ವೀಕ್ಷಕರೆಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿ ನಾನು ನಿಮಗೆ ಗಂಡ ಹೆಂಡತಿ ಜಗಳ ಮಾಡದಿರುವುದು ಹೇಗೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಹೇಗೆ ಬಾಳಬೇಕು ಎಂದು ಈ ಒಂದು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇನೆ ಹಾಗಾಗಿ ನೀವು ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ಗಂಡ ಹೆಂಡತಿಯ ಸಮಸ್ಯೆ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಇದ್ದೇ ಇರುತ್ತದೆ ಯಾರ ಮನೆಯಲ್ಲಿ ನೋಡಿದರೂ ಕೂಡ ಜಗಳ ಮನಸ್ತಾಪ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಿರುವುದು. ಎಷ್ಟೇ ಸಂಪಾದನೆ ಮಾಡಿದರು ಕೂಡ ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ.

ಒಂದಲ್ಲ ಒಂದು ವಿಷಯಕ್ಕೆ ಗಂಡ ಹೆಂಡತಿಯ ನಡುವೆ ಒಂದಲ್ಲ ಒಂದು ಜಗಳಗಳು ಬರುತ್ತಾ ಇರುತ್ತವೆ. ಅದು ಹಣಕಾಸಿನ ವಿಚಾರ ಆಗಿರಬಹುದು ಗಂಡನಿಗೆ ಗೊತ್ತಿಲ್ಲದೆ ಹೆಂಡತಿ ಮಾಡುವ ಸಾಲದ ವಿಚಾರ ಆಗಿರಬಹುದು. ಇವೆಲ್ಲ ಸಮಸ್ಯೆ ಕಳೆದು ಸುಖ ಸಂಸಾರ ನಡೆಸಬೇಕು ಗಂಡ ಹೇಳಿದ ಮಾತು ಕೇಳಬೇಕು. ಜೀವನದಲ್ಲಿ ನಾವು ಕೂಡ ಚೆನ್ನಾಗಿ ಬದುಕಿ ಬಾಳಬೇಕು ಎಂದರೆ ಈ ಒಂದು ಮಂತ್ರವನ್ನು ನೀವು 25 ದಿನಗಳ ಕಾಲ ಕಟ್ಟಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಸಾಕ್ಷಾತ್ ಶ್ರೀ ಸೂರ್ಯದೇವನ ಅನುಗ್ರಹದ ಒಂದು ಸೂಚನೆಯಾಗಿದೆ. ದಿನ ಸಂಜೆ ಮನೆಯ ಪೂರ್ವ-ದಕ್ಷಿಣ ಮೂಲೆಯಲ್ಲಿ ದೀಪವನ್ನು ಬೆಳಗಿಸಬೇಕು. ಇದರಿಂದ ನಿಮ್ಮ ಸಂಬಂಧದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ಉಳಿಸಿಕೊಳ್ಳಬಹುದಾಗಿದೆ.
ವೈವಾಹಿಕ ಜೀವನದಲ್ಲಿ ನಿರಂತರ ಜಗಳಗಳು ಆಗುತ್ತಿದ್ದರೆ, ಶಿವ ಮತ್ತು ಪಾರ್ವತಿಯರ ವಿಗ್ರಹದ ಮುಂದೆ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಹಾಗೇ ಶಿವ ಚಾಲೀಸಾವನ್ನು ಪಠಿಸಬೇಕು. ಶಿವ ಚಾಲಿಸಾವನ್ನು ಭಕ್ತಿಯಿಂದ ಪಠಿಸಿದಲ್ಲಿ ಪತಿ-ಪತ್ನಿಯರ ಸಂಬಂಧ ಗಟ್ಟಿಯಾಗಿ, ಪ್ರೀತಿ ಮೂಡುತ್ತದೆ.ವೈವಾಹಿಕ ಜೀವನ ಸುಖಮಯವಾಗಿರಲು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ಹಾಕಬೇಕು. ಇದೇ ವೇಳೆ ಮನೆಯ ವಾಸ್ತುದೋಷವನ್ನು ನಿವಾರಿಸುತ್ತದೆ.

ಪರಸ್ಪರ ಪ್ರೀತಿ ಇರಲಿ. ಪ್ರೀತಿ ಇದ್ದಾಗ ಹೊಂದಾಣಿಕೆ ಕಷ್ಟವಾಗುವುದಿಲ್ಲ. ಯಾರೂ ಪರಿಪೂರ್ಣರಲ್ಲ. ಒಬ್ಬರು ಸಿಟ್ಟುಗೊಂಡಾಗ ಇನ್ನೊಬ್ಬರು ಮೌನ, ತಾಳ್ಮೆ ವಹಿಸಿ. ನೀವು ಈ ಸಣ್ಣ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ಈ ಸಲಹೆಗಳ ಸಹಾಯದಿಂದ ನೀವು ನಿಮ್ಮ ಸಂಬಂಧವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಬಹಳ ಮುಖ್ಯ. ಏಕೆಂದರೆ ಸಂಬಂಧದಲ್ಲಿ ನಂಬಿಕೆ ಇಲ್ಲದಿದ್ದರೆ, ಸಂಬಂಧವು ಮುರಿದುಹೋಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ

Leave a Reply

Your email address will not be published. Required fields are marked *