ನಾನು ರೈತ ಅಂತ ಹೇಳಿಕೊಳ್ಳುವುದಕ್ಕೆ ತುಂಬಾ ಜನ ಹಿಂಜರಿಯುತ್ತಾರೆ ಅದಕ್ಕೆ ಕಾರಣ ಸಮಾಜ ರೈತ ಅಂದರೆ ಅವರ ಹತ್ತಿರ ಹಣ ಇಲ್ಲ ಎಂಬ ಭಾವನೆ ನಾನು ರೈತ ಅಂತ ಹೇಳಿಕೊಂಡರೆ ಹುಡುಗಿ ಕೂಡ ಕೊಡುವುದಿಲ್ಲ ಈ ಸಮಾಜಕ್ಕೆ ಗೊತ್ತಿಲ್ಲದ ವಿಷಯ ಅಂತ ಅಂದರೆ ಈ ಸಮಾಜಕ್ಕೆ ಪ್ರತಿಯೊಬ್ಬ ರೈತ ಕೂಡ ಒಬ್ಬ ವಿಜ್ಞಾನಿ ಆಗಿರುತ್ತಾನೆ ಅನ್ನುವುದು. ಈ ರೈತ ಕೂಡ ಹಾಗೆ ಪ್ರಾರಂಭದಲ್ಲಿ ನಷ್ಟ ಹಾಗೂ ಸೋಲನ್ನು ಕಂಡರು ಆ ಸೋಲಿನಿಂದ ಪಾಠ ಕಲಿತು ಇಂದು ಮಾದರಿಯ ರೈತನಾಗಿ ಹೊರ ಹೊಮ್ಮಿದ್ದಾರೆ ದೊಡ್ಡಬಳ್ಳಾಪುರದ ಈ ರೈತನ ಹೆಸರು ಸದಾನಂದ.
ಇವರು ಕೂಡ ಪ್ರಾರಂಭದಲ್ಲಿ ಎಲ್ಲಾ ರೈತರು ಮಾಡುವಂತೆ ತಪ್ಪುಗಳನ್ನು ಮಾಡಿದ್ದರು ಅಕ್ಕಪಕ್ಕದಲ್ಲಿ ಯಾರಾದರೂ ಟೊಮೇಟೊ ಅಥವಾ ಈರುಳ್ಳಿ ಬೆಳೆಯನ್ನು ಹಾಕಿದ್ದಾರೆ ಅವನ್ನು ನೋಡಿಕೊಂಡು ಅದನ್ನು ಹಾಕಿಕೊಂಡು ಅಂದರೆ ಒಂದು ಎಕರೆ ಜಮೀನು ಇದ್ದರೆ ಆ ಎಕ್ಕರೆ ಪೂರ್ತಿ ಒಂದೇ ಬೆಳೆಯನ್ನು ಹಾಕುವುದು ಇದೇ ರೀತಿ ಮಾಡುತ್ತಿದ್ದರು ಈ ಮಾರ್ಗಗಳು ಸಹ ತುಂಬಾ ಅಪಾಯಕಾರಿ ಯಾಕೆಂದರೆ ಎಲ್ಲರೂ ಟೊಮೇಟೊ ಹಾಕುತ್ತಾ ಇರುತ್ತಾರೆ ಅಂತ ನಾವು ಕೂಡ ಟೊಮೇಟೊವನ್ನು ಹಾಕಿದರೆ ಉತ್ಪಾದನೆ ಜಾಸ್ತಿಯಾಗಿ ಬೆಲೆ ಪಾತಾಳಕ್ಕೆ ಕುಸಿದು ಬಿತ್ತಿರುವ ಜಮೀನಿಗೆ ಒಂದೇ ಬೆಳೆಯನ್ನು ಹಾಕಿದರೆ.
ಒಂದು ಸಾರಿ ಅದು ನಮ್ಮ ಕೈಹಿಡಿತದೆ ಹೆಚ್ಚು ಬಾರಿ ಅದು ನಮ್ಮ ಕೈ ಸುಡುತ್ತದೆ ಆಗ್ಯವಸಾಯದ ನಂಬಿಕೆಯಲ್ಲಿ ಕಳೆದು ಹೋಗುತ್ತದೆ ಆರಂಭದಲ್ಲಿ ಅದೇ ತಪ್ಪುಗಳನ್ನು ಮಾಡುವ ಸದಾನಂದ ಅವರು ಕೂಡ ಕೈಯನ್ನು ಸುಟ್ಟಿ ಕೊಳ್ಳುತ್ತಾರೆ ಹೀಗಾದರೆ ಜೀವನ ಕಷ್ಟ ಇದಿಯಪ್ಪ ಅಂತ ಭಾವಿಸಿದ ಸದಾನಂದ ಒಂದು ಉಪಾಯವನ್ನು ಮಾಡಿದ್ದರು ಏನೆಂದರೆ ನನಗಿರುವ ಎರಡು ಎಕರೆ ಜಮೀನು ವ್ಯವಸ್ಥಿತವಾಗಿ ವಿಂಗಡಿಸಿ ಮೊದಲು ಅಡಿಕೆ ಮರಗಳನ್ನು ನೀಡುತ್ತಾರೆ ಒಂದು ತಿಂಗಳ ನಂತರ ಶುಂಠಿ ನಂತರ ಸಪೋಟ ಆನಂತರ ಜಮೀನಿಗೆ ಟೊಮೆಟೊ ಕ್ಯಾಪ್ಸಿಕಂ ಹೀಗೆ ಜಾಗದ ಮಿತಿಯನ್ನು ಇಟ್ಟುಕೊಂಡು ಸುಮಾರು 30 ಬೆಳೆಗಳನ್ನು ಹಾಕುತ್ತಾರೆ.
ಸದಾನಂದ ಪ್ಲಾನ್ ಹೇಗಿತೆಂದರೆ ಈ ರೀತಿ ಸಪೋಟ ಬಂತು ಅಂದರೆ ಈ ತಿಂಗಳು ಮುಂದಿನ ತಿಂಗಳು ಶುಂಠಿ ಬೆಳೆ ಬಂದಾಯ್ತು ಹಾಗೆ ಪ್ರತಿ ತಿಂಗಳು ಕೈಗೆ ಹಣ ಬರುವ ಹಾಗೆ ಮಾಡಿಕೊಂಡರು ಸದಾನಂದ ಅವರು ಇದರಲ್ಲಿರುವ ದೊಡ್ಡ ಲಾಭನೆಂದರೆ ಸಪೋಟದಲ್ಲಿ ನಷ್ಟ ಆದರೆ ಬೆಳ್ಳುಳ್ಳಿ ಲಾಭ ಸಿಗುತ್ತದೆ ಶುಂಠಿಲಿ ನಷ್ಟವಾದರೆ ಸಪೋಟದಲ್ಲಿ ಲಾಭ ಸಿಗುತ್ತದೆ ಹೀಗಿದೆ ಅಲ್ವಾ ಇವರ ಉಪಾಯ ಹೀಗೆ ಹಲವಾರು ಬೆಳೆಗಳನ್ನು ಬೆಳೆಯುವ ಮೂಲಕ ವರ್ಷಕ್ಕೆ 22 ಲಕ್ಷ ರೂಪಾಯಿಗಳನ್ನು ಗಳಿಸುತ್ತಾ ಇದ್ದಾರೆ ಸದಾನಂದ ಅವರು.