲಯಾಳಂ ಮೂಲದ ನಟಿಯಾದ ಅಭಿರಾಮಿ ತನ್ನ ಮುಗ್ಧ ಅಭಿನಯ ಮತ್ತು ಮುದ್ದು ಮುಖದಿಂದ ತಮಿಳು,ಕನ್ನಡ ಮತ್ತು ತೆಲುಗು ಭಾಷೆಯ ಅಭಿಮಾನಿಗಳ ಮನಗೆದ್ದಿದ್ದಾರೆ. ಲಾಲಿಹಾಡು ಚಿತ್ರದಲ್ಲಿ ಬರುವ “ನನ್ನ ಹೃದಯ ನನ್ನ ಹೃದಯ” ಹಾಡು ಇಂದಿಗು ಕನ್ನಡಿಗರ ಕಿವಿಯಲ್ಲಿ ಗುಯ್ ಗುಡುತ್ತಿರುತ್ತದೆ.ಅಷ್ಟರ ಮಟ್ಟಿಗೆ ಆ ಹಾಡು ಹಿಟ್ ಆಗಿತ್ತು.

ಆದರೆ ಅಭಿರಾಮಿಯವರು ಚಿತ್ರರಂಗದಿಂದ ದೂರ ಉಳಿದಿದ್ದರು.ವಿದೇಶದಲ್ಲಿ ವಾಸ್ತವ್ಯ ಹೂಡಿದ್ದರು.10 ವರ್ಷಗಳ ನಂತರ ಮತ್ತೆ ಅಭಿರಾಮಿ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *