ದೃಷ್ಟಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಮಕ್ಕಳು ಕೂಡ ಎದುರಿಸುತ್ತಿರುವಂತಹ ಈ ಒಂದು ತೊಂದರೆಗೆ ಪ್ರತಿಯೊಬ್ಬರೂ ಅಂದುಕೊಂಡಿರುವುದು ಕನ್ನಡಕವೇ ಪರಿಹಾರವೆಂದು. ಆದರೆ ಮನೆಯಲ್ಲಿಯೇ ಸುಧಾರಿಸಿಕೊಳ್ಳಬಹುದು ಈ ಒಂದು ಸಮಸ್ಯೆಯನ್ನು. ಅಂತಹ ಒಂದು ಪರಿಹಾರವನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ನಿಮ್ಮಲ್ಲಿಯೂ ಯಾರಿಗಾದರೂ ದೃಷ್ಟಿ ಸಮಸ್ಯೆ ಇದ್ದರೆ ಅಂತಹವರು ತಪ್ಪದೇ ಈ ಒಂದು ಮಾಹಿತಿಯನ್ನು ತಿಳಿದು ನಿಮ್ಮ ಮನೆಯಲ್ಲಿಯೂ ಕೂಡ ಈ ಒಂದು ಪರಿಹಾರವನ್ನು ಮಾಡಿ ಈ ಮನೆ ಮದ್ದು ನಿಜಕ್ಕೂ ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಈ ಒಂದು ಮನೆ ಮದ್ದನ್ನು ಮಾಡುವುದಕ್ಕಾಗಿ ಬೇಕಾಗಿರುವಂತಹ ಪದಾರ್ಥಗಳು ಬಾದಾಮಿ ಮೆಣಸು ಮತ್ತು ಕೆಂಪು ಕಲ್ಲು ಸಕ್ಕರೆ. ಮೊದಲಿಗೆ ಒಂದು ಕುಟ್ಟಾಣಿ ಯಲ್ಲಿ ಏಳರಿಂದ ಎಂಟು ಬಾದಾಮಿ ಬೀಜವನ್ನು ತೆಗೆದುಕೊಂಡು ಅದಕ್ಕೆ ನಾಲ್ಕರಿಂದ ಐದು ಮೆಣಸನ್ನು ಹಾಕಬೇಕು ನಂತರ ಒಂದು ಇಂಚಿನಷ್ಟು ಕಲ್ಲು ಸಕ್ಕರೆ ಅದರಲ್ಲಿಯೂ ಕೆಂಪು ಕಲ್ಲು ಸಕ್ಕರೆಯನ್ನು ತೆಗೆದುಕೊಂಡರೆ ಒಳ್ಳೆಯದು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು.

ಇದನ್ನು ಶೇಖರಿಸಿ ಇಟ್ಟುಕೊಳ್ಳಬಹುದು ಆದರೆ ಕೇವಲ ಮೂರು ದಿನಗಳವರೆಗೂ ಮಾತ್ರ ಆದ ಕಾರಣ ನೀವು ಈ ಪರಿಹಾರವನ್ನು ಮಾಡಿಕೊಳ್ಳುವಾಗ ಈ ಕಲ್ಲುಸಕ್ಕರೆಯ ಪುಡಿಯನ್ನು ಮತ್ತು ಬಾದಾಮಿಯ ಪುಡಿಯನ್ನು ಫ್ರೆಶ್ ಆಗಿಯೇ ಮಾಡಿ ಕೊಂದು ಈ ಪರಿಹಾರವನ್ನು ನೀವು ಮಾಡಿಕೊಳ್ಳಬಹುದಾಗಿದೆ. ಈ ದೃಷ್ಟಿ ಸಮಸ್ಯೆ ಎದುರಾಗುವುದಕ್ಕೆ ಹಲವು ಕಾರಣಗಳಿವೆ ಕೆಲವರಿಗೆ ಹೆರಿಡಿಟಿ ಮುಖಾಂತರ ಈ ಸಮಸ್ಯೆ ಎದುರಾದರೆ ಇನ್ನು ಕೆಲವರು ಅವರು ರೂಢಿಸಿಕೊಂಡಿರುವ ಹವ್ಯಾಸದ ಮೇಲೆ ಈ ಸಮಸ್ಯೆ ಎದುರಾಗುತ್ತದೆ ಆದ ಕಾರಣ ಅದಷ್ಟು ನೀವು ಬಳಸುವಂತಹ ಮೊಬೈಲ್ ಆಗಲಿ ರಾತ್ರಿ ಹೆಚ್ಚಿನ ಸಮಯದವರೆಗೆ ಮೊಬೈಲ್ ಅನ್ನು ಬಳಸುವುದು ಲ್ಯಾಪ್ ಟಾಪ್ ಅನ್ನು ಬಳಸುವುದು ಟೀವಿ ನೋಡುವುದು ಇಂತಹ ಹವ್ಯಾಸಗಳನ್ನು ನೀವು ಕೂಡ ರೂಢಿಸಿಕೊಂಡಿದ್ದರೆ ಅದನ್ನು ಈಗಲೇ ಕಡಿಮೆ ಮಾಡುತ್ತಾ ಬನ್ನಿ.

ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಕ್ಕಳು ಆನ್ಲೈನ್ ಕ್ಲಾಸ್ ಎಂದು ಮೊಬೈಲನ್ನು ಹಿಡಿದುಕೊಂಡಿರುತ್ತಾರೆ ಅಂಥವರಿಗೆ ಈ ಒಂದು ಪರಿಹಾರವನ್ನು ಇಂದಿನಿಂದಲೇ ಮಾಡಿಕೊಡಿ ಆದಷ್ಟು ಮಕ್ಕಳಿಗೆ ದಿನಕ್ಕೆ ಎಂಟು ಬಾದಾಮಿ ಯಾದರೂ ತಿನ್ನಿಸಿ ಇದು ನೆನಪಿನ ಶಕ್ತಿಯನ್ನು ವೃದ್ಧಿಸುವುದಲ್ಲದೆ ದೃಷ್ಟಿಯನ್ನು ಕೂಡ ವೃದ್ಧಿಸಲು ಸಹಕರಿಸುತ್ತದೆ. ಹೀಗೆ ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಕೂಡ ನಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಪರಿಹಾರ ದೊರೆಯುತ್ತದೆ ಅದನ್ನು ನಾವು ತಿಳಿದುಕೊಂಡಿರಬೇಕು ಅಷ್ಟೇ. ನಮ್ಮ ಹಿರಿಯರು ಮಾಡಿಟ್ಟಿರುವ ಅನೇಕ ಔಷಧಿಯ ಪದ್ಧತಿಯನ್ನು ತಿಳಿಯೋಣ, ಅದನ್ನು ನಾವು ಮುಂದುವರಿಸಿ ಹೋಗೋಣ ಮುಂದಿನ ಪೀಳಿಗೆಯವರೆಗೂ ತಿಳಿಸಿ ಕೊಡೋಣ. ಇಂದಿನ ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *