ಹಳ್ಳಿ ಜನರಲ್ಲಿ ಒಂದು ಮನಸ್ಥಿತಿ ಬೆಳೆದುಕೊಂಡಿದೆ. ಅವರಿಗೆ ಮಕ್ಕಳು ವ್ಯವಸಾಯ ಮಾಡುವುದು ಬೇಕಾಗಿಲ್ಲ. ಬೆಂಗಳೂರಿನಲ್ಲಿ ಯಾವುದಾದರೂ ಕೆಲಸ ಮಾಡಬೇಕು.ಆದರೆ ಬೆಂಗಳೂರಿಗೆ ಕೆಲಸ ಅರಸಿ ಬರುವ ಮಕ್ಕಳ ಪರಿಸ್ಥಿತಿ ಹೇಳತೀರದು. ತಂದೆ ತಾಯಿಯರಿಂದ ದೂರ ಇರಬೇಕು. ಬೆಳಗ್ಗೆ ಎದ್ದು ಹಚ್ಚ ಹಸಿರು ನೋಡುವ ಬದಲು ನಗರದಲ್ಲಿ ವಾಹನಗಳ ಕರ್ಕಶ ಶಬ್ದ ಕೇಳಬೇಕು.ತಾಯಿ ಮಾಡುವ ರುಚಿಕರ ಹಾಗೂ ಆರೋಗ್ಯಕರವಾದ ಊಟ ತಿನ್ನುವ ಬದಲು ರಸ್ತೆ ಪಕ್ಕದಲ್ಲಿ ಊಟ, ಆತುರಾತುರದಲ್ಲಿ ಮಾಡುವ ಗೊಜ್ಜು ತಿಂದು ಬೊಜ್ಜು ಬೆಳಸಿ ಕೊಳ್ಳಬೇಕು. ಕೊನೆಗೆ 1 ದಿನ ನನ್ನ ಜೀವನ ಇದಾ ಜೀವನಾನಾ ಎಂದು ಅನ್ನಿಸಿ ಬಿಡಬೇಕು. ಆದರೆ ಇವರು ಹಾಗೆ ಮಾಡಲಿಲ್ಲ. ಕೆಲಸವನ್ನು ತಿರಸ್ಕರಿಸಿ ಕಂಪನಿ ಸಿಇಒ ಗಳಿಸುವಷ್ಟು ಹಣ ಗಳಿಸುತ್ತಿದ್ದಾರೆ.

ಅದು ಆರೋಗ್ಯದಿಂದ .ಇವರ ಹೆಸರು ಸತೀಶ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದವರು. ಡಿಗ್ರಿ ಮಾಡಿರುವ ಸತೀಶ್ ಅವರಿಗೆ ಒಂದು ಕೆಲಸ ಸಿಕ್ಕಿತು. ಆದರೆ ಅದಕ್ಕೆ 16,00,000 ಲಂಚ ಕೊಡಬೇಕಾಗಿತ್ತು.ಸಾಲ ಮಾಡಿ ಹಣ ಕೊಟ್ಟು ಮಗನನ್ನು ಕೆಲಸಕ್ಕೆ ಸೇರಿಸಲು ಸತೀಶ್ ಅವರ ತಂದೆ ಸಿದ್ಧರಿದ್ದರು. ಆದರೆ ಆ ಕೆಲಸ ಬೇಡ ಎಂದ ಸತೀಶ್ ಅವರು ತಮಗಿದ್ದ ಒಂದು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು. ಸತೀಶ್ ಅವರ ತಂದೆ 15 ವರ್ಷದಿಂದ ತರಕಾರಿ ಬೆಳೆಯುತ್ತಿದ್ದರು.ತಂದೆ 15 ವರ್ಷದಿಂದ ತರಕಾರಿ ಬೆಳೆಯುತ್ತಿದ್ದರು. ಆದರೆ ಇಳುವರಿ ಗುಣಮಟ್ಟ ಕಳಪೆ ಆಗಿದ್ದರಿಂದ ಆದಾಯ ಬರುತ್ತಿರಲಿಲ್ಲ. ವ್ಯವಸಾಯಕ್ಕೆ ಇಳಿದ ಸತೀಶ್ ಮೊದಲು ಒಂದಷ್ಟು ದಿನ ಬೆಲೆ ಹಾಗೂ ಮಾರುಕಟ್ಟೆಯ ಬಗ್ಗೆ ರಿಸರ್ಚ್ ಮಾಡಿ ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ತಿಳಿದುಕೊಂಡರು.

ಅದರಂತೆ ಹಾಗಲಕಾಯಿ ಬೆಳೆಯಲು ಮುಂದಾಗಿ ತಮ್ಮ ಒಂದೂವರೆ ಎಕ್ರೆಯನ್ನು ತುಂಡುಗಳಾಗಿ ಮಾಡಿಕೊಂಡು ವರ್ಷವಿಡಿ ಬೆಳೆಯಲು ಮುಂದಾದರು.ಕೊನೆಗೂ ಹಾಗಲಕಾಯಿ ಬೆಳೆಯುವುದರಲ್ಲಿ ಯಶಸ್ಸು ಕಂಡಿರುವ ಸತೀಶ್ ಅವರು ಋತುವಿನಲ್ಲಿ 50 ಕ್ವಿಂಟಾಲ್ ಬೆಳೆಯುತ್ತಾರೆ. ಕಳೆದ ವರ್ಷ 48 ಸಾವಿರಕ್ಕೆ ಒಂದು ಕ್ವಿಂಟಲ್ ಲೆಕ್ಕದಲ್ಲಿ ಮಾರಾಟ ಮಾಡಿದರು. ಋತುಗಳಲ್ಲಿ ದಿನಕ್ಕೆ 35,000 ವರೆಗೂ ಗಳಿಸುತ್ತಿದ್ದಾರೆ.ಸತೀಶ್ ಅವರು ಹಾಗಲಕಾಯಿ ಹಲವಾರು ಒಂದು ಕ್ವಿಂಟಲ್ ಲೆಕ್ಕದಲ್ಲಿ ಮಾರಾಟ ಮಾಡಿದರು. ಋತುಗಳಲ್ಲಿ ದಿನಕ್ಕೆ 35,000 ವರೆಗೂ ಗಳಿಸುತ್ತಿದ್ದಾರೆ. ಸತೀಶ್ ಅವರು ಹಾಗಲಕಾಯಿ ಹಲವಾರು ರೋಗಗಳಿಗೆ ರಾಮಬಾಣ ಇತ್ತೀಚಿಗೆ ಜನ ಹೆಚ್ಚು ತಿನ್ನುತ್ತಿದ್ದಾರೆ ಹಾಗು ಇದನ್ನು ಔಷಧಿಗಳಿಗೆ ಹೆಚ್ಚು ಬಳಸುತ್ತಾರೆ. ಸಸಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸತೀಶ್ ಅವರು ಅವುಗಳನ್ನು ಅವರು ಅವುಗಳನ್ನು ಬಳುಸುತ್ತಾರೆ.

Leave a Reply

Your email address will not be published. Required fields are marked *