ಸಾಮಾನ್ಯವಾಗಿ ಕೈಗೆ ಒಂದು ದಾರ ಅಥವಾ ಬೆಳ್ಳಿಯ ಬಳೆ ಏನಾದರು ಒಂದು ಕಟ್ಟಿರುತ್ತೇವೆ. ಆದರೆ ಅದನ್ನು ಕೆಲವರು ಶೋಕಿಗೆ ಅಥವಾ ಚೆನ್ನಾಗಿ ಕಾಣಲಿ ಎನ್ನುವ ಉದ್ದೇಶದಿಂದ ಹಾಕಿರುತ್ತಾರೆ. ಆದರೆ ಕೈಗೆ ಅಂತಹ ಬಳೆಯನ್ನು ಹಾಕುವುದರಿಂದ ಅರೋಗ್ಯೆಕ್ಕೆ ಒಳ್ಳೆಯ ಲಾಭವಿದೆ ಅದೇನಂತೀರಾ ಮುಂದೆ ನೋಡಿ.

ಪುರಾತನದಿಂದಲೂ ತಾಮ್ರದ ವಸ್ತುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆಯಿದೆ. ಆದ್ದರಿಂದ ಕೆಲವರು ತಮ್ಮ ಮನೆಯಲ್ಲಿ ತಾಮ್ರದ ಕುಡಿಯುವ ನೀರಿನ ಲೋಟ ತಂಬಿಗೆ, ಊಟದ ತಟ್ಟೆಗಳು ಮತ್ತು ನೀರನ್ನು ಇಟ್ಟುಕೊಳ್ಳಲು ಕಡಾಯಿಯನ್ನು ಕೂಡ ಬಳಸುತ್ತಾರೆ. ಹೀಗೆ ಹಲವಾರು ತಾಮ್ರದ ವಸ್ತುಗಳನ್ನು ಬಳಸುವುದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ ಎನ್ನುತ್ತಾರೆ.

ನಮ್ಮ ಕೈಗೆ ತಾಮ್ರದ ಬಳೆಯನ್ನು ಹಾಕುವುದರಿಂದ ನಮ್ಮ ದೇಹದಲ್ಲಿ ಇರುವ ಸೂಕ್ಶ್ಮ ಖನಿಜಗಳು ನಮ್ಮ ಬೆವರಿನ ಮೂಲಕ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಇಂತಹುಗಳಿಂದ ಈ ಬಳೆ ರಕ್ಷಿಸುತ್ತದೆ.

ವಯಸ್ಸಾದವರಿಗೆ ಹೆಚ್ಚು ಕಾಡುವುದು ಸಂಧಿವಾತ ಮತ್ತು ಕೈ, ಕಾಲುಗಳು ಜುಮ್ ಜುಮ್ ಎನ್ನುವ ಸಮಸ್ಯೆಯನ್ನು ಹೊಂದಿರುವವರು ತಾಮ್ರದ ಬಳೆಯನ್ನು ತೊಡುವುದರಿಂದ ಇಂತಹ ಸಮಸ್ಯೆಗಳಿಂದ ದೂರವಾಗಬಹುದಾಗಿದೆ.

ತಾಮ್ರದ ಬಳೆಯನ್ನು ಧರಿಸುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬಿನಿಂದ ಹೃದಯದ ಮೇಲೆ ಆಗುವ ಪರಿಣಾಮ ದೂರವಾಗುವ ಮೂಲಕ ಹೃದಯಕ್ಕೆ ಯಾವುದೇ ತೊಂದರೆಯಾಗದಂತೆ ತಡೆಗಟ್ಟುತ್ತದೆ.

Leave a Reply

Your email address will not be published. Required fields are marked *