ಮನೆಯಲ್ಲಿ ಪ್ರತಿದಿನವೂ ದೇವರ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಅಶಾಂತಿಯ ವಾತಾವರ ನಿವಾರಣೆಯಾಗುತ್ತದೆ, ಅದರಲ್ಲೂ ದೇವರ ಮುಂದೆ ಎಣ್ಣೆ ದೀಪವನ್ನು ಅಥವಾ ತುಪ್ಪದ ದೀಪವನ್ನು ಹಚ್ಚುವುದು ಶ್ರೇಷ್ಠ ಎಂಬುದಾಗಿ ಅಗ್ನಿ ಪುರಾಣದಲ್ಲಿ ಹೇಳಲಾಗುತ್ತದೆ.

ಮನೆಯಲ್ಲಿ ಎಲ್ಲ ಕೋಣೆಗಳಲ್ಲಿ ದೀಪವನ್ನು ಹಚ್ಚಲು ಸಾಧ್ಯವಾಗದಿದ್ದರೆ ದೇವರ ಕೋಣೆಯಲ್ಲಿ ಅಥವಾ ದೇವರ ಫೋಟೋ, ಮೂರ್ತಿಯ ಮುಂದೆ ಹಚ್ಚುವುದರಿಂದ ಮನೆಯಲ್ಲಿ ಶಾತಿಯ ವಾತಾವರಣ ನೆಲೆಸುತ್ತದೆ, ಮನೆಯಲ್ಲಿ ಯಾವುದೇ ಕಲಹಗಳು ಆಗುವುದಿಲ್ಲ, ಮನೆಯಲ್ಲಿನ ಕೆಟ್ಟ ಶಕ್ತಿಗಳು ನಿವಾರಣೆಯಾಗುತ್ತವೆ.

ಸೂರ್ಯದೇವನ ಮುಂದೆ ದೀಪವನ್ನು ಹಚ್ಚಿ ಪ್ರಾರ್ಥಿಸಿದರೆ ಸರ್ವ ರೋಗಗಳು ನಿವಾರಣೆಯಾಗುತ್ತವೆ ಅನ್ನೋ ನಂಬಿಕೆ ಹಿಂದಿನಿಂದಲೂ ಇದೆ. ತುಪ್ಪದ ದೀಪ ಅತಿ ಶ್ರೇಷ್ಠವಾದದ್ದು ಹಾಗಾಗಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನೆಗಟಿವ್ ಎನರ್ಜಿ ನಿವಾರಣೆಯಾಗಿ ಮನೆಯ ತುಂಬ ಪಾಸಿಟಿವ್ ಎನರ್ಜಿಯನ್ನು ಪಡೆಯಬಹುದು.

ದೇವರಮುಂದೆ ದೀಪವನ್ನು ಹಚ್ಚಿ ಪ್ರಾರ್ಥಿಸುವುದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಲಭಿಸುತ್ತದೆ ಹಾಗು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ, ಅಷ್ಟೇ ಅಲ್ಲದೆ ಯಾವುದೇ ಭಯ ಇರೋದಿಲ್ಲ ಮನೆಯಲ್ಲಿ ಲವಲವಿಕೆಯ ವಾತಾವರಣ ನಿರ್ಮಾಣವಾಗುತ್ತದೆ.

Leave a Reply

Your email address will not be published. Required fields are marked *