ಸ್ನೇಹಿತರೇ ಭದ್ರಕಾಳಿಯಮ್ಮ ದೇವಸ್ಥಾನ, ಕೊಯಂಬತ್ತೂರು, ಪ್ರತಿದಿನ ಭೇಟಿ ಕೊಡಬೇಕಾದ ಅತ್ಯಂತ ಶಕ್ತಿಶಾಲಿ ದೇವಸ್ಥಾನವಿದೆ. ನೀವೇನಾದರು ಈ ದೇವಸ್ಥಾನಕ್ಕೆ ಹೋದರೆ ಜೀವಂತ ದೇವರ ದರ್ಶನವಾಗಿ ಬಿಡುತ್ತೆ. ಯಾಕಪ್ಪಾ ಅಂದರೆ ಭಕ್ತರ ಕಣ್ಣ ಮುಂದೆಯೇ ದೇವಿ ನಡೆದುಕೊಂಡು ಬಂದು ಗರ್ಭಗುಡಿಯ ಭದ್ರಕಾಳಿ ಅಮ್ಮನ ವರ ಎಡ ಭುಜದ ಮೇಲೆ ಕೂರುವಂತೆ ಸ್ನೇಹಿತರೇ ಬೆಂಗಳೂರಿನಿಂದ ಸುಮಾರು 362 ಕಿಲೋಮೀಟರ್ ಪ್ರಯಾಣ ಮಾಡಿದರೆ ದೇವರಗಳ ತವರೂರಾದ ತಮಿಳ್ ನಾಡು ರಾಜ್ಯದ ಕೊಯಮತ್ತೂರು ನಗರ ಸಿಗುತ್ತೆ.

ಕೊಯಂಬತ್ತೂರ್ ನಗರದ ಪ್ರಸಿದ್ಧ ಬಜಾರ್ ಸ್ಟ್ರೀಟ್ ರಸ್ತೆಯಲ್ಲಿ ಎರಡೂ ಭದ್ರಕಾಳಿ ದೇವಸ್ಥಾನವಿದೆ ಶ್ರೀ ರಸ್ತೆಯ ಉತ್ತರ ದಿಕ್ಕಿನಲ್ಲಿ ಒಂದು ಭದ್ರಕಾಳಿ ಅಮ್ಮನವರ ದೇವಸ್ಥಾನ ಮತ್ತು ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ಭದ್ರಕಾಳಿ ಅಮ್ಮನ ವರ ದೇವಸ್ಥಾನ ನೀವೇನಾದರೂ ಈ ದೇವರ ಪವಾಡ ನೋಡ ಬೇಕು ಅಂದ್ರೆ ಉತ್ತರ ದಲ್ಲಿ ನೆಲೆಸಿರುವ ಭದ್ರಕಾಳಿ ಮಾತೆ ದೇವಸ್ಥಾನಕ್ಕೆ ಹೋಗಬೇಕು. ಎರಡು ದೇವಸ್ಥಾನವು ಸುಮಾರು ಸಾವಿರಾರು ವರ್ಷಗಳ ಪುರಾತನದ್ದು ಮತ್ತು ದೇವಸ್ಥಾನದ ಹೊರಾಂಗಣ ಒಳಾಂಗಣ ದೇವಿಯ ವಿಗ್ರಹ ಎಲ್ಲವೂ ಒಂದೇ ರೀತಿ ಇದೆ. ಎರಡು ದೇವಸ್ಥಾನಕ್ಕೂ ಒಂದು ಕೂದಲೆಳೆಷ್ಟು ವ್ಯತ್ಯಾಸ ಇಲ್ಲ.

ದೇವಸ್ಥಾನದಲ್ಲಿ ನಡೆಯುವ ಬೆಳಗಿನ ಒಂಬತ್ತು ಗಂಟೆಯ ಪೂಜೆ ಸಮಯಕ್ಕೆ ಅದ್ಭುತ ಪವಾಡ ಜರುಗುತ್ತದೆ. ಈ ಪವಾಡ ಕಣ್ತುಂಬಿಕೊಳ್ಳಲೆಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಏನಪ್ಪಾ ಇದು ಪವಾಡ ಅಂತ ಕೇಳ್ತಾ ಇದ್ದೀರಾ? ಪ್ರತಿ ದಿನ ಒಂಬತ್ತು ಘಂಟೆ ಪೂಜೆ ಸಮಯದಲ್ಲಿ ಸಾವಿರಾರು ಭಕ್ತರ ಮುಂದೆ ಹಸಿರು ಬಣ್ಣದ ಗಿಳಿ ಒಂದು ಆಕಾಶದಿಂದ ಹಾರಿ ಕೊಂಡು ದೇವಸ್ಥಾನದ ಒಳಗೆ ಬಂದು ಗರ್ಭಗುಡಿ ಪ್ರವೇಶ ಮಾಡಿ ದೇವಿಯ ಎಡ ಭುಜದ ಮೇಲೆ ಕೂರುವಂತೆ ಈ ಹಸಿರು ಬಣ್ಣದ ಗಿಳಿಯನ್ನು ಸಾಕ್ಷಾತ್ ದೇವಿ ಎಂದೇ ಪರಿಗಣಿಸಲಾಗಿದೆ. ಸ್ನೇಹಿತರ ಒಂದು ವಿಚಾರ ಗಮನಿಸ ಬೇಕು.

ಸರಿಯಾಗಿ 9:00 ಗಂಟೆಗೆ ಇಡೀ ದೇವಸ್ಥಾನ ಪ್ರವೇಶಿಸುತ್ತೆ ಒಂದು ಸೆಕೆಂಡ್ ಹಿಂದೆ ಮುಂದೆ ಆಗೋದಿಲ್ಲ.ಖಂಡಿತವಾಗಿ ಈ ವಿಚಾರ ಎಂಥವರಿಗಾದರೂ ಆಶ್ಚರ್ಯ ಪಡಿಸುತ್ತೆ ಹಾಗೆ ಭುಜದ ಮೇಲೆ ಕೂರಿ ನಂತರ ಇಲ್ಲಿ ಕೂಗಲು ಶುರು ಮಾಡುತ್ತೆ. ಕಾರಣ ಪ್ರಸಾದ ಬೇಕು. ಪ್ರಸಾದ ಬಿಟ್ಟು ಬೇರೆ ಯಾವ ಆಹಾರವನ್ನೂ ಈ ಗಿಳಿ ಸೇವಿಸಲ್ಲ. ಪ್ರತಿದಿನ ಗಿಳಿ ಗೋಸ್ಕರ ಪ್ರಸಾದ ತಯಾರು ಮಾಡಲಾಗುತ್ತೆ. ಪ್ರಸಾದವನ್ನು ಸೇವಿಸಿದ ನಂತರ ವೇಗಿ ಹೊರ ಗಡೆ ಹಾರಿ ಕೊಂಡು ಹೋಗುತ್ತೆ. ತೆಂಗಿನಕಾಯಿ, ಹೂವು, ಬಾಳೆಹಣ್ಣು ಯಾವ ಆಹಾರ ಕೊಟ್ಟು ಗೀಳಿ ಸೇವಿಸಲ್ಲ.

ಪ್ರತಿದಿನ ಪ್ರಸಾದ ನೈವೇದ್ಯ ಆದ ನಂತರವೇ ಗಿಣಿ ಸೇವಿಸುತ್ತೆ ನಿಜವಾಗಿ ಇದನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು. ಅಷ್ಟೊಂದು ಅದ್ಭುತವಾಗಿದೆ. ನೆನ್ನೆ ಮೊನ್ನೆಯಿಂದ ಬರುತ್ತಿರುವ ಗಿಣಿಯಲ್ಲ ಭದ್ರಕಾಳಿ ಅಮ್ಮನವರ ಇತಿಹಾಸ ಪುಸ್ತಕ ತೆಗೆದು ನೋಡಿದರೆ ಸುಮಾರು ಸಾವಿರಾರು ವರ್ಷಗಳಿಂದ ಇಲ್ಲಿ ಗಿಳಿ ಗಳು ಬರುತ್ತಲೇ ಇದೆ.

Leave a Reply

Your email address will not be published. Required fields are marked *