ನಮಸ್ತೆ ಪ್ರಿಯ ಓದುಗರೇ, ಕೆಲವೊಂದು ವಿಷಯ ಯಾವ ರೀತಿ ಇರುತ್ತವೆ ಎಂದರೆ ತಮ್ಮಲ್ಲಿ ತಾವು ತುಂಬಾನೇ ಶಕ್ತಿಶಾಲಿ ಹಾಗೂ ತುಂಬಾನೇ ವಿಶೇಷವಾಗಿ ಇರುತ್ತವೆ. ಬದಲಿಗೆ ನಮ್ಮ ತಂತ್ರ ಶಾಸ್ತ್ರದಲ್ಲಿ ಸಹ ಇದರ ಬಗ್ಗೆ ತಿಳಿಸಿದ್ದಾರೆ. ಹಾಗಾಗಿ ತುಂಬಾನೇ ಕಡಿಮೆ ಜನರಿಗೆ ಈ ವಿಷಯಗಳು ಗೊತ್ತಿವೆ. ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಎಲ್ಲಾ ಮನಸ್ಸಿನ ಇಚ್ಚೆಗಳು ಪೂರ್ತಿ ಮಾಡುವುದರ ಜೊತೆಗೆ ನಿಮ್ಮ ಎಲ್ಲಾ ರೀತಿಯ ಹಣದ ಸಮಸ್ಯೆಗಳನ್ನು ದೂರ ಮಾಡುವ ಉಪಾಯವನ್ನು ನೋಡೋಣ ಸ್ನೇಹಿತರೆ. ಇಲ್ಲಿ ತುಂಬಾ ಜನರ ಮನಸ್ಸಿನಲ್ಲಿ ಯಾವ ರೀತಿಯ ಸಮಸ್ಯೆಗಳು ಇರುತ್ತವೆ ಎಂದರೆ ಇವರು ಬಯಸಿದ್ದು ನೆರವೇ ರೋದೆ ಇಲ್ಲ ಒಂದುವೇಳೆ ಹಣದ ಸಮಸ್ಯೆಗಳು, ಸಾಲದ ಸಮಸ್ಯೆಗಳು ಇದ್ರೆ ಇವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತವೆ. ಹಿರಿಯರ ಆಶೀರ್ವಾದ ಯಾರ ಮೇಲೆ ಇರೋದೀಲ್ವೋ ಅಂತ ವ್ಯಕ್ತಿಗಳಿಗೆ ತಮ್ಮ ಮನಸ್ಸಿನ ಇಚ್ಛೆಗಳನ್ನು ಪೂರ್ತಿ ಪ್ರಮಾಣದಲ್ಲಿ ಪೂರ್ತಿ ಆಗೋದೇ ಇಲ್ಲ. ಜೊತೆಗೆ ಧನ ಸಂಪತ್ತಿನ ಪ್ರಾಪ್ತಿ ಕೂಡ ಆಗೋದಿಲ್ಲ. ರಾಹು ಕೇತು ಗ್ರಹಗಳು ಎಲ್ಲಾ ಗ್ರಹಗಳಿಗಿಂತ ಕ್ರೂರ ಆಗಿರುತ್ತವೆ. ಆದ್ರೆ ಈ ವಿಷ್ಯ ತುಂಬಾ ಕಡಿಮೆ ಜನಕ್ಕೆ ಗೊತ್ತಿದೆ. ಯಾರಿಗಾದರೂ ಅಚಾನಕ್ಕಾಗಿ ಧನ ಆಹ್ವಾನ ಆದರೆ, ಇವರಿಗೆ ರಾಹು ಕೇತುಗಳ ಅನುಗ್ರಹ ಚೆನ್ನಾಗಿರುತ್ತದೆ ಎಂದರ್ಥ. ಯಾವ ವ್ಯಕ್ತಿಯ ಜೀವನದಲ್ಲಿ ರಾಹು ಕೇತು ಗ್ರಹಗಳು ತುಂಬಾ ಶಕ್ತಿಶಾಲಿ ಆಗಿರುತ್ತವೋ ಇಂಥ ವ್ಯಕ್ತಿಗಳಲ್ಲಿ ಮಾಯಾವಿ ಶಕ್ತಿಗಳೂ ಇರುತ್ತವೆ.

