ಕ್ಷಯ ರೋಗವು ಅಥವಾ ಟಿವಿ ಕಾಯಿಲೆ ಇದು ದೈಹಿಕ ಶಕ್ತಿಯನ್ನು ಕುಂದುವಂತೆ ಮಾಡಿ ದೇಹವನ್ನು ನಿಧಾನವಾಗಿ ಕೃಶಗೊಳಿಸುವ ಪ್ರಬಲವಾದ ರೋಗವಾಗಿದೆ.ದೇಹದಲ್ಲಿ ಕ್ಷಯವನ್ನು ಉಂಟುಮಾಡುವ ರೋಗಗಳು ಮೈಕ್ರೋಬ್ಯಾಕ್ಟಿರಿಯಮ್ ಜೀವಾಣುಗಳ ಕುಟುಂಬಕ್ಕೆ ಏರಿವೆ.

ಈ ರೋಗ ಜಾಸ್ತಿಯಾದಂತೆ ಜ್ವರ ಕೆಮ್ಮು ಸುಸ್ತು , ರಾತ್ರಿ ಬೆವರು ,ರಕ್ತ ಕಫ ಮತ್ತು ಶರೀರದ ಕೃಷತೆಯಂತಹ ಲಕ್ಷಣಗಳು ಕಂಡುಬರುತ್ತವೆ.ಈ ರೋಗದ ನಿವಾರಣೆಗೆ ಈ ಕೆಳಗಿನ ಉಪಚಾರಗಳನ್ನು ಮಾಡಿ.

ಶುದ್ಧ ಜೇನುತುಪ್ಪದಲ್ಲಿ ಬೆಣ್ಣೆಯನ್ನು ಸೇರಿಸಿ ಬೆಳಗ್ಗೆ ಸಾಯಂಕಾಲ ಸೇವಿಸಿ. ನೀರಿನಲ್ಲಿ 50 ಗ್ರಾಂ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಎರಡು ಸಲ ಕುಡಿಯಿರಿ. 3 ಗ್ರಾಂ ಲವಂಗದ ಚೂರ್ಣವನ್ನು ಜೇನುತುಪ್ಪದಲ್ಲಿ ಸೇರಿಸಿ ಕೆಲವು ದಿನಗಳವರೆಗೆ ನಿಯಮಿತವಾಗಿ ಸೇವಿಸಿ.ಅರ್ಧ ಚಮಚ ಬೆಳ್ಳುಳ್ಳಿಯ ರಸದಲ್ಲಿ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ದಿನದಲ್ಲಿ ನಾಲ್ಕು ಸಲ ಸೇವಿಸಿ.

ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ,ಜೇನುತುಪ್ಪದಲ್ಲಿ ಸಿದ್ದಪಡಿಸಿದ ಸೇಬಿನ ಗುಳಂಬ ಮತ್ತು ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸಿ,ಪ್ರತಿನಿತ್ಯ ಸ್ವಲ್ಪ ಜೇನುತುಪ್ಪವನ್ನು ಸೇವಿಸುತ್ತಿದ್ದರೆ ಶ್ವಾಸಕೋಶಗಳು ಬಲಿಷ್ಠವಾಗುತ್ತವೆ,ರಕ್ತ ಶುದ್ಧಿಯಾಗುತ್ತದೆ,ಉಸಿರಾಟ ಮಂಡಲದ ರೋಗಗಳು ಆಕ್ರಮಣ ಮಾಡುವುದಿಲ್ಲ ಅಲ್ಲದೆ ಕ್ಷಯ ರೋಗಿಗಳು ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುತ್ತಾ ಬಂದರೆ ಅವರಲ್ಲಿ ಅಸಾಧಾರಣವಾದ ಸುಧಾರಣೆ ಕಂಡುಬರುತ್ತದೆ.

Leave a Reply

Your email address will not be published. Required fields are marked *