ನಮ್ಮ ಭಾರತ ದೇಶ ಪುಣ್ಯಕ್ಷೇತ್ರಗಳ ತವರೂರು ವಿಶೇಷ ಶಕ್ತಿ ಹೊಂದಿರುವ ದೇವಾನುದೇವತೆಗಳಿಗೆ ಮೀಸಲಿರುವ ಹಲವಾರು ತೀರ್ಥಕ್ಷೇತ್ರಗಳು ಈ ನಮ್ಮ ದೇಶದಲ್ಲಿ ಇವೆ ಅದರಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬರಾದಂತಹ ಶಿವ ಪರಮಾತ್ಮ ರನ್ನು ಆರಾಧನೆ ಮಾಡುವಂತಹ ದೇವಾಲಯಗಳು ಅದೆಷ್ಟು ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ನಮ್ಮ ಈ ಭಾರತ ದೇಶದಲ್ಲಿ ಕಂಡುಬರುತ್ತವೆ. ಈ ಜಗತ್ತಿಗೆ ಒದಗಿ ಬರುವ ಕಷ್ಟಕಾರ್ಪಣ್ಯಗಳನ್ನು ವಿನಾಶಗೊಳಿಸುವ ಸಾಮರ್ಥ್ಯ ಹೊಂದಿರುವಂತಹ ಶಿವ ಪರಮಾತ್ಮನನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಲಿಂಗ ರೂಪದಲ್ಲಿ ಪೂಜೆ ಮಾಡಲಾಗುತ್ತದೆ.

ನಾವು ಇಂದು ಈ ವಿಶೇಷ ಸಂಚಿಕೆಯಲ್ಲಿ ಅತ್ಯದ್ಭುತವಾದ ಶಿವ ದೇಗುಲದ ಬಗ್ಗೆ ಮಾಹಿತಿಯನ್ನು ವಿಸ್ತರಿಸುತ್ತಾ ಇದ್ದೇವೆ ಬ್ರಹ್ಮಾಂಡದ ಮೊದಲ ಶಿವಲಿಂಗ ಉಗಮವಾಗಿದ್ದು ವಿದ್ಯೆ ಕ್ಷೇತ್ರದಲ್ಲಿ ಎಲ್ಲಿಂದಲೇ ಶಿವ ಪರಮಾತ್ಮನ ಲಿಂಗ ರೂಪದಲ್ಲಿ ಪೂಜಿಸುವ ಸಂಪ್ರದಾಯ ಪ್ರಾರಂಭವಾದದ್ದು ಅಷ್ಟು ಮಾತ್ರವಲ್ಲದೆ ನಾವು ಪ್ರತಿನಿತ್ಯ ಪಠಿಸುವಂತಹ ಮೃತ್ಯುಂಜಯ ಮಂತ್ರ ಉಗಮವಾದದ್ದು ಇದೇ ಕ್ಷೇತ್ರ ದಲ್ಲಿ ಈ ಮಹಾನ್ ಶಕ್ತಿಶಾಲಿ ಆದಂತಹ ಕ್ಷೇತ್ರದ ಹೆಸರು ಜಾಗೇಶ್ವರ ದೇವ ಭೂಮಿ ಉತ್ತರಖಂಡ ರಾಜ್ಯದಲ್ಲಿ ಕಂಡುಬರುವಂತಹ ಒಂದು ಪ್ರಮುಖ ಕ್ಷೇತ್ರ .

ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ಬಂದು ಭೇಟಿ ಕೊಡುತ್ತಾರೆ.ಈ ಜಾಗೇಶ್ವರ ಉತ್ತರಖಂಡ ರಾಜ್ಯದ 35km ದೂರದಲ್ಲಿ ಇರುವಂತಹ ದಟ್ಟವಾದ ವರಗಳಿಂದ ಕಂಗೊಳಿಸುವ ಅರಣ್ಯದ ಮಧ್ಯ ಇದೆ ಜಾಗೇಶ್ವರ ದೇವಾಲಯ ಅಥವಾ ಜಾಗೇಶ್ವರ ಧಾಮ ದಟ್ಟ ಕಾಡಿನ ನಡುವೆ ಇರುವಂತಹ ಈ ಸುಂದರ ಪ್ರದೇಶದ ಪಕ್ಕದಲ್ಲಿ ಜಠರಂಗ ಎಂಬ ನದಿ ಪ್ರವಹಿಸುತ್ತದೆ ಭಾರತದ ಅತ್ಯಂತ ಪ್ರಾಚೀನ ಶಿವ ದೇವಾಲಯಗಳಲ್ಲಿ ಮುಂಚೂಣಿಯಲ್ಲಿ ಬರುವ ಜಗದೀಶ್ವರ ಸಮುದ್ರಮಟ್ಟದಿಂದ 1280 ಮೀಟರ್ ಎತ್ತರದಲ್ಲಿ ಇದೆ ಜಾಗೇಶ್ವರ ಗ್ರಾಮದಲ್ಲಿ ಕೇವಲ ಒಂದು ದೇವಾಲಯವಿಲ್ಲ ಸುಮಾರು 175 ಸಣ್ಣಪುಟ್ಟ ದೇವಾಲಯಗಳನ್ನು ಒಳಗೊಂಡಿರುವಂತಹ ದೇವಾಲಯಗಳ ಸಮೂಹವಾಗಿದೆ ಈ ಎಲ್ಲಾ ದೇವಾಲಯಗಳನ್ನು ಸುಮಾರು ಏಳು ಮತ್ತು 12ನೇ ಶತಮಾನದ ನಡುವಿನ ಕಾಲಘಟ್ಟದಲ್ಲಿ ನಿರ್ಮಿಸಲಾಗಿದೆ.

