ಒಂದು ಒಂದು ದೇವಸ್ಥಾನದಲ್ಲಿ ಒಂದು ಒಂದು ವಿಶೇಷತೆ ಅನ್ನೋದು ಇರುತ್ತೆ ಹಾಗೆ ಈ ಆಂಜನೇಯ ದೇವಸ್ಥಾನದಲ್ಲೂ ಇಂದು ವಿಶೇಷತೆ ಇದೆ ಅದೇ ಸರ್ಕಾರೀ ಕೆಲಸದ ಭಾಗ್ಯ.
ಬೆಳಗಾವಿ ಜಿಲ್ಲೆ ಕವಟಗೊಪ್ಪ ಗ್ರಾಮದಲ್ಲಿರುವ ಈ ಆಂಜನೇಯನಿಗೆ ನೀವು ಸರ್ಕಾರಿ ನೌಕರಿ ಬೇಕು ಅಂತ ಬೇಡಿಕೊಂಡರೆ ಸಾಕಂತೆ ಸಾಕ್ಷಾತ್ ಹನುಮಂತನೇ ನಿಮಗೆ ಸರ್ಕಾರಿ ನೌಕರಿ ಭಾಗ್ಯ ಕರುಣಿಸುತ್ತಾನಂತೆ.
ಹೀಗಂತ ನಾವು ಹೇಳ್ತಾ ಇಲ್ಲ ಸ್ವಾಮೀ ಇದು ಆ ದೇವಸ್ಥಾನದ ಭಕ್ತಾದಿಗಳೇ ನಮಗೆ ತಿಳಿಸಿರುವುದು. ಸುಮಾರು ೧೦೦ ವರ್ಷಗಳ ಇತಿಹಾಸ ಇರೋ ಆಂಜನೇಯನ ದೇವಸ್ಥಾನಕ್ಕೆ ನಿತ್ಯ ಭಕ್ತಾದಿಗಳ ಹಿಂಡೇ ಬರುತ್ತಂತೆ, ಹೀಗೆ ಬರೋರಲ್ಲಿ ಮುಕ್ಕಾಲು ಜನ ಸರ್ಕಾರಿ ನೌಕರಿ ಬೇಕು ಅಂತಾ ಕೇಳಿಕೊಳ್ಳೋಕೆ ಅಂತಾನೆ ಬರ್ತಾರಂತೆ. ಇದುವರೆಗೂ ಬಂದೋರಿಗೆಲ್ಲ ನಮ್ಮ ಹನುಮಪ್ಪ ಸರ್ಕಾರಿ ನೌಕರಿ ಕೊಟ್ಟಿದ್ದಾನೆ ಅಂತಾರೆ ಅಲ್ಲಿಯ ಪೂಜಾರಪ್ಪ.
ದೇವರ ಮೇಲೆ ನಂಬಿಕೆ ಇಡಬೇಕು ಮತ್ತು ದೇವರ ಮೇಲೆ ಬಾರಾ ಹಾಕಿ ನಿಮ್ಮ ಕೆಲಸಗಳನ್ನು ಮಾಡಿಕೊಂಡ್ರೆ ದೇವರು ನಿಮಗೆ ಒಳ್ಳೇದನ್ನು ಮಾಡುತ್ತಾನೆ ಹಾಗೆ ನಿಮ್ಮ ಪರಿಶ್ರಮ ಎಷ್ಟು ಇರುತ್ತದೋ ಅಷ್ಟೇ ಪ್ರತಿಫಲ ಸಿಗುತ್ತದೆ.