kirik keerthi ಎಲ್ಲರಿಗೂ ನಮಸ್ಕಾರ ವೀಕ್ಷಕರೇ ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ನ ಮಾಜಿ ಸ್ಪರ್ಧೆ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವಂತಹ ಕಿರಿಕ್ ಕೀರ್ತಿ ಅವರು ಎಲ್ಲರಿಗೂ ಪರಿಚಯವಿದ್ದಾರೆ. ಆದರೆ ಇವರಿಗೆ ಸಂಬಂಧಪಟ್ಟಂತಹ ಒಂದು ಆಘಾತಕಾರಿ ಸುದ್ದಿ ಬಂದಿದೆ ಅದೇನೆಂದರೆ. ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ ಎಂದು ಬಹಿರಂಗವಾಗಿ ತಮ್ಮ ಸೋಶಿಯಲ್ ಮೀಡಿಯಾ ಅಂದರೆ instagram ನಲ್ಲಿ ಬರೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಕೀರ್ತಿ ತಮ್ಮ ನೋವನ್ನು ಕೂಡಿದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಹಲವಾರು ರೀತಿಯಾದಂತಹ ಕಷ್ಟಗಳು ಎದುರಾಗುತ್ತಿದ್ದು ಈ ಜೀವನದಲ್ಲಿ ಮುಂದೆ ನಡೆಯಲು ನನ್ನಿಂದ ಆಗುತ್ತಿಲ್ಲ ಎಂದು ಬರೆದು ಕೊಂಡಿದ್ದರು. ಅಲ್ಲದೆ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾನೇ ಭಯ ವಾತಾವರಣಕ್ಕೆ ದುಡಿಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದ ಕೀರ್ತಿ ಅವರು ಮಗನ ಜೊತೆಗೆ ಇರುವಂತಹ ಚಿತ್ರವನ್ನು ಶೇರ್ ಮಾಡಿ. ಜಗತ್ತನ್ನು ಬಿಟ್ಟು ಹೋಗುವಂತಹ ನಿರ್ಧಾರವನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರು.

ಕಿರಕ್ ಕೀರ್ತಿ ಪೋಸ್ಟ್ ಹೀಗಿತ್ತು ನಿರ್ಧಾರ ಮಾಡಿಬಿಟ್ಟಿದ್ದೆ ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ ಕಾರಣಗಳು ಹಲವು ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..?

kirik keerthi ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ ಈ ಪ್ರಶ್ನೆಗಳು ಕಾಡಿದ್ವು ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ.10 ನಿಮಿಷ ಧ್ಯಾನ ಮಾಡ್ದೆ. ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ

ನಿಮ್ಮ ಬೆಂಬಲ‌ ಜೊತೆಗಿರಲಿ ಡಿಪ್ರೆಷನ್‌ನಿಂದ ಮತ್ತೆ ವಾಪಾಸ್ ಬರಲು ಸಹಕರಿಸಿ ಮತ್ತೆ ನನ್ನ ಮುಖದ ಮೇಲಿನ ನಗು ವಾಪಾಸ್ ತರುವ ತನಕ ಪ್ರಯತ್ನ‌ ನಿರಂತರ ಇದು ಹೇಳಿಕೊಳ್ಳಬಾರದ ವಿಷಯ ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ ಎಂದು ಬರೆದು ಕೊಂಡಿದ್ದರು ತದನಂತರ ಇನ್ನೊಂದು ರೀತಿಯಾದಂತಹ ಪೋಸ್ಟ್ ಅನ್ನು ಕೂಡ ಅವರು ಹಾಕಿದರು ಅದೆಷ್ಟೋ ಸಾವಿರ ಮೆಸೇಜ್‌ಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಕೆಲವರು ಮತ್ತಷ್ಟು ಕುಗ್ಗಿಸೋ ಪ್ರಯತ್ನ ಮಾಡಿದ್ರೂ ಸಹ ಅದು ಈಗ ಉಪಯೋಗಕ್ಕೆ ಬಾರದು.

ಯಾವ ನೆಗೆಟಿವಿಟಿ ಮತ್ತು ಟ್ರೋಲ್‌ಗಳು ನನ್ನ ಆತ್ಮ ಸ್ಥೈರ್ಯ ಕುಗ್ಗಿಸಲಾರವು ನಾನೀಗ ಬಿದ್ದು, ನೊಂದು, ಬೇಸತ್ತು ಎಲ್ಲಾ ಮರೆತು ಎದ್ದು ಬರಲು ತೀರ್ಮಾನ ಮಾಡಿದವನು ಹಾಗಾಗಿ ಮತ್ತೆ ಸೋಲುವ ಭಯವಿಲ್ಲ ಗೆಲ್ಲುವ ಛಲವಷ್ಟೆ ಪ್ರೀತಿ, ಹಾರೈಕೆ, ಆಶೀರ್ವಾದ ಕೊಟ್ಟು ನನ್ನ ಹಠಕ್ಕೆ ಸಾಥ್ ಕೊಟ್ಟ ನಿಮಗೆಲ್ಲಾ ಕೋಟಿ ನಮಸ್ಕಾರ ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಪ್ರಮಾಣ ಮಾಡುತ್ತೇನೆ ಧನ್ಯವಾದ.. ಎಂದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಲ್ಲಿ ಬರೆದುಕೊಂಡಿದ್ದರು.

Leave a Reply

Your email address will not be published. Required fields are marked *