ನಮ್ಮ ಭಾರತದಲ್ಲಿ ನಮ್ಮಗೆ ಗೊತ್ತಿರುವ ಹಾಗೆ ಭೂಮಿಯಲ್ಲಿ ಬಹಳಷ್ಟು ಖನಿಜಗಳು ಇವೆ. ಈ ಖನಿಜಗಳು ಎಷ್ಟು ಬೆಲೆ ಬಾಳುವಂತಹ ವಸ್ತುಗಳಾಗಿವೆ . ಹಾಗಾಗಿ ನಮ್ಮ ಭೂಮಿಯ ಒಳಗಡೆ ಏನೇನು ಇದೆ ಎಂಬುದನ್ನು ನಾವು ಇಂದಿನವರೆಗೂ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಕೇವಲ 30% ಅಥವಾ 40% ಅಷ್ಟು ನಾವು ಭೂಮಿಯ ಬಗ್ಗೆ ತಿಳಿದಿದ್ದೇವೆ. ಎಂದರೆ ತಪ್ಪಾಗಲಾರದು.ಭೂಮಿ ಒಂದು ರೀತಿಯ ದೊಡ್ಡ ಸ್ವಿಸ್ ಬ್ಯಾಂಕ್ ಇದ್ದ ಹಾಗೆ ನಾವು ಭೂಮಿಯಲ್ಲಿ ಏನಾದ್ರು ಬಚ್ಚಿಟ್ಟು 100 ವರ್ಷಗಳ ನಂತರ ಅದನ್ನು ಆಚೆ ತೆಗೆಯಬಹುದು. ಆದ್ರೆ ಬಚ್ಚಿಟ್ಟ ಸ್ಥಳ ಗೊತ್ತಿರಬೇಕು ಅಷ್ಟೇ. ಹೀಗೆ ಕೆಲವೊಮ್ಮೆ ದೊಡ್ಡ ದೊಡ್ಡ ನೀಧಿಗಳು ಭೂಮಿಯಲ್ಲಿ ಸಿಗುತ್ತದೆ.

ಅದು ಯಾವಾಗ ಸಿಗುತ್ತೆ, ಎಲ್ಲಿ ಸಿಗುತ್ತೆ ಅನ್ನೋದು ಮಾತ್ರ ಗೊತ್ತಿರಲ್ಲ. ಈಗ ಒಂದಷ್ಟು ಮಳೆ ಬಿದ್ದಿರುವುದರಿಂದ ಜಮೀನನ್ನು ಉಳುಮೆ ಮಾಡಿ ರಾಗಿ ಹಾಕೋಣ ಎಂದು ಒಬ್ಬ ರೈತ ನೆಗೆಲು ಹೊಡೆಯುತ್ತಿದ್ದ. ಆಗ ಆತನಿಗೆ ಭೂಮಿಯಲ್ಲಿ ಕಾಣಿಸಿದ್ದು ಏನು ಗೊತ್ತಾ ತೆಲಂಗಾಣ ರಾಜ್ಯದ ಸಿಂಕದರಾಬಾದ್ ಜಿಲ್ಲೆಯ ಸುಲ್ತಾನ್‌ಪುರದಲ್ಲಿ ಒಬ್ಬ ರೈತ ತನ್ನಲ್ಲಿ ಉಳಿತಾಯ ಮಾಡಿಕೊಂಡಿದ್ದ ಎಲ್ಲ ಹಣವನ್ನು ಕೊಟ್ಟು ಎರಡು ವರ್ಷದ ಹಿಂದೆ ಒಂದಷ್ಟು ಜಮೀನನ್ನು ಖರೀದಿ ಮಾಡಿದ ಹಾಗೆ ಎರಡು ವರ್ಷದಿಂದ ಆ ಜಮೀನಿನಲ್ಲಿ ರಾಗಿ ಶೇಂಗಾ ಬೆಳೆಯನ್ನು ತೆಗೆದಿದ್ದ ಹಾಗೆ ಈ ವರ್ಷ ಕೂಡ ಮುಂಗಾರಿಗೆ ರಾಗಿ ಹಾಕೋಣ ಎಂದು ಆ ಜಮೀನಿನಲ್ಲಿ ನೀರು ಹೊಡೆಯುತ್ತಿದ್ದ.

ಆಗ ಸಡನ್ ಆಗಿ ರೈತನಿಗೆ ಆಶ್ಚರ್ಯ. ಅಲ್ಲಿ ಕಾಣಿಸಿದ್ದು ಏನು ರೈತನಿಗೆ ಸಿಕ್ಕ ಎರಡು ಮಡಿಕೆಗಳು ಭೂಮಿಯಿಂದ ಆಚೆ ಬಂದವು. ಓ ಇದು ಬಚ್ಚಿಟ್ಟಿರುವ ನಿಧಿ ಇರಬೇಕು ಎಂದು ಭಾವಿಸಿದ ರೈತ ಜೋಪಾನವಾಗಿ ಮಡಿಕೆಗಳನ್ನು ಭೂಮಿಯಿಂದ ಆಚೆ ತೆಗೆದು ಒಳಗೆ ಏನಿದೆ ಎಂದು ನೋಡಿದ ರೈತನಿಗೆ ಇನ್ನಷ್ಟುಆಶ್ಚರ್ಯ. ಕಾರಣ ಎರಡು ಮಡಿಕೆಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಇದ್ದವು. ರೈತನ ಮನಸ್ಸಿನಲ್ಲಿ ಸಂತೋಷ, ಅದರ ಜೊತೆ ಭಯ ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿದ ರೈತ ಭೂಮಿಯಲ್ಲಿ ಸಿಕ್ಕ ಈ ಬಂಗಾರ ನನ್ನದಲ್ಲ.

ಹಾಗೆ ಇಲ್ಲಸಲ್ಲದ ಕಷ್ಟಗಳು ಯಾಕೆ ಎಂದು ಭಾವಿಸಿ ತಕ್ಷಣ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ ಕೂಡಲೇ ಅಲ್ಲಿಗೆ ಬಂದ ಕಂದಾಯ ಅಧಿಕಾರಿಗಳು ಎರಡು ಮಡಿಕೆಯಲ್ಲಿದ್ದ ಚಿನ್ನದ ಆಭರಣಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಸ್ಥಳದ ಮಾಹಿತಿಯನ್ನು ಪುರಾತತ್ವ ಇಲಾಖೆಯವರಿಗೆ ತಿಳಿಸಿದ್ದಾರೆ. ಹಿಂದಿನ ಕಾಲದಲ್ಲಿ ಕಳ್ಳರ ಕಾಟದಿಂದ ಹಾಗು ಬೇರೆ ರಾಜ್ಯಗಳ ಆಕ್ರಮಣದ ಭಯದಿಂದ ಆಗಿನ ಕಾಲದಲ್ಲಿ ಲಾಕರ್ ಇಲ್ಲದ ಸಮಸ್ಯೆಯಿಂದಾಗಿ ಬಹಳಷ್ಟು ಜನ ಮಣ್ಣಿನ ಒಳಗಡೆ ತಮ್ಮ ಆಭರಣವನ್ನು ಬಚ್ಚಿಡುತ್ತಿದ್ದರು ಹಾಗಾಗಿ ಆ ಬಚ್ಚಿಟ್ಟ ಆಭರಣಗಳು ಇಂದು ನಿಧಿಯ ರೂಪವಾಗಿ ನಮಗೆ ಸಿಗುತ್ತಿದ್ದಾವೆ.

Leave a Reply

Your email address will not be published. Required fields are marked *