ನಮಸ್ತೆ ಗೆಳೆಯರೆ ಮನುಷ್ಯನಿಗೆ ಜೀವನದಲ್ಲಿ ಒಳಿತು ಹಾಗೂ ಕೆಡಕುಗಳ ಆಗುತ್ತವೆ ಎನ್ನುವುದಕ್ಕೆ ಮೊದಲು ಕೆಲವೊಂದು ಸೂಚನೆಗಳನ್ನು ಭಗವಂತ ನಿಡುತ್ತಾನೆ ಹಾಗಾಗಿ ಈ ಲೇಖನದಲ್ಲಿ ಮನುಷ್ಯನಿಗೆ ಕೆಡುಕು ಉಂಟಾಗುವ ಮೊದಲು ಕೆಲವೊಂದು ಯಾವ ಸೂಚನೆಗಳು ಕಂಡು ಬರುತ್ತವೆ ಎಂದು ತಿಳಿಯೋಣ ಗೆಳೆಯರೆ ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯಗಳು ಬರುತ್ತವೆ ಯಾವುದೇ ಸಮಯ ಬಂದರೂ ಕೂಡ ಅದನ್ನು ಸಮನಾಗಿ ಸ್ವೀಕರಿಸಬೇಕು ದೇವರನ್ನು ದೂಡಬಾರದು ಗೆಳೆಯರೇ ಮನುಷ್ಯನ ಜೀವನದಲ್ಲಿ ಕೆಲವೊಂದು ವಸ್ತುಗಳು ಮೊದಲು ಆತನ ಜೀವನದಲ್ಲಿ ಎದುರಾಗುವ ಸಂಕಷ್ಟದ ಬಗ್ಗೆ ಮೊದಲೇ ಸೂಚನೆಯನ್ನು ನೀಡುತ್ತವೆ ಎಂದು ಶ್ರೀಕೃಷ್ಣಪರಮಾತ್ಮ ಹೇಳುತ್ತಾನೆ.

ಗೆಳೆಯರೆ ಮೊದಲನೇದಾಗಿ ತುಳಸಿ ಸಸ್ಯ ತುಳಸಿ ಗಿಡವನ್ನು ಬಹಳಷ್ಟು ಶ್ರದ್ಧೆ-ಭಕ್ತಿಯಿಂದ ಲಕ್ಷ್ಮಿ ಸ್ವರೂಪ ಎಂದು ಆರಾಧಿಸುತ್ತೇವೆ ತುಳಸಿ ಗಿಡ ವಾಸ್ತು ಶಾಸ್ತ್ರದ ಪ್ರಕಾರ ಮಹಾನ ಸಂವೇದನಶೀಲ ಸಸ್ಯೆ ಆಗಿದೆ ಯಾವ ಮನೆಯಲ್ಲಿ ತುಳಸಿಗಿಡ ಹಚ್ಚಹಸುರಿನಿಂದ ತುಂಬಿರುತ್ತದೆ ಆ ಮನೆಯಲ್ಲಿ ಸುಖ ಸಂತೋಷ ತುಂಬಿರುತ್ತದೆ ಒಂದು ವೇಳೆ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭಿಸಿದರೆ ಅದು ಕುಟುಂಬದಲ್ಲಿ ಮುಂದೆ ಬರುವ ಕಷ್ಟದ ಬಗ್ಗೆ ಕೆಟ್ಟ ಘಟನೆಯ ಸಂಕೇತವನ್ನು ನೀಡುತ್ತದೆ. ಇನ್ನು ಗೆಳೆಯರೇ ಮನೆಗೆ ಮನೆಗೆ ಕಷ್ಟಗಳು ಬರುವ ಮೊದಲೇ ಗೋವುಗಳು

ಮನೆಯ ಹತ್ತಿರ ಬರುವುದಿಲ್ಲ ಬೇರೆ ದಾರಿಯಲ್ಲಿ ಹಾದು ಹೋಗುತ್ತವೆ ಗೋವುಗಳಿಗೆ ಕಷ್ಟಗಳು ಬರುವುದು ಮೊದಲೇ ಗೊತ್ತಿರುತ್ತದೆ ಯಾವ ಮನೆಯಲ್ಲಿ ಪ್ರತಿದಿನ ಕಲಹಗಳು ಜಗಳಗಳು ಆಗುತ್ತಿರುವೆ ಅಂತಹ ಮನೆಯಿಂದ ಗೋವು ರೊಟ್ಟಿ ಅಥವಾ ಆಹಾರ ಪದಾರ್ಥವನ್ನು ತಿನ್ನುವುದಿಲ್ಲ ಇದನ್ನು ಮನೆಗೆ ಆವರಿಸುವ ಕೆಟ್ಟ ಸಂಕೇತದ ಸೂಚನೆ ಎಂದು ತಿಳಿಯಲಾಗುತ್ತದೆ. ಕಸಗುಡಿಸುವ ಪೊರಕೆ ಪದೇಪದೇ ಹಾಳಾಗುತ್ತಿದ್ದರೆ ತುಂಡರಿಸುತ್ತಿದ್ದರೆ ಅಶುಭದ ಸೂಚನೆ ನೀಡುತ್ತದೆ ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸುತ್ತದೆ ದರಿದ್ರ ಮನೆಗೆ ಬರುತ್ತದೆ.

