ನಮಸ್ತೆ ಪ್ರಿಯ ಓದುಗರೇ, ನಿಮ್ಮೆಲ್ಲರಿಗೂ ಗೊತ್ತಿರುವ ಪ್ರಕಾರ ಸೋಮವಾರ ಭಗವಂತನಾದ ಶಿವನ ವಾರ ಆಗಿದೆ. ಈ ದಿನ ನಿಮ್ಮ ಕುಟುಂಬದಲ್ಲಿ ಜಗಳಗಳು, ವಾದ ವಿವಾದಗಳು ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಒಂದುವೇಳೆ ನಿಮ್ಮಲ್ಲಿ ಏನಾದರೂ ಆಸೆಗಳಿದ್ದರೆ, ಅದನ್ನು ಪಡೆಯಲು ತುಂಬಾ ದಿನಗಳಿಂದ ಪ್ರಯತ್ನ ಮಾಡುತ್ತಿದ್ದರೆ, ಅದರಿಂದ ನಿಮಗೆ ಯಾವ ಲಾಭಗಳು ಸಿಗುತ್ತಾ ಇಲ್ಲ ಎಂದರೆ ಇಲ್ಲಿ ಸೋಮವಾರದ ದಿನ ಭಗವಂತನಾದ ಶಿವನಿಗೆ ಸಂಬಂಧಿಸಿದ ಕೆಲವು ಚಿಕ್ಕ ಉಪಾಯಗಳಿವೆ ಎಂದರೆ, ಒಂದುವೇಳೆ ಈ ಚಿಕ್ಕ ಕಾರ್ಯಗಳನ್ನು ಮಾಡಿದರೆ ತಕ್ಷಣ ನಿಮ್ಮ ಮನಸಿನ ಇರ್ಚ್ಚೆಗಳು ಪೂರ್ತಿ ಆಗುತ್ತವೆ. ಒಂದುವೇಳೆ ನಿಮ್ಮ ಜೀವನದಲ್ಲಿ ದುರ್ಭಾಗ್ಯ ಹೆಚ್ಚಾಗಿದ್ದು ಒಂದುವೇಳೆ ಮನೆಯಲ್ಲಿ ಜಗಳ,ವಾದ ವಿವಾದಗಳು ಹೆಚ್ಚಾಗಿ ನಡೆಯುತ್ತಾ ಇದ್ದರೆ, ಸಣ್ಣ ವಿಷಯಕ್ಕೆ, ಮಾತು ಮಾತಿಗೆ ಮನೆಯಲ್ಲಿ ಜಗಳ ಆಗುತ್ತಿದ್ದರೆ ಇಂಥ ಸ್ಥಿತಿಯಲ್ಲಿ ಈ ಪ್ರಯೋಗವನ್ನು ಮಾಡಿ ಲಾಭಗಳನ್ನು ಪಡೆದುಕೊಳ್ಳಿ. ಹಲವಾರು ಬಾರಿ ಮನೆಯಲ್ಲಿ ಎಂಥ ಪರಿಸ್ಥಿತಿ ಸೃಷ್ಟಿ ಆಗಿರುತ್ತದೆ ಎಂದರೆ ಎಷ್ಟು ದೊಡ್ಡ ಜಗಳಗಳು ನಡೆಯುತ್ತವೆ ಎಂದರೆ ಇಲ್ಲಿ ಒಬ್ಬರಿಗೊಬ್ಬರು ತಮ್ಮ ತಮ್ಮ ಮುಖಗಳನ್ನು ಸಹ ನೋಡಿಕೊಳ್ಳಲು ಇಷ್ಟ ಪಡುವುದಿಲ್ಲ, ಇಲ್ಲಿ ಯಾವ ರೀತಿಯ ಶತ್ರುಗಳೂ ಹುಟ್ಟಿಕೊಂಡಿರುತ್ತಾರೇ ಎಂದರೆ ನಮ್ಮ ಮುಂದೆ ಚನಾಗೆ ಇರ್ತಾರೆ ಹೊರಗೆ ಹೋದ ನಂತ್ರ ಮಾಟ ಮಂತ್ರ, ತಂತ್ರ ಮಾಡಿಬಿಡುತ್ತಾರೆ. ಇಲ್ಲಿ ಶತ್ರುಗಳ ಭಾದೆ ಇಂದಲೇ ಮನೆಯಲ್ಲಿ ಗ್ರಹ ಕ್ಲೇಶಗಳು, ವಾದ ವಿವಾದಗಳು ನಡೆಯುತ್ತಾ ಇರುತ್ತವೆ.