ಇಂದಿನ ಲೇಖನದಲ್ಲಿ ನಾವು ತಿಳಿಸುವ ಚಿಕ್ಕ ಉಪಾಯದಿಂದ ನಿಮಗೆ ಹಿರಿಯರ ಆಶೀರ್ವಾದ ದ ಜೊತೆಗೆ ರಾಹು ಕೇತು ಗ್ರಹಗಳು ಶಕ್ತಿಶಾಲಿ ಆಗುತ್ತವೆ. ಹಾಗಾಗಿ ಇಲ್ಲಿಂದಲೇ ಧನ ಪ್ರಾಪ್ತಿ ಯೋಗ ಕೂಡ ನಿರ್ಮಾಣ ಆಗುತ್ತದೆ. ಯಾವ ವ್ಯಕ್ತಿಯ ಜೀವನದಲ್ಲಿ ರಾಹು ಕೇತು ಗ್ರಹಗಳು ದುರ್ಬಲವಾಗಿ ಇರುತ್ತವೋ ಅಂಥವರಿಗೇ ಶತ್ರುಗಳೂ ಹೆಚ್ಚಾಗುತ್ತಾ ಹೋಗುತ್ತಾರೆ. ಇವ್ರಿಗೆ ಹಣದ ಮಾರ್ಗ ಕೂಡ ಸಿಕ್ತಾ ಇರೋದಿಲ್ಲ. ಅಂದ್ರೆ ಇಂಥವರು ಎಷ್ಟೇ ಕಷ್ಟ ಪಟ್ಟು ಕೆಲಸ ಕಾರ್ಯಗಳನ್ನು ಮಾಡಿದರೂ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ತಾ ಇರೋದಿಲ್ಲ. ಬದಲಾಗಿ ಇವರ ಹಣ ಹೆಚ್ಚಾಗಿ ವ್ಯರ್ಥ ಆಗ್ತಾ ಇರುತ್ತದೆ. ಈ ಚಿಕ್ಕ ಪ್ರಯತ್ನವನ್ನು ಮಾಡಲು ನಿಮಗೆ ಬೇಕಾಗಿರುವುದು ಬಾವಿ. ಯಾವುದಾದರೂ ದೇವಸ್ಥಾನದಲ್ಲಿ ಬಾವಿ ಇದ್ದೆ ಇರುತ್ತದೆ. ಸೋಮವಾರ, ಬುಧವಾರ ಹಾಗೂ ಶನಿವಾರ ಈ ಒಂದು ಚಿಕ್ಕ ಪ್ರಯತ್ನ ಮಾಡಬಹುದು. ನಿಮಗೆ ಯಾವಾಗಲೂ ಚಿಂತೆ, ಭಯ, ದುಃಖ ಆಗ್ತಾ ಇದ್ರೆ ನಿಮ್ಮ ರಾಹು ಕೇತು ಗ್ರಹಗಳು ಕೆಟ್ಟದಾಗಿದೆ ಎಂತಲೇ ಅರ್ಥ. ಯಾರು ತಮ್ಮ ಜೀವನದಲ್ಲಿ ಎಂಥದೇ ಸಮಸ್ಯೆ ಬಂದರೂ ಹೆದರಿಸಿ ಮುನ್ನುಗ್ಗುತ್ತ ಹೋಗುತ್ತಿದ್ದಾರೆ ಎಂದರೆ ಇವರಿಗೆ ಹಿರಿಯರ ಆಶೀರ್ವಾದ ಇದೆ ಎಂದರ್ಥ. ಹಾಗೆಯೇ ಆ ಹಿರಿಯರು ಇವರ ಸಂಕಟಗಳನ್ನು ಕಡಿಮೆ ಮಾಡ್ತಾ ಇರ್ತಾರೆ ಎಂದರ್ಥ.