ವಾಸ್ತು ಪ್ರಕಾರ ಹಾಲು ಮತ್ತು ಬೆಣ್ಣೆಯ ಬಟ್ಟಲು ಕೈಯಿಂದ ಜಾರಿ ಬೀಳುವುದು ಅಶುಭ ಎಂದು ಹೇಳಲಾಗುತ್ತದೆ ಇದು ಮುಂದೆ ಮನೆಗೆ ಎದುರಾಗುವ ಸಂಕಷ್ಟದ ಸೂಚನೆ ನೀಡುತ್ತದೆ ಹಾಗೂ ಪಕ್ಷಿಗಳು ಮನೆಯಲ್ಲಿ ಬಂದು ಆಕಸ್ಮಿಕವಾಗಿ ಸತ್ತು ಹೋದರೆ ಅದು ಅಶುಭ ಸಂಕೇತ ಆಗಿರುತ್ತದೆ ಹಾಗೂ ಭಗವಂತನ ಪೂಜೆ ಮಾಡುವಾಗ ಪೂಜಾ ಸಾಮಗ್ರಿಯ ತಟ್ಟೆ ಕೈಯಿಂದ ಬಿದ್ದರೆ ಶುಭದ ಸೂಚನೆಯಾಗಿರುತ್ತದೆ ಇದು ಮನೆಗೆ ಮುಂದೆ ಬರುವ ಕೆಟ್ಟ ಘಟನೆ ಸೂಚನೆಯನ್ನು ಮೊದಲೇ ತಿಳಿಸುತ್ತದೆ ಇನ್ನು ಮನೆಯಲ್ಲಿರುವ ಸದಸ್ಯರ ಮಧ್ಯೆ ವಿನಾಕಾರಣ ಕಲಹಗಳು ಜಗಳಗಳು ಆಗುತ್ತಿದ್ದರೆ ಮನೆಯಲ್ಲಿರುವ ಪುರುಷರು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಿಕೊಳ್ಳುತ್ತಿದ್ದರೆ ಇದು ಮುಂದೆ ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟದ ಸಂಕೇತವಾಗಿರುತ್ತದೆ ಆ ಸಮಯದಲ್ಲಿ ತುಂಬಾ ತಾಳ್ಮೆಯಿಂದ

ಇರುವುದು ಒಳ್ಳೆಯದು ಆಗ ಶಿವನ ಧ್ಯಾನವನ್ನು ಮಾಡಬೇಕು ಪ್ರತಿನಿತ್ಯ ಹನುಮಾನ್ ಚಾಲೀಸ್ ಪಠಣೆ ಮಾಡುವುದರಿಂದ ನಿಮಗೆ ಬರುವ ಸಂಕಷ್ಟಗಳು ದೂರಾಗುತ್ತದೆ ಇನ್ನು ಮದುವೆಯಾದ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿಕೊಳ್ಳುವಾಗ ಕೈಯಿಂದ ಕುಂಕುಮದ ಭರಣಿ ಬಿದ್ದರೆ ಅವರ ಗಂಡನಿಗೆ ಸಂಭವಿಸುವ ಆಪತ್ತಿನ ಸೂಚನೆಯಾಗಿರುತ್ತದೆ ಹಾಗೂ ಮನೆಯಲ್ಲಿ ಗಾಜುಗಳು ಒಡೆಯುವುದು ಅಶುಭದ ಸಂಕೇತ ಆಗಿರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ರೋಗಗಳಿಗೆ ಆಮಂತ್ರಣವನ್ನು ನೀಡುವುದರ ಸಂಕೇತವಾಗಿರುತ್ತದೆ ಆರೋಗ್ಯದ ಕಡೆಗೆ ಹೆಚ್ಚು ಗಮನವನ್ನು ಹರಿಸುವುದು ಒಳ್ಳೆಯದು. ಗೆಳೆಯರೆ ಈ ಕೆಲವು ಸೂಚನೆಗಳು ಮೊದಲೇ ಕಂಡುಬಂದರೆ ಮುಂದೆ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ ಎನ್ನುವುದರ ಸೂಚನೆಯನ್ನು ನೀಡುತ್ತವೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Leave a Reply

Your email address will not be published. Required fields are marked *