ಹಾಗಾಗಿ ನಿಮ್ಮ ಎಲ್ಲಾ ಕೆಲಸಗಳು ನಿಂತು ಹೋಗಿರುತ್ತವೆ. ಕೆಲವೊಮ್ಮೆ ಮನೆಯಲ್ಲಿ ನೌಕರಿ ಚೆನ್ನಾಗಿ ನಡೆಯುತ್ತಾ ಇರುತ್ತವೆ ಆದರೆ ಒಮ್ಮೆಲೇ ಇದ್ದಕ್ಕೆ ಇದ್ದ ಹಾಗೆ ಅವು ಮುರಿದು ಬೀಳುತ್ತವೆ. ಇಲ್ಲಿ ಏನು ಆಗ್ತಾ ಇದೆ ಅಂತ ನಿಮಗೆ ಸರಿಯಾಗಿ ಅರ್ಥವೇ ಆಗೋದಿಲ್ಲ. ವ್ಯಾಪಾರ ಚೆನ್ನಾಗಿ ನಡೆಯುತ್ತಾ ಇರುತ್ತವೆ, ಅಚಾನಕ್ಕಾಗಿ ಭರಿಸಲಾಗದ ನಷ್ಟ ಉಂಟಾಗುತ್ತದೆ. ಆದರೆ ಈ ಒಂದು ಉಪಾಯ ಮಾಡುವುದರಿಂದ ಮನೆಯಲ್ಲಿ ಮರಳಿ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗುತ್ತದೆ. ಆದರೆ ಈ ಉಪಾಯವನ್ನು ಮಾಡುವ ರೀತಿ ನಿಮಗೆ ಸರಿಯಾಗಿ ಗೊತ್ತಿರಬೇಕು ಅದನ್ನೇ ನಾವು ಇಂದಿನ ಲೇಖನದಲ್ಲಿ ನೋಡೋಣ. ಇದು ಭಗವಂತನಾದ ಶಿವನಿಗೆ ಸಂಬಂಧಿಸಿದ ಪ್ರಯೋಗ ಆಗಿದೆ. ಶಿವನಿಗೆ ಸಂಬಂಧಿಸಿದ ಪ್ರಯೋಗ ಮಾಡಿದರೆ ನವಗ್ರಹಗಳ ಅನುಗ್ರಹ ಕೂಡ ಸಿಕ್ಕುತ್ತದೆ. ನಿಮ್ಮ ರಾಶಿ ಅಥವಾ ಗ್ರಹಗತಿ ಸರಿಯಾಗಿ ಇಲ್ಲ ಎಂದರೆ ನಿಮಗೆ ಅನೇಕ ತಿಂದರೆ ಕಷ್ಟಗಳು ಮೇಲೆ ಮೇಲೆ ಬರುತ್ತಿದ್ದರೆ ಅವೆಲ್ಲಾ ಬಗೆಹರಿಯುತ್ತದೆ. ಇದನ್ನು ಮಾಡುವವರು ಸೋಮವಾರ ಶಿವನಿಗೆಂದು ವ್ರತ ಇರಬೇಕು, ಆಗದೆ ಇದ್ದವರು ಶಿವನಿಗೆ 4 ಬೇಸನ್ ಲಾಡು ವನ್ನಾ ಅರ್ಪಿಸಬೇಕು. ಅಂದರೆ ಕಡಲೆ ಹಿಟ್ಟಿನಿಂದ ಮಾಡಿದ ಸಿಹಿಯಾದ ಉಂಡೆಗಳನ್ನು ಶಿವನಿಗೆ ಅರ್ಪಿಸಬೇಕು. ನಂತರ ಶಿವನಿಗೆ ಒಂದು ಲೋಟ ನೀರಿನಿಂದ ಅಭಿಷೇಕ ಮಾಡಬೇಕು. ಹಾಗೂ ಸೋಮವಾರ ನೀವು ದೇವಸ್ಥಾನಕ್ಕೆ ಹೋಗುವಾಗ ಉಮ್ಮತ್ತಿ ಹಣ್ಣನ್ನು ತೆಗೆದುಕೊಂಡು ಹೋಗಿ ಶಿವಲಿಂಗಕ್ಕೆ ಸ್ಪರ್ಶ ಮಾಡಿಸಬೇಕು. ನಂತರ ಅದನ್ನು ಯಾವುದಾದರೂ ಕಪ್ಪು ಬಟ್ಟೆಯಲ್ಲಿ ಹಾಕಿ ಕಟ್ಟಿ ಇಟ್ಟುಕೊಳ್ಳಬೇಕು. ಇವುಗಳ ತಯಾರಿಯನ್ನು ನೀವು ಒಂದು ದಿನ ಮುಂಚೆ ಮಾಡಿದರೆ ಒಳ್ಳೆಯದು. ಎಂದರೆ ಒಂದು ಉಮ್ಮಾತ್ತಿ ಹಣ್ಣು, ಕಪ್ಪು ಬಟ್ಟೆ, ಒಂದು ಲೋಟ ನೀರು ಹಾಗೂ 4 ಬೇಸನ್ ಲಾಡು ಗಳನ್ನು ಮೊದಲೇ ಸಿದ್ದ ಮಾಡಿಟ್ಟುಕೊಳ್ಳಬೇಕು.

ಇವೆಲ್ಲವುಗಳನ್ನು ತೆಗೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗಿ, ಲಾಡು ಅರ್ಪಿಸಿ , ಒಂದು ಲೋಟ ನೀರಿನಿಂದ ಜಲಭಿಷೇಕ ಮಾಡಿ, ಹಣ್ಣನ್ನು ಅರ್ಪಿಸಿ, ನಂತರ ಅದನ್ನು ಇಂದು ಕಪ್ಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ಬೇರೆ ವ್ಯಕ್ತಿಗಳು ಈ ಹಣ್ಣಿನ ಕಪ್ಪು ಬಟ್ಟೆಯನ್ನು ಸ್ಪರ್ಶ ಮಾಡಬಾರದು. ಅರ್ಪಿಸಿದ 4 ಲಾಡುಗಳಲ್ಲಿ ಒಂದನ್ನು ಪೂಜಾರಿಗೆ ಕೊಡಬೇಕು, ಒಂದನ್ನು ದೇವಸ್ಥಾನದಿಂದ ಬರುವಾಗ ದಾರಿಯಲ್ಲಿ ಯಾವುದಾದ್ರೂ ಹುಡುಗಿ ಅಥವಾ ಕನ್ಯೆಗೆ , ಒಂದನ್ನು ನೀವು ತಿನ್ನಬೇಕು ಇನ್ನೊಂದನ್ನು ಮನೆಯವರಿಗೆಲ್ಲ ಕೊಡಬೇಕು. ಉಮ್ಮತ್ತೀ ಹಣ್ಣನ್ನು ಕಟ್ಟಿದ ಕಪ್ಪು ಬಟ್ಟೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಹೀಗೆ ಮಾಡಿದರೆ ಮನೆಯಲ್ಲಿ ಆಗುವ ಜಗಳಗಳು ಕಡಿಮೆ ಆಗುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತವೆ. ಹೀಗೆ ಕಟ್ಟಿದ ಮನೆಗಳಿಗೆ ಕೆಟ್ಟ ಶಕ್ತಿಗಳು ಒಳಗೆ ಬರಲು ತುಂಬಾ ಹೆದರುತ್ತ ವೆ. ಹೀಗೆ ನಿಮ್ಮ ಆಫೀಸ್ ಗು ಕೂಡ ಮಾಡಬಹುದು. ಶನಿ, ರಾಹು ಕೇತುಗಳ ತೊಂದರೆ ಆಗುತ್ತಿದ್ದರೆ ಈ ಉಪಾಯವನ್ನು ಮಾಡಿ ಪರಿಹಾರ ಸಿಗುತ್ತದೆ. ಶುಭದಿನ.

Leave a Reply

Your email address will not be published. Required fields are marked *