ಈ ಪ್ರಯೋಗ ಮಾಡಲು ಒಂದು ನಾಣ್ಯ ಬೇಕಾಗುತ್ತದೆ ಸ್ನೇಹಿತರೆ. ಅದು ಐದು ಅಥವಾ ಹತ್ತು ರೂಪಾಯಿಗಳ ನಾಣ್ಯ ಆಗಿದ್ದರೂ ತೊಂದರೆ ಇಲ್ಲ. ಒಂದುವೇಳೆ ಈ ನಾಣ್ಯಗಳನ್ನು ಸ್ಪರ್ಶ ಮಾಡಿ ಈ ಪ್ರಯೋಗ ಮಾಡುತ್ತಿದ್ದರೆ ನಿಮ್ಮ ಆಭಾ ಮಂಡಲದಲ್ಲಿ ಸೇರಿಕೊಳ್ಳುತ್ತವೆ. ನೀವು ಸೋಮವಾರ ಈ ಪ್ರಯೋಗವನ್ನು ಮಾಡುವುದಾದರೆ ಭಾನುವಾರವೇ ನಿಮ್ಮ ತಲೆದಿಂಬಿನ ಕೆಳಗೆ ನಾಣ್ಯವನ್ನು ಇಟ್ಟುಕೊಳ್ಳಬೇಕು. ಬುಧವಾರ ಮಾಡುವುದಾದರೆ ಮಂಗಳವಾರ, ಶನಿವಾರ ಮಾಡುವುದಾದರೆ ಶುಕ್ರವಾರ ನಾಣ್ಯವನ್ನು ದಿಂಬಿನ ಕೆಳಗಡೆ ಇರಿಸಿ ಮಲಗಿಕೊಳ್ಳಿ. ಮುಂದಿನ ದಿನ ಆ ನಾಣ್ಯವನ್ನು ಬಾವಿಯ ಬಳಿ ತೇಗೆಕೊಂಡು ಹೋಗಿ, ಬಾವಿಯ ಬಳಿ ನಿಂತು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಜಪ ಮಾಡಬೇಕು. ಜಪ ಮಾಡಿ ಮುಗಿದ ಮೇಲೆ ಆ ನಾಣ್ಯವನ್ನು ಬಾಯಿಯ ಒಳಗಡೆ ಹಾಕಬೇಕು. ಇದರ ನಂತರ ನಿಮ್ಮ ಇಚ್ಛೆಗಳನ್ನು, ಆಸೆಗಳನ್ನು ದೇವರ ಬಳಿ ಬೇಡಿಕೊಂಡು ಮತ್ತೆ ಓಂ ನಮಃ ಶಿವಾಯ ಮಂತ್ರವನ್ನು 11ಬಾರಿ ಜಪ ಮಾಡಬೇಕು. ಕೇವಲ ಇಷ್ಟು ಮಾಡುವುದರಿಂದ ಹಿರಿಯರ ಆಶೀರ್ವಾದ ನಿಮ್ಮ ಜೊತೆಗಿದ್ದು, ರಾಹು ಕೇತು ಗ್ರಹಗಳು ಶಕ್ತಿಶಾಲಿ ಆಗುತ್ತವೆ. ಹೀಗೆ ನೀವೇನಾದರೂ 41 ಬಾರಿ ತಪ್ಪದೇ ತಿಳಿಸಿದ ಆಯಾ ದಿನಗಳಲ್ಲಿ ದಿನಪ್ರಥಿ ಮಾಡಿದರೆ ನಿಮ್ಮ ರಾಹು ಕೇತುಗಳು ಶಕ್ತಿಶಾಲಿ ಆಗಿ ಧನ ಸಂಪತ್ತು ಹೆಚ್ಚುತ್ತಾ ಹೋಗುವುದು. ಈ ಮಾಹಿತಿ ಇಷ್ಟ ಆಗಿದ್ದರೆ, ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *