ಪ್ರತಿದಿನ ಸಿಹಿಕುಂಬಳಕಾಯಿ ಬೀಜಗಳನ್ನು ಜೇನುತುಪ್ಪದ ಜತೆ ಸೇವಿಸಿದರೆ ಮೂತ್ರದ ಸಮಸ್ಯೆ ಗುಣವಾಗುತ್ತದೆ. ಸಿಹಿಕುಂಬಳಕಾಯಿಗೆ ಕೊಬ್ಬರಿ ಎಣ್ಣೆ ಮತ್ತು ಜೇನುತುಪ್ಪ ಬೆರೆಸಿ ತುಟಿಗಳಿಗೆ ಹಚ್ಚಿದರೆ ಒಣಗಿದ ತುಟಿ ಮೃದುವಾಗುತ್ತದೆ.

ಸಿಹಿಕುಂಬಳಕಾಯಿ ಬೀಜಗಳನ್ನು ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ. ನಿಯಮಿತವಾಗಿ ಸಿಹಿಕುಂಬಳಕಾಯಿ ಸೇವಿಸಿದರೆ ಕಣ್ಣಿನ ಆರೋಗ್ಯ ಹೆಚ್ಚುತ್ತದೆ.

ಹಸುವಿನ ಹಾಲಿಗೆ ಸಿಹಿಕುಂಬಳಕಾಯಿ ಬೀಜದ ಪುಡಿ ಹಾಕಿ ರಾತ್ರಿ ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
ಸಿಹಿಕುಂಬಳಕಾಯಿಗೆ, ಮೊಸರು, ಕೊಬ್ಬರಿ ಎಣ್ಣೆ ಸೇರಿಸಿ ಪೇಸ್ಟ್‌ ಮಾಡಿ ತಲೆಗೆ ಪ್ಯಾಕ್‌ ಹಾಕಿ 15 ನಿಮಿಷ ಬಿಟ್ಟು ನಂತರ ತೊಳೆದರೆ ಕೂದಲು ಮೃದುವಾಗುತ್ತದೆ.

ಮುಖದ ಕಾಂತಿ ಹೆಚ್ಚಿಸಲು, ಸಿಹಿಕುಂಬಳಕಾಯಿಗೆ ಸಕ್ಕರೆ, ಜೇನುತುಪ್ಪ ಮತ್ತು ಮೊಸರು ಸೇರಿಸಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪ ಮಾಡಿ 10 ನಿಮಿಷ ಬಿಟ್ಟು ಮುಖ ತೊಳೆಯಬೇಕು.

ದೇಹದ ಕೊಬ್ಬಿನಂಶ ಕಡಿಮೆಯಾಗಲು ಪ್ರತಿ ದಿನ 2 ಚಮಚ ಹುರಿದ ಸಿಹಿ ಕುಂಬಳಕಾಯಿ ಬೀಜ ಸೇವಿಸಬೇಕು.ತುಂಬಾ ದಿನದಿಂದ ಗಾಯ ಮಾಯದಿದ್ದರೆ ಸಿಹಿಕುಂಬಳಕಾಯಿ ರಸ ಪ್ರತಿ ದಿನ ಸೇವಿಸಿದರೆ ಗಾಯ ಗುಣವಾಗುತ್ತದೆ.

Leave a Reply

Your email address will not be published. Required fields are marked *