ಎಷ್ಟೇ ಜಗಳ ವೈಮನಸ್ಸು ಆದರೂ ಕಷ್ಟ ಅಂತ ಬಂದಾಗ ಸಹಾಯಕ್ಕೆ ಬರುವುದು ಅವರಿಗೆ ಅವರೇ. ನಾವು ಕೂಡ ಯಾರಿಗೂ ಕೂಡ ಸಹಾಯವನ್ನು ಕೇಳಬಾರದು. ಅದೇ ನಮಗೆ ದೊಡ್ಡ ಪಾಠವಾಗಬೇಕು. ಯಾಕೆಂದರೆ ಈ ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಯಾಗಿದ್ದಾರೆ. ಮಕ್ಕಳು ಹುಟ್ಟಿ ಬೆಳೆದ ಮೇಲೆ ಅವರವರ ಜೀವನ ಕಟ್ಟಿಕೊಂಡು ಗೂಡಿನಿಂದ ದೂರ ಆಗುತ್ತಾರೆ ಆಗ ಉಳಿಯುವುದು ಗಂಡ ಮತ್ತು ಹೆಂಡತಿ ಮಾತ್ರ ವಯಸ್ಸಾದ ಮೇಲಂತೂ ಅವರ ನಿಜವಾದ ಬಾಂಧವ್ಯ ಪ್ರೀತಿ ಹೊರಬರುತ್ತದೆ. ಆದರೆ ಈ ನಟನ ಜೀವನದಲ್ಲಿ ಆಗಿದ್ದೇನು ಗೋಡೆಯ ಮೇಲೆ ನಟ ಬರೆದಿದ್ದು ಏನು ಅಂತ ನೋಡೋಣ ಬನ್ನಿ.

ಈ ನಟ ಸಿನಿಮಾದಲ್ಲಿ ಇದ್ದರೆ ಆ ಸಿನಿಮಾಗೆ ಏನೋ ಒಂದು ರೀತಿಯ ಕಲೆ ಬರುತ್ತಿತ್ತು ತೂಕದ ಮಾತು ತುಂಬಿದ ನಟನೆ ಆ ನಟ ಮತ್ತು ಯಾರು ಇಲ್ಲ ರಂಗನಾಥ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಂಗನಾಥ ಅವರು ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ ಅದ್ಭುತ ನಟ ಸುಮಾರು 300 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ನಟ ರಂಗನಾಥ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಮಕ್ಕಳು ಬೆಳೆದಂತೆ ಅವರವರ ಸಂಸಾರ ಕಟ್ಟಿಕೊಂಡು ಬೇರೆ ಕಡೆ ವಾಸವಿದ್ದರೂ ಆದರೂ ತಮ್ಮ ಪತ್ನಿಯ ಜೊತೆ ಅನ್ಯೋನ್ಯವಾಗಿದ್ದ ರಂಗನಾಥ ಅವರಿಗೆ ಜೀವನ ಸುಂದರವಾಗಿತ್ತು ಆದರೆ 2009 ರಲ್ಲಿ ರಂಗನಾಥ ಅವರ ಪತ್ನಿ ಮರಣ ಹೊಂದಿದರು.

ತಮ್ಮ ಅರ್ಧಾಂಗಿಯನ್ನು ಕಳೆದುಕೊಂಡ ಈ ನಟ ಅಕ್ಷರಶಹ ಒಂಟಿಯಾದರು ಮಕ್ಕಳ ಜೊತೆ ಸೇರಿ ಒಂದೇ ಕಡೆ ವಾಸವಿರುವುದು ರಂಗನಾಥ ಅವರ ಆಸೆಯಾಗಿತ್ತು ಆದರೆ ಆ ಆಸೆ ಈಡೇರಲಿಲ್ಲ ಒಂಟಿತನ ಮೆಟ್ಟಿ ನಿಲ್ಲಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದಾಗ 2015ರಲ್ಲಿ ನಟ ರಂಗನಾಥ ಅವರು ಮನೆಯಲ್ಲಿ ಆತ್ಮ ಹತ್ಯೆ ಮಾಡಿಕೊಂಡರು, ಆದರೆ ರೂಂ ಗೋಡೆಯ ಮೇಲೆ ಲಾಕರ್ ನಲ್ಲಿ ಇರುವ ಬಾಂಡ್ ಗಳನ್ನು ಮನೆ ಕೆಲಸ ಮಾಡುವ ಮಹಿಳೆಗೆ ಕೊಡಿ ಆಕೆ ತೊಂದರೆ ಕೊಡಬೇಡಿ ಎಂದು ಮಾರ್ಕರ್ನಲ್ಲಿ ಬರೆದಿದ್ದರೂ ಹೆಂಡತಿಯ ಮರಣದ ನಂತರ ತನಗೆ ಅಡಿಗೆ ಮಾಡಿ ಕೊಟ್ಟು ಕೆಲಸ ಮಾಡುತ್ತಿದ್ದ ಮೀನಾಕ್ಷಿ ಅನ್ನುವ ಮಹಿಳೆಗೆ ತನ್ನ ಎಲ್ಲಾ ಉಳಿತಾಯದ ಹಣವನ್ನು ಕೊಟ್ಟು ಈ ಲೋಕದಿಂದ ಹೊರಟು ಹೋದರು ನಟರ ರಂಗನಾಥ ಅವರು ಪತ್ನಿ ಇಲ್ಲದ ಈ ಪ್ರಪಂಚ ಶೂನ್ಯ ಎಂದು ಭಾವಿಸಿದ ನಟ ಪ್ರೀತಿ ಎಷ್ಟು ಗಾಳವಾದ ಪ್ರೀತಿ ಅಲ್ವಾ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ತಿಳಿಸಿ.

Leave a Reply

Your email address will not be published. Required fields are marked *