ಈ ದೇವಾಲಯಗಳು ಉತ್ತರ ಭಾರತದ ನಾಗರ ಶೈಲಿಯ ವಾಸ್ತು ಶಿಲ್ಪಶೈಲಿಯಲ್ಲಿ ನಿರ್ಮಾಣಗೊಂಡಿದೆ ಈ ದೇಗುಲಗಳಲ್ಲಿ ಅತಿ ಹೆಚ್ಚು ದೇಗುಲಗಳು ಶಿವ ದೇವರಿಗೆ ಸಮರ್ಪಿತವಾಗಿವೆ ಸುಮಾರು ನೂರಕ್ಕೂ ಅತಿ ಹೆಚ್ಚು ದೇಗುಲಗಳಲ್ಲಿ ಶಿವಲಿಂಗಗಳು ಇವೆ ಪ್ರತಿನಿತ್ಯ ಎಲ್ಲಾ ಶಿವಲಿಂಗಗಳಿಗೆ ಅಭಿಷೇಕವನ್ನು ಮಾಡಿ ಪುಷ್ಪವನ್ನು ಇಡಲಾಗುತ್ತದೆ ಈ ಎಲ್ಲಾ ದೇಗುಲಗಳು ಪ್ರಮುಖವಾದ ದೇಗುಲಗಳೆಂದರೆ ಮಹಾಮೃತ್ಯುಂಜಯ ದೇವಾಲಯ ಹಾಗೂ ಜಾಗೇಶ್ವರ ದೇವಾಲಯ ಉಳಿದಂತೆ ಕುಬೇರ ದೇವಾಲಯ ನಂದಾದೇವಿ ದೇವಾಲಯ ವಿಷ್ಣು ದೇವಾಲಯ ಹಾಗೂ ನವಗ್ರಹ ದೇವಾಲಯಗಳು ಇಲ್ಲಿನ ಪ್ರಮುಖ ದೇಗುಲಗಳು ಆಗಿವೆ.

ಭಕ್ತಾದಿಗಳ ನಂಬಿಕೆ ಪ್ರಕಾರ ಇಲ್ಲಿ ಬಂದು ಭೇಟಿ ನೀಡಿದ್ದಾರೆ ಯಾವುದೇ ರೀತಿಯಾದಂತಹ ವ್ಯಕ್ತಿಗಳಿಗೆ ಮೃತ್ಯು ಭಯವಿದ್ದರೆ ಅವಳು ಕೂಡ ಇಲ್ಲಿಗೆ ಬಂದು ಕಡಿಮೆಯಾಗುತ್ತದೆ ಎಂದು ನಂಬಿದ್ದಾರೆ ಅದಷ್ಟೇ ಅಲ್ಲದೆ ಇಲ್ಲಿ ನಿಲ್ಲಿಸಿರುವಂತಹ ಶಿವನ ಮೂರ್ತಿಯಿಂದ ಆದಷ್ಟು ಜನಗಳು ಜೀವನವನ್ನು ಬದಲಾಯಿಸಿಕೊಂಡಿದ್ದಾರೆ ಎಂಬ ಮಾತಿದೆ. ಅದಷ್ಟೇ ಅಲ್ಲದೆ ಶಂಕರಾಚಾರ್ಯರು ಕೂಡ ಇಲ್ಲಿಗೆ ಬಂದು ಭೇಟಿ ನೀಡಿ ಅವರೇ ಇಲ್ಲಿ ಶಿವಲಿಂಗ ಮೂರ್ತಿಯನ್ನು ಮರು ಪ್ರತಿಷ್ಠಾಪನೆ ಮಾಡಿದ್ದಾರೆ

Leave a Reply

Your email address will not be published. Required fields are marked *