ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆ ಸಮಸ್ಯೆಯಿಂದ ತುಂಬಾ ಜನರು ಬಳಲುತ್ತಿದ್ದಾರೆ ಕೈ ಕಾಲುಗಳು ಜೋಮು ಹಿಡಿಯುವುದು, ಇದ್ದಕಿದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನೋಡಿದಾಗ ಹೃದಯ ಬಡಿತ ಹೆಚ್ಚಾಗುವುದು, ಚಿಕ್ಕ ಕೆಲಸ ಮಾಡಿದರು ಸುಸ್ತು ಆಗುವುದು ಭಾರ ರಹಿತ ವಸ್ತುಗಳನ್ನು ಎತ್ತಲು ಸಹ ಆಗುವುದಿಲ್ಲ ಇದು ನರ ಬಲಹೀನತೆಯ ಕೆಲವು ಲಕ್ಷಣಗಳು.

ಮನುಷ್ಯನ ಚಾಲನೆವಲನೆಗೆ ಬೆನ್ನು ಎಲುಬು ಹಾಗು ಮೆದುಳು ಎಷ್ಟು ಮುಖ್ಯನೋ ನರಗಳು ಸಹ ಅಷ್ಟೇ ಮುಖ್ಯವಾದದ್ದು, ಮೆದುಳಿನಿಂದ ಬರುವ ಸಂಕೇತಗಳನ್ನು ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಆಗುತ್ತದೆ, ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ ಆಗ ಸ್ಪರ್ಶ ಇಲ್ಲದಂತೆ ಆಗುವುದು, ಕೈ ಕಾಲುಗಳ ಚಾಲನೆ ಹೆಚ್ಚಾಗಿ ಇಲ್ಲದಂತೆ ಆಗುವುದು, ನಡೆಯದಂತೆ ಆಗುವುದು ಇವು ನರ ಸಂಭಂದಿ ರೋಗದ ಲಕ್ಷಣಗಳು.

ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆತಿರುವುದಿಲ್ಲ ಅಂತವರು ಕ್ರಮ ತಪ್ಪದೆ ವ್ಯಾಯಾಮ ಹಾಗು ಪ್ರಾಣಾವ್ಯಮ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ, ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ತಮವಾಗುತ್ತದೆ, ಸೂರ್ಯನ ಕಿರಣಗಳಲ್ಲಿ ಸಿಗುವ ವಿಟಮಿನ್ ಡಿ ಯನ್ನು ಪಡೆಯಲು ಮುಂಜಾನೆಯ ಸ್ವಲ್ಪ ಬಿಸಿನಲ್ಲಿ ಓಡಾಡಿ.

ಸಾದಾರಣವಾಗಿ ಈ ಸಮಸ್ಯೆ ಸಕ್ಕರೆ ಕಾಯಿಲೆಯವರಲ್ಲಿ ಧೂಮಪಾನ ಮಧ್ಯಪಾನ ಸೇವನೆ ಮಾಡುವವರಲ್ಲಿ ಪೂರ್ತಿ ಸಸ್ಯಾಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳ ದೌರ್ಬಲ್ಯವನ್ನು ಕಾಣಬಹುದು.

ಅಶ್ವಗಂಧ ಪುಡಿಯ ಜೊತೆ ಸ್ವಲ್ಪ ಬಿಳಿಕಲ್ಲು ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು, ನಂತರ ಒಂದು ಗ್ಲಾಸ್ ಬೆಚ್ಚಗಿನ ಹಾಲಿನಲ್ಲಿ ಒಂದು ಸ್ಪೂನ್ ಈ ಮಿಶ್ರಣವನ್ನು ಹಾಕಿ ಸೇವಿಸಬೇಕು, ಹೀಗೆ ಪ್ರತಿದಿ ಎರಡು ಬಾರಿಯಂತೆ ಎರಡು ತಿಂಗಳು ಕ್ರಮತಪ್ಪದೆ ಸೇವಿಸಿದರೆ ನರಗಳು ಬಲವಾಗುವ ಜೊತೆಯಲ್ಲಿ ಆರೋಗ್ಯಕರವಾಗಿ ಸಹ ಇರಬಹುದು.

Leave a Reply

Your email address will not be published. Required fields are marked *