ಇತ್ತೀಚಿಗೆ ಮಾನವನಿಗೆ ಕಾಡುವ ಅನಾರೋಗ್ಯ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಕೂಡ ಒಂದಾಗಿದೆ. ಈ ಸಮಸ್ಯೆ ನಮಗೆ ಪ್ರಮುಖವಾಗಿ ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಬರುತ್ತದೆ. ಆದರೆ ಈ ಸಮಸ್ಯೆಗೆ ಆಸ್ಪತ್ರೆಗೆ ಹೋದರೆ ಆಪರೇಷನ್ ಮಾಡಿಸಲು ಹೇಳುತ್ತಾರೆ. ಆದರೆ ಆಪರೇಷನ್ ಆದ ಬಳಿಕವೂ ಪುನಃ ಕಿಡ್ನಿಯಲ್ಲಿ ಕಲ್ಲುಗಳು ಶೇಖರಣೆಯಾಗುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ನಿಮಗೆ ಪುನಃ ಈ ಸಮಸ್ಸ್ಯೆ ಬರಬಾರದೆಂದರೆ ಈ ಮಾರ್ಗಗಳನ್ನು ಅನುಸರಿಸುವುದು ಒಳ್ಳೆಯದು.

ನಾವು ಸೇವಿಸುವ ಸೋಡಾ, ತಂಪು ಪಾನೀಯಗಳು, ಕಿಡ್ನಿಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ, ತಂಪು ಪಾನೀಯದಲ್ಲಿ ಇರುವ ಆಸಿಡ್ ದೇಹದ ಮೂಳೆಗಳಲ್ಲಿ ಕ್ಯಾಲ್ಶಿಯಂ ಹೀರಿಕೊಂಡು ಕಿಡ್ನಿಯಲ್ಲಿ ಕಲ್ಲು ಕಟ್ಟುವಂತೆ ಮಾಡುತ್ತವೆ, ಆದ್ದರಿಂದ ತಂಪು ಪಾನೀಯಗಳನ್ನು ನೀವು ಯಾವುದೇ ಕಾರಣಕ್ಕೂ ಕುಡಿಯಬೇಡಿ.

ಪ್ರತಿನಿತ್ಯ ಶುದ್ಧ ಕುಡಿಯುವ ನೀರನ್ನು ಕಡಿಮೆ ಎಂದರೂ ಸರಿ ಸುಮಾರು 4 ಲಿಟರ್ ನೀರು ಕುಡಿಯುವುದು ಒಳ್ಳೆಯದು, ನೀರು ಕುಡಿಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆಯಲ್ಲಿ ಮೂತ್ರ ವಿಸರ್ಜನೆಯ ಬಗ್ಗೆಯೂ ಗಮನ ಕೊಡಬೇಕು, ಮೂತ್ರವನ್ನು ಅತಿಯಾಗಿ ತಡೆಯುವುದು ಕೂಡ ಒಳ್ಳೆಯದಲ್ಲ.

ಸಾತ್ವಿಕ ಆಹಾರಗಳು ಅಂದರೆ ಹಸಿ ತರಕಾರಿಗಳು ನಿಮ್ಮ ಕಿಡ್ನಿಗಳನ್ನು ಆರೋಗ್ಯವಂತವಾಗಿ ಇಡಲು ಸಹಕರಿಸುತ್ತದೆ, ನಿಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಿ, ಸಕ್ಕರೆ ಹಾಗೂ ಉಪ್ಪಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿ, ಮಸಾಲೆ ಪದಾರ್ಥಗಳಿಂದ ದೂರ ಇರುವುದು ಕಷ್ಟವಾದರೂ ಎಷ್ಟು ಸಾಧ್ಯವೋ ಅಷ್ಟು ದೂರ ಇಟ್ಟರೆ ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು.

ಮಜ್ಜಿಗೆ,ತಾಜಾ ಮೊಸರು, ಪಪ್ಪಾಯಿ, ಸೇಬು, ಬಾಳೆಹಣ್ಣು, ಮಾವಿನ ಹಣ್ಣು, ನುಗ್ಗೆ ಕಾಯಿ, ಹುರಳಿ ಕಾಯಿ, ಕ್ಯಾರೆಟ್, ಎಳನೀರು, ಬಾರ್ಲಿ ನೀರನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಒಳಿತು ಮತ್ತು ಕಿಡ್ನಿ ಸ್ಟೋನ್ ಆಗುವುದನ್ನು ಕೂಡ ತಡೆಗಟ್ಟುತ್ತದೆ.

ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಾಗ ಬಟಾಣಿ ಉದ್ದಿನ ಬೇಳೆ ಆಲೂಗಡ್ಡೆ ಎಲೆಕೋಸು ಬಸಲೆ ಸೊಪ್ಪು ಬದನೆಕಾಯಿ ಹುಳಿ ಮೊಸರು ಕೆಂಪು ಹಸಿ ಮೆಣಸಿನಕಾಯಿ ಮಾಂಸ ಹಾಗು ಮಧ್ಯದಿಂದ ದೂರ ಇರುವುದು ಒಳ್ಳೆಯದು, ಇವು ಕಿಡ್ನಿಯಲ್ಲಿ ಕಲ್ಲುಗಳ ಬೆಳವಣಿಗೆಯನ್ನು ಹೆಚ್ಚು ಮಾಡುತ್ತದೆ.

ಬ್ಲಾಕ್ ಬೀನ್ಸ್ ಮತ್ತು ಬಾಳೆ ಹೂವು ಕಿಡ್ನಿಯ ಕಲ್ಲನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ, ಇವುಗಳನ್ನು ಸಾಧ್ಯವಾದಷ್ಟು ಹೆಚ್ಚು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ದೂರ ಉಳಿಯಬಹುದು. ಅದರಲ್ಲೂ ಬಾಳೆದಿಂಡಿನ ರಸ ಕುಡಿಯಿರಿ ಹಾಗೂ ಇದರ ಪಲ್ಯ ಸೇವನೆ ಮಾಡಿ ಇದು ಕಿಡ್ನಿ ಸ್ಟೋನ್ ಸಮಸ್ಯೆಗೆ ರಾಮಬಾಣವಾಗಿದೆ.

Leave a Reply

Your email address will not be published. Required fields are marked *