ಶ್ರೀಮಂತರಾಗಿರಬೇಕು ಎಂಬುದು ಎಲ್ಲರ ಕನಸಾಗಿದೆ ನಾವು ಕೋಟ್ಯಾಧಿಪತಿ ಗಳಾಗಿರಬೇಕು. ಸಂಪತ್ತನ್ನ ಅಭಿವೃದ್ಧಿಪಡಿಸಬೇಕು ಹಣವನ್ನು ಗಳಿಸಬೇಕು ಹೆಸರನ್ನು ಗಳಿಸಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿದೆ. ಖಂಡಿತ ಅದು ತಪ್ಪಲ್ಲ ನಾವು ಅಭಿವೃದ್ಧಿ ಹೊಂದಬೇಕು ಎನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ಇರುತ್ತದೆ. ಕೆಲಸವನ್ನು ಮಾಡ್ತಾ ಹೋಗ್ತಾನೆ.

ಕೆಲವೊಮ್ಮೆ ಎಷ್ಟೇ ದುಡಿದರೂ ಎಷ್ಟೇ ಕಷ್ಟಪಟ್ಟರು ಕೂಡ ಹಣ ಬರುತ್ತೆ ನಮ್ಮ ಕೈಲಿ ನಿಲ್ಲೋದಿಲ್ಲ. ಹೀಗೆ ಬಂದು ಹಾಗೆ ಹೊರಟು ಹೋಗುತ್ತೆ. ಆದರೆ ಎಲ್ಲ ಸಮಸ್ಯೆಗಳಿಗೂ ಕೂಡ ಒಂದು ಪರಿಹಾರ ಇದ್ದೇ ಇರುತ್ತದೆ. ಇದಕ್ಕೆಲ್ಲ ಏನು ಕಾರಣ ಎಂದು ಚಿಂತಿಸುವ ಅಗತ್ಯವಿಲ್ಲ ಇದರ ಬಗ್ಗೆ ನಾವು ನಿಮಗೆ ಸಂಪೂರ್ಣವಾಗಿ ಪರಿಹಾರವನ್ನು ನೀಡುತ್ತೇವೆ. ದಯವಿಟ್ಟು ಪೂರ್ತಿ ಲೇಖನವನ್ನ ಓದಿ. ಪರಿಹಾರವನ್ನು ಕಂಡುಕೊಳ್ಳಿ. ಹಣವನ್ನ ಸಂಪತ್ತು ಲಕ್ಷ್ಮಿ ಅಂತ ನಾವು ಕರೆಯುತ್ತೇವೆ. ಅದಕ್ಕೆ ಮೊದಲು ಹಣವನ್ನು ನಾವು ಗೌರವಿಸುವುದನ್ನ ಕಲಿಯಬೇಕು. ಎಲ್ಲೆಂದರಲ್ಲಿ ಹಣವನ್ನು ಇಡಬಾರದು. ನಮಗೆ ಹಣ ಅಭಿವೃದ್ಧಿ ಆಗಬೇಕೆಂದರೆ ಕೆಲವು ಅಭ್ಯಾಸಗಳನ್ನು ಕೂಡ ನಾವು ರೂಡಿಸಿಕೊಳ್ಳಬೇಕು ತಾಳ್ಮೆಯಿಂದ ವರ್ತಿಸಬೇಕು. ಆಗ ಅಷ್ಟೇ ನಮ್ಮ ಕೈಯಲ್ಲಿ ಹಣ ಉಳಿದುಕೊಳ್ಳುತ್ತದೆ.

ಮೊದಲು ಮಾಡುವ ತಪ್ಪು ಎಂದರೆ ನಾವು ಹಣವನ್ನು ಇಡುವಾಗ ಎಲ್ಲಾ ಹಣವನ್ನು ಒಟ್ಟಿಗೆ ಇಡುತ್ತೇವೆ ಹರಿದ ನೋಟುಗಳನ್ನು ಸೇರಿಸಿ ಆ ಹರಿದ ನೋಟನ್ನ ಒಳ್ಳೆಯ ನೋಟುಗಳ ಜೊತೆ ಇಟ್ಟಾಗ ಅದು ಒಳ್ಳೆಯದಲ್ಲ ಆ ರೀತಿ ಯಾವಾಗಲೂ ಕೂಡ ಮಾಡಬಾರದು ಹರಿದ ನೋಟನ್ನ ಬೇರೆ ಕಡೆಗೆ ಇಡಬೇಕು ಆದಷ್ಟು ಬೇಗ ಖರ್ಚು ಮಾಡಬೇಕು. ಮತ್ತೊಂದು ವಿಷಯ ಏನಂದರೆ ಹಣವನ್ನ ಇರಿಸುವಾಗ ನಕಾರಾತ್ಮಕ ವಿಷಯಗಳೊಂದಿಗೆ ಇರಿಸಬಾರದು ಯಾವುದೇ ಕೋರ್ಟು ಕಚೇರಿ ಪತ್ರಗಳೊಂದಿಗೆ ವಿವಾದದ ಪತ್ರಗಳೊಂದಿಗೆ ಆಸ್ತಿ ಹಂಚಿಕೆಯ ಪತ್ರದೊಂದಿಗೆ ಈ ರೀತಿಯಾಗಿ ಹಣವನ್ನ ಇಡಬಾರದು ಹಣವನ್ನು ಅದಕ್ಕೆ ಒಂದು ಸಪರೇಟ್ ಜಾಗದಲ್ಲಿ ಇಡಬೇಕು.

ಇನ್ನು ಮತ್ತೊಂದು ವಿಷಯ ಎಂದರೆ ಹಣವನ್ನು ಇರಿಸುವಾಗ ನಾವು ಔಷಧಿಯನ್ನು ನೀಡುತ್ತೇವೆ ಅಲ್ಲಿ ಹಣವನ್ನು ಇಟ್ಟುಬಿಡುತ್ತೇವೆ ಇದು ಮೂಲತಃ ದೊಡ್ಡ ತಪ್ಪು ಹಣವನ್ನ ನಾವು ಹೇಗೆ ಕಾಣುತ್ತೇವೆಯೋ, ಅದೇ ರೀತಿಯಲ್ಲಿ ಹಣವು ಕೂಡ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ. ನಾವು ಹಣವನ್ನ ಎಷ್ಟು ಗೌರವದಿಂದ ಕಾಣುತ್ತೇವೋ ಅಷ್ಟೇ ಗೌರವಯುತವಾಗಿ ಹಣ ನಮ್ಮ ಕೈ ಸೇರುತ್ತದೆ ಯಾವುದಾದರೂ ನೆಗೆಟಿವ್ ಎನರ್ಜಿ ಜೊತೆ ಮಾಡಿದಾಗ ಹಣವು ನಮ್ಮ ಕೈನಲ್ಲಿ ನಿಲ್ಲೋದೇ ಇಲ್ಲ. ಸ್ನೇಹಿತರೆ ಮುಂದಿನ ಹೊಸ ವಿಚಾರದೊಂದಿಗೆ ಮತ್ತೆ ಭೇಟಿಯಾಗೋಣ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *