ನಿಮಗೆ ಹೈಬ್ರಿಡ್ ಕೊತ್ತಂಬರಿ ಸೊಪ್ಪು, ನಾಟಿ, ಕೊತ್ತಂಬರಿ ಸೊಪ್ಪು ಬಳಸಿ ಗೊತ್ತಿರಬಹುದು ಎಂದಾದರೂ ಇದಕ್ಕೆ ಪರ್ಯಾಯವಾಗಿ ಕಾಡು ಕೊತ್ತಂಬರಿ ಸೊಪ್ಪು ಬಳಸಿದ್ದೀರಾ? ಇದಕ್ಕೆ ಹಳ್ಳಿಗಳಲ್ಲಿ ಈ ಸೊಪ್ಪನ್ನು ಯಾರು ಬೆಳೆಯುವುದು ಬೇಡ. ಅದೇ ನೆಲದಲ್ಲಿ ಬೆಳೆದಿರುತ್ತದೆ. ಇದು ಕೊತ್ತಂಬರಿ ಸೊಪ್ಪಿಗಿಂತಲು ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್ ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ. ಇದನ್ನು ಔಷಧೀಯ ಸಸ್ಯವಾಗಿ ಕೂಡ ಬಳಸಲಾಗುತ್ತದೆ. ನೀವು ಈ ಗಿಡ ಬೆಳೆಯಲು ಇಚ್ಛೆ ಪಡುವುದಾದರೆ ಯಾವುದೇ ಹೆಚ್ಚಿನ ಶ್ರಮವಿಲ್ಲ. ಅದೆ ಬೆಳೆಯಬಹುದು. ಒಂದು ಗಿಡ ವಿದ್ದರೆ ಸಾಕು. ತುಂಬಾ ಗಿಡಗಳಾಗುತ್ತವೆ. ಹಾಗಾದ್ರೆ ಈ ಕಾಡು ಕೊತ್ತಂಬರಿ ಸೊಪ್ಪಿನಲ್ಲಿ ಯಾವೆಲ್ಲ ಔಷಧಿಯ ಗುಣ ಗಳು ಅಡಗಿ ವೆ ಎಂಬುದನ್ನ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ.

ಈ ಕಾಡು ಕೊತ್ತಂಬರಿ ಸೊಪ್ಪಿನ ಎಲೆ ಯಿಂದ ತಯಾರಿಸಿದ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಅದರಲ್ಲಿ ವಿಟಮಿನ್ ಸಿ ಕೂಡ ಅಧಿಕವಿದ್ದು ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರ ಹಾಕುವುದಕ್ಕೆ ಸಹಕಾರಿ. ಇನ್ನು ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಕೂಡ ಸಹಕಾರಿಯಾಗಿದೆ. ಈ ಗಿಡಮೂಲಿಕೆಯಲ್ಲಿ ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಇನ್ನು ಕೆಲವರಿಗೆ ಬಾಯಿ ದುರ್ವಾಸ ನೆ ಬೀರುವ ಸಮಸ್ಯೆ ಇರುತ್ತದೆ. ಅದನ್ನು ಹೋಗಲಾಡಿಸಲು ಕೂಡ ಇದು ತುಂಬಾ ಸಹಕಾರಿ. ದಿನ ಬೆಳಿಗ್ಗೆ ಎದ್ದು. ಒಂದು ಎಸಳು ಜಗಿದರೆ ಸಾಕು, ಬಾಯಿ ದುರ್ವಾಸನೆ ಬೀರುವುದಿಲ್ಲ. ಇದರ ಸೊಪ್ಪು ತಿಂದಾಗ ಇದು ಬಾಯಿಯಲ್ಲಿರುವ ಸಲ್ಫರ್ ಅಂಶ ಹೋಗಲಾಡಿಸುವುದರಿಂದ ಬಾಯಿ ದುರ್ವಾಸನೆ ಬೀರುವುದಿಲ್ಲ. ಇನ್ನು ಇದರಲ್ಲಿ ಫ್ಲೇವನೋಯ್ಡ್ಸ್ ಟ್ರೋಫಿಕ್ ಆಮ್ಲ ಇದು. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಅಷ್ಟೇ ಅಲ್ಲದೆ ವಯಸ್ಸು 60 ದಾಟುತ್ತಿದ್ದಂತೆ ಕೆಲವರಿಗೆ ಅಲ್ಜೀಮರ್ಸ್ ಪಾರ್ಕಿನ್ಸನ್ ಸಮಸ್ಯೆ ಬರುವುದು. ಇವುಗಳು ಬಾರದಂತೆ ತಡೆಯುವಲ್ಲಿ ಇದು ಸಹಕಾರಿಯಾಗಿದೆ. ಇದು ಮೆದುಳಿನ ನರದಲ್ಲಿರುವ ಉರಿಯೂತ ಕಡಿಮೆ ಮಾಡುವಲ್ಲಿ ಕೂಡ ಸಹಕಾರಿಯಾಗಿದೆ. ಅಷ್ಟೇ ಅಲ್ಲದೇ ವಿಟಮಿನ್ ಸಿ ಆಂಟಿಆಕ್ಸಿಡೆಂಟ್ ಆಗಿ ವರ್ತಿಸಿ ಮೆದುಳಿನ ನರಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ ಹಾಗೂ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ಇನ್ನು ಈ ಕಾಡು ಕೊತ್ತಂಬರಿ ಸೊಪ್ಪು ಬಳಸಿ ಅಸ್ತಮ ಕಾಯಿಲೆ ಉಲ್ಬಣವಾಗುವುದನ್ನು ತಡೆಗಟ್ಟಬಹುದು. ಇದನ್ನು ತುಳಸಿ ಲೆಮನ್‌ಗ್ರಾಸ್, ಮೊಗ್ಗು ಇವುಗಳ ಜೊತೆ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು. ಇನ್ನು ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಇದನ್ನು ಗಿಡಮೂಲಿಕೆಯಾಗಿ ಬಳಸುವುದು ಮನೆಮದ್ದುಗಳಿವೆ. ಇದು ಮುಟ್ಟಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ.

ಇನ್ನು ಈ ಸೊಪ್ಪಿಗೆ ಅನೇಕ ಕಾಯಿಲೆಗಳನ್ನ ಗುಣಪಡಿಸುವ ಶಕ್ತಿ ಇದೆ. ಹೊಟ್ಟೆಯಲ್ಲಿರುವ ಹುಳುಗಳನ್ನು ಹೋಗಲಾಡಿಸುವ ಗುಣ ಈ ಸೊಪ್ಪಿನಲ್ಲಿದೆ. ಇನ್ನು ಇದರಲ್ಲಿರುವ ಫ್ಲೇವನಾಯ್ಡ್ಟೆಂಟ್ ಹಾಗು ಮಲೇರಿಯಾ ಮತ್ತಿತರ ಬ್ಯಾಕ್ಟಿರಿಯಾ ಸೋಂಕುಗಳ ವಿರುದ್ಧ ಹೋರಾಡಿ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಯಾರಿಗೆ ತುಂಬಾ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅವರು ಈ ಎಲೆಗಳನ್ನು ಬಳಸುವುದು ಒಳ್ಳೆಯದು. ಇದು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಉಂಟಾಗುವುದಿಲ್ಲ. ಈ ಮಾಹಿತಿ ನಿಮಗೆ ಇಷ್ಟವಾದ ಲ್ಲಿ ತಪ್ಪ ದೆ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *