ಒಳ್ಳೆಯ ಊಟ ಮಾಡಿದ ಮೇಲೆ ಒಂದು ದೊಡ್ಡ ಲೋಟ ನೀರು ಕುಡಿದು ಬಿಟ್ಟರೆ ಅದು ಒಂಥರಾ ತೃಪ್ತಿ ಅಂದುಕೊಳ್ಳುತ್ತೇವೆ ನಾವು. ವಾಸ್ತವವಾಗಿ ಒಂದು ಅಭ್ಯಾಸದಿಂದ ಕೆಲವು ಜೀರ್ಣಕ್ರಿಯೆ ಗಳು ತೊಂದರೆಗಳು ಹಾಗೆ ರಕ್ತದಲ್ಲಿ ಥಟ್ಟನೆ ಸಕ್ಕರೆಯ ಮಟ್ಟ ಏ ರಲು ಕಾರಣವಾಗುತ್ತದೆ ಆಯುರ್ವೇದದ ಪ್ರಕಾರ ನಮ್ಮ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಲು ಅಗ್ನಿ ಕಾರಣವಾಗಿದೆ.

ಹೊಟ್ಟೆಯಲ್ಲಿ ಹಸಿವನ್ನು ಮೂಡಿಸಲು ಆಹಾರವನ್ನು ನೀಡಲು ಸೂಚಿಸುವುದು ಅಗ್ನಿಗೆ ಜೀರ್ಣಕ್ರಿಯೆ ಮೂಲಕ ಶಕ್ತಿಯನ್ನು ಒದಗಿಸುವುದು ಅಗ್ನಿ ಆಗಿರುತ್ತದೆ ಊಟದ ಸಮಯ ದಾಲ್ಲಿ ನೀರನ್ನು ಕುಡಿಯುವುದರ ಮೂಲಕ ಅಗ್ನಿಯನ್ನು ನಂದಿಸಿ ದಂತಾಗುತ್ತದೆ ಹಾಗೂ ಪ್ರಾಬಲ್ಯವನ್ನು ಕಡಿಮೆ ಮಾಡಿದಂಗೆ ಆಗುತ್ತದೆ ಅನ್ನುವುದೇ ಆಯುರ್ವೇದ. ಹಾಗಿದ್ದರೆ ಬನ್ನಿ ಊಟ ಆಗಿದ ತಕ್ಷಣ ನೀರು ಕುಡಿದರೆ ಏನೆಲ್ಲ ಪ್ರಾಬ್ಲಂಸ್ ಆಗುತ್ತದೆ ಅಂತ ತಿಳಿದುಕೊಳ್ಳೋಣ. ಊಟದ ತಕ್ಷಣ ನೀರನ್ನು ಕುಡಿಯುವುದರ ಮೂಲಕ ಅಗ್ನಿಯ ಪ್ರಾಬಲ್ಯವನ್ನು ಕಡಿಮೆಗೊಳಿಸುವುದು ರಿಂದ ಅಗ್ನಿಗೆ ಆಹಾರವನ್ನು ಪೂರ್ಣವಾಗಿ ಜೀರ್ಣಿಸಲು ಸಾಧ್ಯವಾಗುವುದಿಲ್ಲ.

ಹೀಗೆ ಅರ್ಧ ಜೀರ್ಣವಾದ ಆಹಾರದಿಂದ ವಾಯು ಹೆಚ್ಚು ಬೇಗನೆ ಉತ್ಪತ್ತಿ ಆಗುತ್ತದೆ. ಇದು ಹೊಟ್ಟೆಯ ಒಬ್ಬರಿಕೆಗೆ ಕಾರಣವಾಗುತ್ತದೆ. ಇನ್ನು ಹೊಟ್ಟೆಯಿಂದ ಕರುಳಿಗೆ ಆಹಾರವನ್ನು ದಾವಿಸಬೇಕಾದರೆ ಸಾಕಷ್ಟು ಜೀರ್ಣ ಗೊಂಡಿರಬೇಕು ಆದರೆ ಅಗತ್ಯವಿರುವಷ್ಟು ಜೀರ್ಣವಾಗದೇ ಇರುವ ಆಹಾರ ಕರುಳುಗಳಲ್ಲಿ ಚಲಿಸಲು ಬಹಳನೇ ಕಷ್ಟ ಪಡಬೇಕಾಗುತ್ತದೆ. ಇದರಿಂದಲೇ ಮಲಬದ್ಧತೆಗೆ ಕಾರಣವಾಗುವುದು ಇನ್ನು ಊಟದ ಬಳಿಕ ನೀರನ್ನು ಕುಡಿದರೆ ಜಠರದ ರಸ ತಿಳಿಯಾಗುತ್ತದೆ. ಪರಿಣಾಮವಾಗಿ ಆಹಾರ ಜೀರ್ಣ ಕೊಳ್ಳಲು ಹೆಚ್ಚು ಹೊತ್ತು ಹೊಟ್ಟೆಯಲ್ಲಿ ಇರಬೇಕಾಗುತ್ತದೆ. ಅಂದರೆ ಅಗತ್ಯವಿರುವಷ್ಟು ಜೀರ್ಣಕ್ರಿಯೆ ಮುಗಿಸಬೇಕಾದರೆ ಇನ್ನಷ್ಟು ಜಟರ ರಸವನ್ನು ಸ್ರವಿಸುವುದು ಅನಿವಾರ್ಯವಾಗುತ್ತದೆ. ಪರಿಣಾಮವಾಗಿ ಆಮ್ಲಿಯತೆ ಹೆಚ್ಚುತ್ತದೆ. ಇನ್ನು ಈ ಅಭ್ಯಾಸದಿಂದ ದೊಡ್ಡದಾಗುವ ತೊಂದರೆ ಎಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ತಟ್ಟನೆ ಏರುವುದು.

Leave a Reply

Your email address will not be published. Required fields are marked *